ಕರ್ನಾಟಕ

karnataka

ETV Bharat / international

ಆಫ್ಘನ್​​ ಮೇಲಿನ ತಾಲಿಬಾನ್​ ದಾಳಿಗೆ ಪಾಕ್​ ಕೈ ಸಾಥ್​: ಭಾರತ ಕಳವಳ

ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಹಿಂಸಾಚಾರ ಮತ್ತಷ್ಟು ಉಲ್ಬಣಿಸಿದೆ. ದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸದ್ಯ ಕೈಗೊಂಡಿರುವ ನಿರ್ಧಾರ ಒಳ್ಳೆಯದು ಎಂದು ಭಾರತ ಅಭಿಪ್ರಾಯಪಟ್ಟಿದೆ.

By

Published : Jul 27, 2021, 10:08 AM IST

Afghanistan's future
Afghanistan's future

ನವದೆಹಲಿ: ಮುಂದಿನ ಎರಡು ಮೂರು ತಿಂಗಳು ಅಫ್ಘಾನಿಸ್ತಾನದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ದೇಶದ ಮುಂದಿನ ಭವಿಷ್ಯ ನಿರ್ಣಯಿಸುತ್ತವೆ. ಈ ಹಿನ್ನೆಲೆ ಪ್ರಸ್ತುತ ಆಡಳಿತ ವ್ಯವಸ್ಥೆ ಮುಂದುವರಿಸುವುದು ಅನಿವಾರ್ಯ ಎಂದು ಭಾರತ ತಿಳಿಸಿದೆ.

ಆಫ್ಘನ್​ ಮೇಲೆ ತಾಲಿಬಾನ್​ ತನ್ನ ಆಕ್ರಮಣ ಮುಂದುವರಿಸುತ್ತಿದ್ದಂತೆ, ಪಾಕಿಸ್ತಾನ​​ ಉಗ್ರರಿಗೆ ನೆರವಾಗುತ್ತಿದೆ. ಗಾಯಗೊಂಡ ಉಗ್ರರಿಗೆ ಪಾಕ್​ ವೈದ್ಯಕೀಯ ಸೌಲಭ್ಯ ನೀಡುತ್ತಿದೆ ಎನ್ನಲಾಗಿದೆ. ಆಗಸ್ಟ್​​ 31 ರೊಳಗೆ ಆಫ್ಘನ್​ನಿಂದ ಅಮೆರಿಕ ತನ್ನ ಸೈನ್ಯ ಸಂಪೂರ್ಣ ಹಿಂತೆಗೆದುಕೊಂಡರೆ ತಾಲಿಬಾನ್ ಅಟ್ಟಹಾಸ ಮತ್ತಷ್ಟು ಹೆಚ್ಚಾಗಬಹುದು ಎಂದು ಭಾರತ ಅಭಿಪ್ರಾಯಪಟ್ಟಿದೆ.

ಅಫ್ಘಾನಿಸ್ತಾನವು ತನ್ನ ಭದ್ರತಾ ಪಡೆಯಿಂದ ದೇಶ ರಕ್ಷಿಸಿಕೊಳ್ಳುವಲ್ಲಿ ಸಮರ್ಥವಾಗಿದೆ ಎಂದು ಭಾರತ ಮತ್ತು ಹಲವಾರು ಮಿತ್ರ ರಾಷ್ಟ್ರಗಳು ವಿಶ್ವಾಸ ವ್ಯಕ್ತಪಡಿಸಿವೆ. ಕಾಬೂಲ್​ ಸರ್ಕಾರವನ್ನು ಬೆಂಬಲಿಸಿರುವ ಮೋದಿ ಸರ್ಕಾರ ಯಾವ ರೀತಿಯ ಸಹಾಯ ಬೇಕಾದರೂ ಮಾಡಲು ಸಿದ್ಧ ಎಂದಿದೆ.

ಮೇ 1 ರಿಂದ ಅಮೆರಿಕ ತನ್ನ ಭದ್ರತಾ ಪಡೆಗಳನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ ಬಳಿಕ ಆಫ್ಘನ್​ನಲ್ಲಿ ತಾಲಿಬಾನ್​ ಸರಣಿ ಸ್ಫೋಟಗಳನ್ನು ನಡೆಸಿ, ಹಿಂಸಾಚಾರ ಸೃಷ್ಟಿಸಿದೆ. ಹಲವಾರು ಪ್ರದೇಶಗಳ ಗಡಿ ದಾಟಿದ್ದು, ಗ್ರಾಮೀಣ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದೆ.

ಪರಿಸ್ಥಿತಿ ಹತೋಟಿಗೆ ಒಪ್ಪಂದ

ಸದ್ಯ ಪರಿಸ್ಥಿತಿ ಹತೋಟಿಗೆ ತರಲು ಅಧಿಕಾರ ಹಂಚಿಕೆ ಒಪ್ಪಂದವಾಗಿದೆ. ಒಂದು ವೇಳೆ ಒಪ್ಪಂದವಾಗಿರದಿದ್ದರೆ, ಅಫ್ಘಾನಿಸ್ತಾನವು ಅಂತರ್ಯುದ್ಧಕ್ಕೆ ಧುಮುಕುವ ಸಾಧ್ಯತೆಯಿತ್ತು. ತಾಲಿಬಾನ್​ ಉಗ್ರ ಪಡೆ ಅಫ್ಘಾನಿಸ್ತಾನದಲ್ಲಿ ಅಧಿಕಾರ ಸ್ಥಾಪಿಸಲು ಬಯಸಲ್ಲ. ಯಾಕೆಂದರೆ, ಅಂತಾರಾಷ್ಟ್ರೀಯ ಮನ್ನಣೆ ಮತ್ತು ನ್ಯಾಯಸಮ್ಮತೆ ಸಿಗುವುದಿಲ್ಲ ಅನ್ನೋದು ಉಗ್ರಪಡೆಗೂ ತಿಳಿದಿದೆ.

ಅಫ್ಘಾನ್​ ಸಂವಿಧಾನದ ಆಧಾರದ ಮೇಲೆ ಪ್ರಸ್ತುತ ಆಡಳಿತ ವ್ಯವಸ್ಥೆಯನ್ನು ಮುಂದುವರಿಸುವುದರೊಂದಿಗೆ ವಿಶಾಲ ಆಧಾರಿತ ಅಧಿಕಾರ ಹಂಚಿಕೆ ಒಪ್ಪಂದವಾಗಬಹುದಾದ ರಾಜಕೀಯ ಪರಿಹಾರಕ್ಕೆ ಭಾರತ ಬೆಂಬಲಿಸುತ್ತದೆ. ಅಮೆರಿಕ ಸೇನೆ ಹಿಂಪಡೆಯುತ್ತಿದ್ದಂತೆ ತಾಲಿಬಾನ್​, ಗ್ರಾಮೀಣ ಅಫ್ಘಾನಿಸ್ತಾನದಲ್ಲಿ ಸಾಧ್ಯವಾದಷ್ಟು ಪ್ರದೇಶಗಳನ್ನು ವಶಪಡಿಸಿಕೊಂಡಿದೆ.

ಅಫ್ಘಾನಿಸ್ತಾನದಲ್ಲಿ ಶೇಕಡಾ 80 ರಷ್ಟು ಪ್ರದೇಶಗಳ ಮೇಲೆ ತಾಲಿಬಾನ್ ನಿಯಂತ್ರಣವಿದೆ ಎನ್ನಲಾಗ್ತಿದೆ. ಭಾರತದ ಪ್ರಕಾರ ಶೇಕಡಾ 45 ರಿಂದ 50 ರಷ್ಟು ಮಾತ್ರ ಆಫ್ಘನ್ ​ಅನ್ನು ತಾಲಿಬಾನ್​ ವ್ಯಾಪಿಸಿಕೊಂಡಿದೆ.

ತಾಲಿಬಾನ್​​, ಪಾಕ್​ ಮೂಲದ ಲಷ್ಕರ್​ ಎ ತೊಯ್ಬಾ ಮತ್ತು ಜೈಶ್​-ಎ-ಮೊಹಮ್ಮದ್ ಭಯೋತ್ಪಾದಕರು ಕೈ ಜೋಡಿಸಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದೆ.

ABOUT THE AUTHOR

...view details