ಕರ್ನಾಟಕ

karnataka

ETV Bharat / entertainment

ಶೂಟಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಲಾರಿ ಡಿಕ್ಕಿ: ಜನಪ್ರಿಯ ಕಿರುತೆರೆ ನಟಿ ಸಾವು

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಬೆಂಗಾಲಿ ಕಿರುತೆರೆಯ ಜನಪ್ರಿಯ ನಟಿ ಸುಚಂದ್ರ ದಾಸ್‌ಗುಪ್ತ ಮೃತಪಟ್ಟಿದ್ದಾರೆ.

By

Published : May 21, 2023, 7:11 PM IST

bangali actress suchandra das gupta
ನಟಿ ಸುಚಂದ್ರ ದಾಸ್‌ಗುಪ್ತ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬೆಂಗಾಲಿ ಕಿರುತೆರೆಯ ಜನಪ್ರಿಯ ನಟಿ ಸುಚಂದ್ರ ದಾಸ್‌ಗುಪ್ತ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಟಿ ಸುಚಂದ್ರ ಅಕಾಲಿಕ ನಿಧನದಿಂದ ಕಿರುತೆರೆ ರಂಗ ದುಃಖದಲ್ಲಿ ಮುಳುಗಿದೆ.

ಸುಚಂದ್ರ ಕೋಲ್ಕತ್ತಾದ ಉತ್ತರ ಭಾಗದ ಪ್ರದೇಶದಲ್ಲಿ ರಾತ್ರಿ ತಮ್ಮ ಶೂಟಿಂಗ್ ಕೆಲಸ ಮುಗಿಸಿ ಬೈಕ್​ನಲ್ಲಿ ಮನೆಗೆ ಮರಳುತ್ತಿದ್ದರು. ಆದರೆ, ಈ ವೇಳೆ ಅತಿವೇಗದಿಂದ ಬಂದ ಲಾರಿಯೊಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ನಟಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತದ ನಂತರ ಸ್ಥಳೀಯ ಜನತೆ ಪ್ರತಿಭಟನೆ ನಡೆಸಿದ್ದಾರೆ. ಭಾರೀ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ. ಇದರ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪ್ರತಿಭಟನಾನಿರತ ಜನರು ಆಕ್ರೋಶ ಹೊರಹಾಕಿದ್ದಾರೆ.

ಲಾರಿ ಚಾಲಕ ಪೊಲೀಸ್​ ವಶಕ್ಕೆ: ಸುಮಾರು ಹೊತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ಈ ರಸ್ತೆ ಮಾರ್ಗದಲ್ಲಿ ಕೆಲಕಾಲ ಟ್ರಾಫಿಕ್​ ಜಾಮ್​ ಸಹ ಉಂಟಾಗಿತ್ತು. ನಂತರ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದರು. ಅಲ್ಲದೇ, ಅಪಘಾತಕ್ಕೆ ಕಾರಣವಾದ ಚಾಲಕನನ್ನು ಬಂಧಿಸಿ ಲಾರಿಯನ್ನೂ ವಶಕ್ಕೆ ಪಡೆದಿದ್ದಾರೆ.

ಮೃತ ಸುಚಂದ್ರ ಬೆಂಗಾಲಿ ಕಿರುತೆರೆಯ ಪ್ರಸಿದ್ಧ ನಟಿಯಾಗಿದ್ದರು. ಅವರು ಅನೇಕ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದರು. 'ಗೌರಿ' ಚಿತ್ರದಲ್ಲಿನ ಅಭಿನಯಕ್ಕಾಗಿ ತುಂಬಾ ಪ್ರಸಿದ್ಧಯನ್ನೂ ಇವರು ಪಡೆದಿದ್ದರು. ಅಲ್ಲದೇ, ಇದು ಬೆಂಗಾಲಿ ಕಿರುತೆರೆ ರಂಗದಲ್ಲಿ ಅವರು ಜನಪ್ರಿಯತೆಯನ್ನೂ ತುಂಬಾ ಹೆಚ್ಚಿತ್ತು. ಸುಚಂದ್ರ ಹೆಸರುವಾಸಿ ನಟಿಯಾಗಿರುವುದರ ಜೊತೆಗೆ ತಮ್ಮ ಲವಲವಿಕೆಯಿಂದ ಕೂಡಿದ ನಡವಳಿಕೆಯಿಂದ ಅನೇಕರಿಗೆ ಆಪ್ತರಾಗಿದ್ದರು. ದೊಡ್ಡ ಅಭಿಮಾನಿ ಬಳಗವನ್ನೂ ಹೊಂದಿದ್ದರು. ಆದರೆ, ಅಕಾಲಿಕ ಸಾವು ಅವರ ಅಭಿಮಾನಿಗಳಿಗೂ ನೋವುಂಟು ಮಾಡಿದೆ.

ಇದನ್ನೂ ಓದಿ:ನಟಿ ಸುನೈನಾ ಕಿಡ್ನಾಪ್ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಈ ಕುರಿತು ಟ್ವಿಸ್ಟ್​ ಕೊಟ್ಟ ಚಿತ್ರತಂಡ

ಒಡಿಶಾ ನಟಿ ನಿಗೂಢ ಸಾವಿನ ಪ್ರಕರಣ:ಇತ್ತೀಚೆಗೆ ಒಡಿಶಾ ಮೂಲದ ನಟಿ ರುಚಿಸ್ಮಿತಾ ಗುರು ನಿಗೂಢವಾಗಿ ಸಾವನ್ನಪ್ಪಿದ್ದರು. ಮಾರ್ಚ್​ 26ರಂದು ಬೋಲಂಗೀರ್ ಜಿಲ್ಲೆಯ ಸುದಾಪಾಡಾದಲ್ಲಿರುವ ತಮ್ಮ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದರು. ಹಲವಾರು ಸಂಗೀತ ಆಲ್ಬಂಗಳಲ್ಲಿ ಕೆಲಸ ಮಾಡಿದ್ದ ಅವರು ಅನೇಕ ಸ್ಟೇಜ್ ಶೋಗಳೊಂದಿಗೆ ಪ್ರಸಿದ್ಧ ಒಡಿಯಾ ಗಾಯಕರಾಗಿದ್ದರು. ಆದರೆ, ರುಚಿಸ್ಮಿತಾ ಸಾವಿಗೆ ಕಾರಣ ತಿಳದು ಬಂದಿರಲಿಲ್ಲ. ಅಲ್ಲದೇ, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಪ್ರಶ್ನೆಯನ್ನೂ ಹುಟ್ಟು ಹಾಕಿತ್ತು.

ಭೋಜ್‌ಪುರಿ ನಟಿ ಆತ್ಮಹತ್ಯೆ ಪ್ರಕರಣ:ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಸಹ ಮಾರ್ಚ್​ ತಿಂಗಳಲ್ಲೇ ಸಾವಿಗೆ ಶರಣಾಗಿದ್ದರು. ಉತ್ತರ ಪ್ರದೇಶದ ವಾರಣಾಸಿಯ ಹೋಟೆಲ್​ವೊಂದರ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಚಿತ್ರದ ಶೂಟಿಂಗ್‌ಗಾಗಿ ವಾರಣಾಸಿಗೆ ಬಂದಿದ್ದರು. ಚಿತ್ರೀಕರಣದ ನಂತರ ನಟಿ ಹೋಟೆಲ್‌ಗೆ ತೆರಳಿದ್ದರು. ಆದರೆ, ಇದಾರ ನಂತರ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಆದರೆ, ನಟಿ ಆಕಾಂಕ್ಷಾ ದುಬೆ ಸಾವಿನ ಹಿಂದಿನ ಕಾರಣ ನಿಗೂಢವಾಗಿದೆ.

ಇದನ್ನೂ ಓದಿ:ನಿರ್ದೇಶಕ ಪಿ.ಸಿ. ಶೇಖರ್​​ಗೆ ಬೆದರಿಕೆ ಆರೋಪ: ಲವ್ ಬರ್ಡ್ಸ್ ಸಿನಿಮಾ ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ಎಫ್ಐಆರ್

ABOUT THE AUTHOR

...view details