ಕರ್ನಾಟಕ

karnataka

ಅಕ್ರಮ ಜಾನುವಾರ ಸಾಗಾಟ: ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಬಳಿ ಈ ಘಟನೆ ನಡೆದಿದೆ. ಹಾವೇರಿಯಿಂದ ಬಳ್ಳಾರಿಗೆ ಸಾಗಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ವಾಹನ ತಡೆದು 14 ಜಾನುವಾರು ರಕ್ಷಿಸಿದ್ದಾರೆ.

By

Published : Aug 7, 2020, 5:38 AM IST

Published : Aug 7, 2020, 5:38 AM IST

illegal cattle trafficking
ಅಕ್ರಮ ಜಾನುವಾರ ಸಾಗಾಟ

ಹಾವೇರಿ:ಅಕ್ರಮವಾಗಿ ಕ್ಯಾಂಟರ್​ ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಸುದ್ದಿ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಬಳಿ ಈ ಘಟನೆ ನಡೆದಿದೆ. ಹಾವೇರಿಯಿಂದ ಬಳ್ಳಾರಿಗೆ ಸಾಗಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ವಾಹನ ತಡೆದು 14 ಜಾನುವಾರು ರಕ್ಷಿಸಿದ್ದಾರೆ.

ಹಾವೇರಿಯಲ್ಲಿ ಅಕ್ರಮ ಜಾನುವಾರ ಸಾಗಾಟ

ಕ್ಯಾಂಟರ್ ವಾಹನಲ್ಲಿ 14 ಜಾನುವಾರುಗಳನ್ನು ರಾತ್ರಿ ಸಮಯದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಸಾರ್ವಜನಿಕರು ವಾಹನದೊಂದಿಗೆ ಜಾನುವಾರುಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details