ಕರ್ನಾಟಕ

karnataka

ನಿಂತಿದ್ದ ಟ್ರಕ್​ಗೆ ಗುದ್ದಿದ ಕಾರು: ತಿರುಪತಿಯಿಂದ ಮರಳುತ್ತಿದ್ದ ಐವರ ದುರ್ಮರಣ

By

Published : Jan 7, 2021, 4:55 PM IST

Updated : Jan 7, 2021, 5:19 PM IST

ಆಂಧ್ರದ ತಿರುಪತಿಗೆ ಭೇಟಿ ನೀಡಿ ಹಿಂದಿರುವ ವೇಳೆ ನಿಂತಿದ್ದ ಟ್ರಕ್​ಗೆ ಕಾರು ಗುದ್ದಿ ಐವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Andhra Pradesh road accident
ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ

ಪ್ರಕಾಶಂ (ಆಂಧ್ರಪ್ರದೇಶ): ನಿಂತಿದ್ದ ಟ್ರಕ್​ಗೆ ಕಾರು ಗುದ್ದಿ ಐವರು ಸ್ಥಳದ್ಲಲೇ ಮೃತಪಟ್ಟಿರುವ ಹಾಗೂ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ

ಮೃತರನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ನಿವಾಸಿಗಳೆಂದು ಗುರುತಿಸಲಾಗಿದೆ. ತಿರುಪತಿಗೆ ಭೇಟಿ ನೀಡಿ ಹಿಂದಿರುವ ವೇಳೆ ಪ್ರಕಾಶಂ ಜಿಲ್ಲೆಯ ಮರ್ತೂರು ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: 10ನೇ ಕ್ಲಾಸ್​ ವಿದ್ಯಾರ್ಥಿನಿ ಅಪಹರಿಸಿ ಸಾಮೂಹಿಕ ಅತ್ಯಾಚಾರ, ಕೊಲೆಗೆ ಯತ್ನ

ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಪೂರ್ಣವಾಗಿ ನಜ್ಜು-ಗುಜ್ಜಾಗಿದ್ದ ಕಾರಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Last Updated : Jan 7, 2021, 5:19 PM IST

ABOUT THE AUTHOR

...view details