ಕರ್ನಾಟಕ

karnataka

ETV Bharat / jagte-raho

ಮಾಂತ್ರಿಕನ ಬಲೆಗೆ ಬಿದ್ದ ಯುವತಿ... ತಂದೆ - ತಾಯಿಗಾಗಿ ಶೀಲವನ್ನೇ ಪಣಕ್ಕಿಟ್ಟ ಮಗಳು!

ಮಾಂತ್ರಿಕನ ಮಾಯಾ ಮಾಟಕ್ಕೆ ಯುವತಿಯೊಬ್ಬಳು ತನ್ನ ಶೀಲವನ್ನೇ ಕಳೆದುಕೊಂಡಿರುವ ಘಟನೆ ಮುತ್ತಿನ ನಗರಿಯಲ್ಲಿ ನಡೆದಿದೆ.

By

Published : Jun 15, 2019, 5:11 PM IST

ಮಾಂತ್ರಿಕನ ಬಲೆಗೆ ಬಿದ್ದ ಯುವತಿ

ಹೈದರಾಬಾದ್​: ನಿಮ್ಮ ಮನೆಯಲ್ಲಿ ದೆವ್ವ ಇದೆ. ಅದನ್ನು ಮನೆಬಿಟ್ಟು ಓಡಿಸಿದ್ರೆ ನಿಮಗೆ ಒಳ್ಳೆದಾಗುತ್ತೆ ಎಂದು ಮಾಯದ ಮಾತಗಳನ್ನಾಡಿದ ಮಾಂತ್ರಿಕನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಪೊಲೀಸರ ಪ್ರಕಾರ... ಹೈದರಾಬಾದ್​ ದಂಪತಿ ತನ್ನ ಮಗಳು (19) ಜೊತೆ ಸೇರಿ 20 ದಿನಗಳ ಹಿಂದೆ ಇಲ್ಲಿನ ಮಲ್ಲೆಪಲ್ಲಿಯಲ್ಲಿರುವ ಮಾಂತ್ರಿಕ ಆಂಜನಿಯನ್ನು ಭೇಟಿ ಮಾಡಿದ್ದಾರೆ. ಭೇಟಿಯಾದ ಬಳಿಕ ಆಂಜನಿ ‘ನಿಮ್ಮ ಮನೆಯಲ್ಲಿ ದೆವ್ವವಿದೆ. ಅದನ್ನು ಓಡಿಸಿದ್ರೆ ಒಳ್ಳೆದಾಗುತ್ತೆ’ ಎಂದು ಆ ಕುಟುಂಬವನ್ನು ಬೀದರ್​ನಲ್ಲಿರುವ ದರ್ಗಾಕ್ಕೆ ಎರಡು ಬಾರಿ ಕರೆದುಕೊಂಡು ಹೋಗಿದ್ದನು.

ಬೀದರ್​ನಲ್ಲಿ ಯುವತಿ ಜೊತೆ ರಹಸ್ಯವಾಗಿ ಮಾತನಾಡಿದ ಮಾಂತ್ರಿಕ ‘ನೀನು ನನ್ನನ್ನು ಮದುವೆಯಾಗು. ಇಲ್ಲವಾದಲ್ಲಿ ನಿಮ್ಮ ತಂದೆ - ತಾಯಿ ಸಾವನ್ನಪ್ಪುತ್ತಾರೆ’ ಅಂತಾ ಭಯಪಡಿಸಿದ್ದಾನೆ. ಬಳಿಕ ಈ ತಿಂಗಳು 11ರಂದು ಯುವತಿ ಮನೆಗೆ ಭೇಟಿ ನೀಡಿದ್ದನು. ಈ ವೇಳೆ, ಮಾಂತ್ರಿಕ ಮನೆಯ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಇನ್ನು ಈ ವಿಷಯ ಯುವತಿ ತಮ್ಮ ತಂದೆ-ತಾಯಿಗೆ ತಿಳಿಸಿದ್ದಾಳೆ. ಕೂಡಲೇ ಯುವತಿ ಪೋಷಕರು ಎಸ್​ಆರ್​ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ABOUT THE AUTHOR

...view details