ಕರ್ನಾಟಕ

karnataka

ETV Bharat / jagte-raho

ವಿಷ ಬೆರಿಸಿದ ಬಿರಿಯಾನಿ ತಿಂದು ಕುಟುಂಬದ ನಾಲ್ವರು ಆತ್ಮಹತ್ಯೆ!

ತೆಲಂಗಾಣದ ಖಮ್ಮಂನಲ್ಲಿ ಎದೆ ನಡುಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

By

Published : Jun 29, 2019, 5:29 PM IST

ವಿಷ ಬೇರಿಸಿದ ಬಿರಿಯಾನಿ ತಿಂದು ಕುಟುಂಬದ ನಾಲ್ವರು ಆತ್ಮಹತ್ಯೆ

ಹೌದು, ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿ ರಾಂಪ್ರಸಾದ್​ ಮತ್ತು ಸುಚಿತ್ರಗೆ ಇಬ್ಬರು ಮಕ್ಕಳು. ರಾಂಪ್ರಸಾದ್ ಖಾಸಗಿ ಶಾಲೆಯಲ್ಲಿ ಈ ಹಿಂದೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆ ಕೆಲಸ ಬಿಟ್ಟ ಬಳಿಕ ಹೊಟ್ಟೆ ಪಾಡಿಗಾಗಿ ಗ್ರಾನೈಟ್​ ಕಂಪನಿಯಲ್ಲಿ ಸೂಪರ್​ವೈಸರ್​ ಆಗಿ ಕೆಲಸ ಮಾಡುತ್ತಿದ್ದರು.

ಗುರುವಾರ ರಾತ್ರಿ 10.30ಕ್ಕೆ ದಂಪತಿ ರಾಂಪ್ರಸಾದ್​, ಸುಚಿತ್ರ ಮತ್ತು ಇಬ್ಬರು ಹೆಣ್ಮಕ್ಕಳು ಬಿರಿಯಾನಿಯಲ್ಲಿ ವಿಷ ಬೇರಿಸಿ ಊಟ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ಬೆಳಗ್ಗೆ ನೆರೆಹೊರೆಯವರು ನೋಡಿದಾಗ ಆತ್ಮಹತ್ಯೆ ವಿಷಯ ಬೆಳಕಿಗೆ ಬಂದಿದೆ.

ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಕೈಗೊಂಡಿದ್ದರು. ಈ ನಾಲ್ವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಘಟನೆ ಕುರಿತು ಖಮ್ಮಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

.

ABOUT THE AUTHOR

...view details