ಕರ್ನಾಟಕ

karnataka

ETV Bharat / city

'ಬಿಜೆಪಿ ಅಭ್ಯರ್ಥಿ ದೇಶ ಮೊದಲು ಅಂದ್ರೆ, ಮೈತ್ರಿ ಅಭ್ಯರ್ಥಿ ಕುಟುಂಬ ಮೊದಲು'

ಬಿಜೆಪಿ ಅಭ್ಯರ್ಥಿ ದೇಶ ಮೊದಲು ಅಂದ್ರೆ, ಜೆಡಿಎಸ್​ ಅಭ್ಯರ್ಥಿ ಕುಟುಂಬ ಮೊದಲು ಅಂತಾರೆ. ಜೆಡಿಎಸ್ ಕುಟುಂಬ ರಾಜಕಾರಣ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯ.

By

Published : Apr 5, 2019, 2:31 AM IST

ದೇವೇಗೌಡ


ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೇಶವೇ ಮೊದಲು ಅಂದ್ರೆ, ಮೈತ್ರಿ ಅಭ್ಯರ್ಥಿ ಕುಟುಂಬ ಮೊದಲು ಅಂತಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

ಕಾಂಗ್ರೆಸ್ ಪ್ರಣಾಳಿಕೆಯು ದೇಶದ ಸುಸ್ಥಿರತೆಗೆ, ಸಮಗ್ರತೆಗೆ ಧಕ್ಕೆ ತರುವಂತದ್ದಾಗಿದೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಹೇಗೆ ನೋವನ್ನು ಅನುಭವಿಸುತ್ತಿದ್ದಾರೆಯೋ ಅದೇ ರೀತಿಯಾದ ಪರಿಸ್ಥಿತಿಯನ್ನು ದೇಶದ ವಿವಿಧ ಭಾಗಗಳಲ್ಲಿ ತರುವ ನಿಲುವನ್ನು ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ABOUT THE AUTHOR

...view details