ಕರ್ನಾಟಕ

karnataka

ಭೀಕರ ಕಾರು ಅಪಘಾತ: ನಾಲ್ವರ ದುರ್ಮರಣ

By

Published : Nov 26, 2021, 10:54 AM IST

Karimnagar Accident: ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಣ ಹೊಂದಿದ್ದಾರೆ. ಘಟನೆಯಲ್ಲಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

four died and one injured when a car hits tree in karimnagar district
ತೆಲಂಗಾಣದ ಕರೀಂನಗರದಲ್ಲಿ ಭೀಕರ ಕಾರು ಅಪಘಾತ; ನಾಲ್ವರ ದುರ್ಮರಣ

ಕರೀಂನಗರ(ತೆಲಂಗಾಣ):ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕರೀಂನಗರದಲ್ಲಿ ನಡೆದಿದೆ. ದುರಂತದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Karimnagar Accident today: ಮೃತರನ್ನು ಕರೀಂನಗರದ ಜ್ಯೋತಿನಗರ ನಿವಾಸಿಗಳು ಎಂದು ಗುರುತಿಸಲಾಗಿದೆ. ಖಮ್ಮಂ ಜಿಲ್ಲೆಯ ಕಲ್ಲೂರಿನ ದಶಾ ದಿನ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಮನಕೊಂಡೂರು ಪೊಲೀಸ್ ಠಾಣೆ ಬಳಿ ಅಪಘಾತ ಸಂಭವಿಸಿದೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತರನ್ನು ಚಾಲಕ ಜಲಂಧರ್, ಕೊಪ್ಪುಳ ಬಾಲಾಜಿ ಶ್ರೀಧರ್, ಕೊಪ್ಪುಳ ಶ್ರೀನಿವಾಸ ರಾವ್ ಹಾಗೂ ಶ್ರೀರಾಜ್ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಚಾಲಕ ನಿದ್ರೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ:ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ಫೇಸ್​ಬುಕ್​​ ಗೆಳೆಯನಿಂದ ಅತ್ಯಾಚಾರ

ABOUT THE AUTHOR

...view details