ಕರ್ನಾಟಕ

karnataka

By

Published : Mar 29, 2021, 5:45 PM IST

ETV Bharat / international

ವಾಯುಮಾಲಿನ್ಯ ಹೆಚ್ಚಳ ಹಿನ್ನೆಲೆ.. ಏಪ್ರಿಲ್‌ 2ರ ತನಕ ಎಲ್ಲಾ ಶಿಕ್ಷಣ ಸಂಸ್ಥೆಗಳು ಬಂದ್​​

ಕಾಡ್ಗಿಚ್ಚಿನಿಂದಾಗಿ ಕಠ್ಮಂಡು ಕಣಿವೆಯಲ್ಲಿ ಗಾಳಿಯ ಶುದ್ಧತೆಯಲ್ಲಿ ಗಮನಾರ್ಹ ಕುಸಿತ ಕಂಡು ಬಂದಿದೆ. ಮಾಹಿತಿಯ ಪ್ರಕಾರ, ಇಷ್ಟು ವರ್ಷಗಳಿಗಿಂತ ಈ ಬಾರಿ ಪರಿಸ್ಥಿತಿ ತುಂಬಾ ಕೆಟ್ಟದಾಗಿರಲಿದೆ..

Nepal's Education Ministry
ನೇಪಾಳ

ಕಠ್ಮಂಡು :ನೇಪಾಳದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆ ಏಪ್ರಿಲ್​ 2ರ ತನಕ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ನೇಪಾಳದ ಶಿಕ್ಷಣ ಸಚಿವಾಲಯ ಸೋಮವಾರ ಈ ಮಾಹಿತಿ ನೀಡಿದೆ. ಅಂಕಿ-ಅಂಶಗಳ ಪ್ರಕಾರ, 2019ರಲ್ಲಿ ನೇಪಾಳದಲ್ಲಿ ವಾಯುಮಾಲಿನ್ಯದಿಂದಾಗಿ ಶೇ.22ರಷ್ಟು ನವಜಾತ ಶಿಶುಗಳು ಜನಿಸಿದ ಒಂದು ತಿಂಗಳಲ್ಲಿ ಮೃತಪಟ್ಟಿವೆ.

ಓದಿ:ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ

ಅಷ್ಟೇ ಅಲ್ಲ, ಕಾಡ್ಗಿಚ್ಚಿನಿಂದಾಗಿ ಕಠ್ಮಂಡು ಕಣಿವೆಯಲ್ಲಿ ಗಾಳಿಯ ಶುದ್ಧತೆಯಲ್ಲಿ ಗಮನಾರ್ಹ ಕುಸಿತ ಕಂಡು ಬಂದಿದೆ. ಮಾಹಿತಿಯ ಪ್ರಕಾರ, ಇಷ್ಟು ವರ್ಷಗಳಿಗಿಂತ ಈ ಬಾರಿ ಪರಿಸ್ಥಿತಿ ತುಂಬಾ ಕೆಟ್ಟದಾಗಿರಲಿದೆ.

ಈ ಕಾರಣದಿಂದಾಗಿ ಜನರು ಮನೆಯಿಂದ ಹೊರಬರಬಾರದು ಮತ್ತು ವಾಯುಮಾಲಿನ್ಯದಿಂದ ಹೆಚ್ಚು ಪ್ರಭಾವಿತರಾಗಬಾರದು ಎಂದು ನೇಪಾಳ ಸರ್ಕಾರ ಅಲ್ಲಿನ ಜನರಿಗೆ ಎಚ್ಚರಿಸಿದೆ.

ABOUT THE AUTHOR

...view details