ಕರ್ನಾಟಕ

karnataka

By

Published : Feb 12, 2020, 11:37 PM IST

ETV Bharat / jagte-raho

ಗುಂಡ್ಲುಪೇಟೆ ಹೊರವಲಯದಲ್ಲಿ ಲಾಟರಿ ಮಾರಾಟ: ಇಬ್ಬರ ಬಂಧನ

ಅಕ್ರಮವಾಗಿ ಕೇರಳ ಲಾಟರಿ ಟಿಕೆಟ್​ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗುಂಡ್ಲುಪೇಟೆ ಹೊರವಲಯದಲ್ಲಿ ಬಂಧಿಸಲಾಗಿದೆ.

Lottery sales on the outskirts of Gundlupete
ಇಬ್ಬರ ಬಂಧನ

ಚಾಮರಾಜನಗರ:ಅಕ್ರಮವಾಗಿ ಕೇರಳದ ಲಾಟರಿ ಟಿಕೆಟ್​ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗುಂಡ್ಲುಪೇಟೆ ಹೊರವಲಯದಲ್ಲಿ ಬಂಧಿಸಲಾಗಿದೆ.

ಚಾಮರಾಜನಗರದ ಸುಂದರ್ ಹಾಗೂ ನಂಜುಂಡಸ್ವಾಮಿ ಬಂಧಿತರು. ಕೇರಳ ಲಾಟರಿ ಟಿಕೆಟ್​ಗಳನ್ನು ತಂದು ಗುಂಡ್ಲುಪೇಟೆ ಹೊರವಲಯದಲ್ಲಿ ಪರಿಚಿತರಿಗೆ, ಖಾಯಂ ಗಿರಾಕಿಗಳಿಗೆ ಮಾರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಪೊಲೀಸರು ದಾಳಿ ನಡೆಸಿದ್ದರು.

ಬಂಧಿತರಿಂದ 350ಕ್ಕೂ ಹೆಚ್ಚು ಲಾಟರಿ ಟಿಕೆಟ್​​ಗಳು, 3 ಸಾವಿರ ನಗದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ‌. ಜಿಲ್ಲೆ ಕೇರಳದ ಗಡಿಗೆ ಹೊಂದಿಕೊಂಡಿರುವ ಪರಿಣಾಮ ಗಡಿ ಭಾಗದಲ್ಲಿ ಲಾಟರಿ ಮಾರಾಟ ದಂಧೆ ಅವ್ಯಾಹತವಾಗಿ ರೂಪುಗೊಂಡಿತ್ತು ಎಂಬುದು ತಿಳಿದು ಬಂದಿದೆ.

ಈಗ ಪೊಲೀಸರು ಕೂಲಿ ಕಾರ್ಮಿಕರ ಅನ್ನಕ್ಕೆ ಕಲ್ಲು ಹಾಕುವ ಖತರ್ನಾಕ್​ಗಳ ಹೆಡೆಮುರಿ ಕಟ್ಟಿದ್ದು, ಮತ್ತಷ್ಟು ಚುರುಕಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ABOUT THE AUTHOR

...view details