ಕರ್ನಾಟಕ

karnataka

ETV Bharat / jagte-raho

ಮದುವೆಯಾದ 2ನೇ ದಿನವೆ ವಿಷಾದ... ತಂದೆ-ತಾಯಿ, ಅತ್ತೆ ಜೊತೆ ಮಸಣ ಸೇರಿದ ವರ!

ಆ ನವವಧುವಿನ ಬಾಳಲ್ಲಿ ವಿಧಿ ಆಟವಾಡಿದೆ. ಮದುವೆಯಾದ ಎರಡನೇ ದಿನವೇ ವಿಧಿ ಆ ವಧುವಿನ ಗಂಡನನ್ನು ಬಲಿ ತೆಗೆದುಕೊಂಡಿದೆ. ಈಗ ವಧುವಿನ ಬಾಳು ಕಣ್ಣೀರಲ್ಲೇ ಕಳೆಯುವಂತಾಗಿದೆ.

By

Published : Jun 22, 2019, 2:13 PM IST

ಮದುವೆಯಾದ 2ನೇ ದಿನವೇ ವಿಷಾದ

ಅವರಿಬ್ಬರೂ ಹಿರಿಯರ ಆಶೀರ್ವಾದ ಪಡೆದು ಸಪ್ತಪದಿ ತುಳಿದು ನವ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ, ಆ ವಿಧಿಗೆ ಇವರಿಬ್ಬರು ಒಂದಾಗಿ ಬಾಳುವುದು ಇಷ್ಟ ಇಲ್ಲವಂತೆ ಕಾಣಿಸುತ್ತೆ. ಮದುವೆಯಾದ ಎರಡನೇ ದಿನಕ್ಕೆ ನವವಿವಾಹಿತನ ಪ್ರಾಣ ಬಲಿ ತೆಗೆದುಕೊಂಡಿದೆ.

ವರ ಬಿಂದಂ ಪ್ರವೀಣ್

ತೆಲಂಗಾಣದ ಯಾದಾದ್ರಿ ಜಿಲ್ಲೆಯ ಮುಕ್ತಾಪೂರ್​ ಗ್ರಾಮದ ಬಿಂದಂ ಸಾಯಿಲು (55), ಗಂಗಮ್ಮ (50) ದಂಪತಿ ತನ್ನ ಮಗ ಬಿಂದಂ ಪ್ರವೀಣ್​ಗೆ (22) ಈ ತಿಂಗಳು 19ರಂದು ರೇವಣಪಲ್ಲಿ ಗ್ರಾಮದ ಯುವತಿ ಜೊತೆ ಮದುವೆ ಮಾಡಿದ್ದರು. ಶುಕ್ರವಾರ ವಧುವಿನ ಮನೆಯಲ್ಲಿ ಶುಭಕಾರ್ಯ ಮುಗಿಸಿಕೊಂಡು ವರನ ಕುಟುಂಬಸ್ಥರು ತಮ್ಮ ಸ್ವಗ್ರಾಮಕ್ಕೆ ಮರಳಿದ್ದಾರೆ.

ಬಿಂದಂ ಸಾಯಿಲು, ಗಂಗಮ್ಮ

ಮನೆಯ ಮುಂದೆ ಮದುವೆ ಅಲಂಕಾರಕ್ಕಾಗಿ ಲೈಟ್​ಗಳನ್ನು ಹಾಕಲಾಗಿತ್ತು. ಪಕ್ಕಕ್ಕೆ ಕಬ್ಬಿಣದ ರಾಡ್​ಗೆ ಲೈಟ್​​ಗಳನ್ನ ಸುತ್ತಲಾಗಿತ್ತು. ಆ ಕಬ್ಬಿಣದ ರಾಡ್​ಗೆ ಬಟ್ಟೆ ಒಣಗಿಸಲು ತಂತಿಯನ್ನೂ ಸಹ ಕಟ್ಟಲಾಗಿತ್ತು. ಬಟ್ಟೆ ತೆಗೆಯಲು ವರನ ತಾಯಿ ಗಂಗಮ್ಮ ಹೋದಾಗ ಕರೆಂಟ್​ ಶಾಕ್​ ಹೊಡೆದಿದೆ. ಇದನ್ನು ನೋಡಿದ ವರ ಪ್ರವೀಣ್​ ತಾಯಿಯನ್ನು ಕಾಪಾಡಲು ಹೋದಾಗ ಆತನಿಗೂ ಶಾಕ್​ ಹೊಡೆದಿದೆ. ಮಗನನ್ನು ಬಚಾವ್​ ಮಾಡಲು ತಂದೆ ಹೋದಾಗ ಮತ್ತು ಅಣ್ಣನನ್ನು ಕಾಪಾಡಲು ತಂಗಿ ಹೋದಾಗ ಶಾಕ್​ ಹೊಡೆದಿದೆ. ಹೀಗೆ ಒಬ್ಬರಿಗೊಬ್ಬರು ಕಾಪಾಡಲು ಹೋಗಿ ಸಾವಿನ ಕದ ತಟ್ಟಿದ್ದಾರೆ.

ಕೂಡಲೇ ನಾಲ್ವರನ್ನು ಹೈದರಾಬಾದ್​ನಲ್ಲಿರುವ ಪ್ರಮುಖ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟೊತ್ತಿಗಾಗಲೇ ವರನ ಜೊತೆ ಅಪ್ಪ, ಅಮ್ಮ, ಸೋದರತ್ತೆಯೂ ಮೃತಪಟ್ಟಿದ್ದರು. ಇನ್ನು ಈ ಘಟನೆಯಿಂದ ಇಬ್ಬರೂ ಗಾಯಗೊಂಡಿದ್ದು, ನೋವಿನಿಂದ ನರಳುತ್ತಿದ್ದಾರೆ. ಮದುವೆ ಮನೆಯಲ್ಲಿ ನಡೆದ ವಿಷಾದದಿಂದ ಈಗ ಆ ಗ್ರಾಮದಲ್ಲಿ ಮೌನ ಆವರಿಸಿದೆ.

ABOUT THE AUTHOR

...view details