ಕರ್ನಾಟಕ

karnataka

ETV Bharat / jagte-raho

ಕೊಟ್ಟೂರು: ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ನಾಗೇನಹಳ್ಳಿ ಗ್ರಾಮದ ಕೆರೆಯ ಬಳಿ ವ್ಯಕ್ತಿಯೊಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

By

Published : Aug 31, 2020, 9:36 AM IST

ವ್ಯಕ್ತಿಯ ಶವ ಪತ್ತೆ
ವ್ಯಕ್ತಿಯ ಶವ ಪತ್ತೆ

ಬಳ್ಳಾರಿ:ವ್ಯಕ್ತಿಯೊಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಕೆರೆ ಬಳಿ ಪತ್ತೆಯಾಗಿರುವ ಘಟನೆ ಕೊಟ್ಟೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಲೋಕಪ್ಪ(74) ಮೃತ ವ್ಯಕ್ತಿ. ಶನಿವಾರ ಹೊಲದ ಬಳಿ ಹೋಗಿ ಬರುವುದಾಗಿ ತಿಳಿಸಿದ್ದರು. ಬಳಿಕ ಅಲ್ಲಿಂದ ಹಿಂತಿರುಗಿ ಬಾರದ ಕಾರಣ ಹುಡುಕಾಟ ನಡೆಸಿದ ಕುಟುಂಬಸ್ಥರಿಗೆ ಕೆರೆಯ ಬಳಿ ಮೃತದೇಹ ಪತ್ತೆಯಾಗಿದೆ. ತಲೆಯ ಹಿಂಭಾಗ, ಕೈ ಹಾಗೂ ಮರ್ಮಾಂಗಗಳಲ್ಲಿ ಗಾಯದ ಗುರುತು ಕಂಡು ಬಂದಿದ್ದು, ರಟ್ಟೆ ಹಾಗೂ ಕಾಲುಗಳಲ್ಲಿ ತರಚಿದ ಗಾಯಗಳಾಗಿವೆ.

ಈ ಹಿನ್ನೆಲೆಯಲ್ಲಿ ಮೃತರ ಪುತ್ರ ಶಾನುಭೋಗರ ಶಿವಮೂರ್ತಿ ಅನುಮಾನ ವ್ಯಕ್ತಪಡಿಸಿದ್ದು, ಕೊಟ್ಟೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details