ಕರ್ನಾಟಕ

karnataka

By

Published : Feb 28, 2022, 7:23 AM IST

ETV Bharat / city

ಮೃತ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಮನೆಗೆ ನಟ ಪ್ರಥಮ್ ಭೇಟಿ, ಆರ್ಥಿಕ ನೆರವು

ಶಿವಮೊಗ್ಗದಲ್ಲಿ ಹತ್ಯೆಯಾದ ಭಜರಂಗದಳದ ಕಾರ್ಯಕರ್ತ ಹರ್ಷ ಹಾಗು 2015ರ ಗಲಭೆಯಲ್ಲಿ ಹತ್ಯೆಗೀಡಾಗಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಅವರ ಮನೆಗಳಿಗೆ ಭೇಟಿ ನೀಡಿರುವ ನಟ ಪ್ರಥಮ್‌ ಸಾಂತ್ವನ ಹೇಳಿದರು.

ಮೃತ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಮನೆಗೆ ನಟ ಪ್ರಥಮ್ ಭೇಟಿ
ಮೃತ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಮನೆಗೆ ನಟ ಪ್ರಥಮ್ ಭೇಟಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ಇತ್ತೀಚೆಗೆ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷ ಮನೆಗೆ ನಟ ಪ್ರಥಮ್ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ನಂತರ 2015ರ ಗಲಭೆಯಲ್ಲಿ ಹತ್ಯೆಗೀಡಾಗಿದ್ದ ವಿಶ್ವನಾಥ್ ಶೆಟ್ಟಿಯವರ ಮನೆಗೂ ಸಹ ಭೇಟಿ ನೀಡಿ, 50 ಸಾವಿರ ರೂ. ನೀಡಿದರು.

ಮೃತ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಮನೆಗೆ ನಟ ಪ್ರಥಮ್ ಭೇಟಿ

ವಿಶ್ವನಾಥ್​ ಶೆಟ್ಟಿ ಅವರ ಮಗ, ಅಜ್ಜಿ ಮೀನಾಕ್ಷಮ್ಮನವರ ಮನೆ ಕೊಪ್ಪದಲ್ಲಿದೆ. ಮೀನಾಕ್ಷಮ್ಮ ಚಿಂದಿ ಆಯ್ದು ಕಷ್ಟಕರ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದ ಬಿಗ್​ಬಾಸ್​ ಸ್ಪರ್ಧಿ ಪ್ರಥಮ್​, ಕೊಪ್ಪಕ್ಕೆ ಭೇಟಿ ನೀಡಿ, ವಿಶ್ವನಾಥ್​ ಶೆಟ್ಟಿ ಮಗನ ಹೆಸರಿನಲ್ಲಿ 50 ಸಾವಿರ ರೂ. ಠೇವಣಿ ಇಟ್ಟರು.

ಇದನ್ನೂ ಓದಿ:ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ಪ್ರಥಮ್

ABOUT THE AUTHOR

...view details