ಕರ್ನಾಟಕ

karnataka

ಟೀಂ ಇಂಡಿಯಾ ಕ್ರಿಕೆಟರ್‌ಗೆ ಬೆದರಿಕೆ: ಮುಂಬೈ ಪೊಲೀಸರಿಂದ ಹೈದರಾಬಾದ್‌ ವ್ಯಕ್ತಿ ಬಂಧನ

By

Published : Nov 10, 2021, 5:11 PM IST

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಭಾರತ ತಂಡ ಸೋತಿದ್ದಕ್ಕೆ ಟೀಂ ಇಂಡಿಯಾ ಪ್ರಮುಖ ಆಟಗಾರನಿಗೆ ಬೆದರಿಕೆ ಹಾಕಿದ್ದ ಹೈದರಾಬಾದ್‌ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

mumbai cyber cell arrest one from hyderabad for for threatening cricketer
ಟೀಂ ಇಂಡಿಯಾ ಪ್ರಮುಖ ಕ್ರಿಕೆಟರ್‌ಗೆ ಬೆದರಿಕೆ; ಮುಂಬೈ ಪೊಲೀಸರಿಂದ ಹೈದರಾಬಾದ್‌ ವ್ಯಕ್ತಿ ಬಂಧನ

ಹೈದರಾಬಾದ್‌: ಟೀಂ ಇಂಡಿಯಾ ಪ್ರಮುಖ ಆಟಗಾರನಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದ ಆರೋಪದಲ್ಲಿ ಮುಂಬೈ ಸೈಬರ್‌ ಪೊಲೀಸರು ಹೈದರಾಬಾದ್ ಮೂಲದ ರಾಮ್‌ನಾಗೇಶ್‌ ಎಂಬಾತನನ್ನು ಬಂಧಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ನ ಸೂಪರ್‌12 ಹಂತದ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ಕ್ರಿಕೆಟಿಗನ ವಿರುದ್ಧ ಆರೋಪಿ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈ ಸೈಬರ್‌ ಪೊಲೀಸರು ಇಂದು ಆರೋಪಿ ರಾಮ್‌ನಾಗೇಶ್‌ನನ್ನು ವಶಕ್ಕೆ ಪಡೆದು ಮುಂಬೈಗೆ ಕರೆದೊಯ್ದಿದ್ದಾರೆ.

ABOUT THE AUTHOR

...view details