ಕರ್ನಾಟಕ

karnataka

ETV Bharat / city

ಶಿವಮೊಗ್ಗ : ಅಪ್ರಾಪ್ತನ ಸಮೇತ 200 ಗ್ರಾಂ ಗಾಂಜಾ ವಶಕ್ಕೆ

ಆರೋಪಿಯನ್ನು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

By

Published : Dec 25, 2020, 9:45 AM IST

ಗಾಂಜಾ ವಶಕ್ಕೆ
ಗಾಂಜಾ ವಶಕ್ಕೆ

ಶಿವಮೊಗ್ಗ: ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಅಪ್ರಾಪ್ತನನ್ನು ಬಂಧಿಸಿ, 200 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವೆಂಕಟೇಶ ನಗರದ ಸಮುದಾಯ ಭವನದ ಎದುರು ಅಪ್ರಾಪ್ತನೋರ್ವ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಸುಮಾರು 7 ಸಾವಿರ ಮೌಲ್ಯದ 28 ಪ್ಯಾಕೇಟ್ ಗಾಂಜಾ, ಎರಡು ಮೊಬೈಲ್ ಹಾಗೂ 550 ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯನ್ನು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ವೇಳೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿ ರುದ್ರೇಶ್ ಕೆ ಪಿ, ಶ್ರೀಮತಿ ಶಕುಂತಲಾ, ಶ್ರೀ ರಮೇಶ್ ಎಸ್, ರಾಘವೇಂದ್ರ, ಸಂತೋಷ್ ವಿ. ಸಂತೋಷ್, ಟಿ ಸತೀಶ್ ಹಾಜರಿದ್ದರು.

ABOUT THE AUTHOR

...view details