ಕರ್ನಾಟಕ

karnataka

By

Published : Apr 4, 2019, 6:48 PM IST

ETV Bharat / city

ಮೊಮ್ಮಗನ ಪರ ಪ್ರಚಾರ ಭರ್ಜರಿ ಬ್ಯಾಟ್​ ಬೀಸಿದ ದೇವೇಗೌಡ್ರು

ಕೆ.ಆರ್.ಪೇಟೆಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಮೊಮ್ಮಗನ ಪರ ಪ್ರಚಾರಕ್ಕೆ ಇಳಿದರು. ನಿಖಿಲ್​ ಕುಮಾರಸ್ವಾಮಿಗೆ ಮತ ನೀಡುವಂತೆ ಕರೆ ನೀಡಿದರು.

ನಿಖಿಲ್ ಪರ ಪ್ರಚಾರ ಆರಂಭಿಸಿದ ಹೆಚ್‌.ಡಿ.ದೇವೇಗೌಡರು

ಮೈಸೂರು: ಮೊಮ್ಮಗನ ಪರವಾಗಿ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಚುನಾವಣಾ ಪ್ರಚಾರದ ಅಖಾಡಕ್ಕಿಳಿದಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಕೆ.ಆರ್.ಪೇಟೆಯಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಭರ್ಜರಿ ಪ್ರಚಾರ ನಡೆಸಿದರು. ಪಟ್ಟಣದ ರಂಗಚಿತ್ರಮಂದಿರ ಮೈದಾನದಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಹೆಚ್‌.ಡಿ.ದೇವೇಗೌಡ ರಣಕಹಳೆ ಮೊಳಗಿಸಿದರು

ನಿಖಿಲ್ ಪರ ಪ್ರಚಾರ ಆರಂಭಿಸಿದ ಹೆಚ್‌.ಡಿ.ದೇವೇಗೌಡರು

ಈಗಾಗಲೇ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ನಟರಾದ ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ನಡೆಸುತ್ತಿರುವ ಬೆನ್ನೆಲ್ಲೇ, ಹೆಚ್‌.ಡಿ.ದೇವೇಗೌಡರು ಮೊಮ್ಮಗನ ಪರ ಬ್ಯಾಟಿಂಗ್ ಮಾಡುತ್ತಿರುವುದು ಮಂಡ್ಯ ಚುನಾವಣಾ ಕಣವನ್ನ ಮತ್ತಷ್ಟು ರಂಗೇರುವಂತೆ ಮಾಡಿದೆ.

For All Latest Updates

TAGGED:

ABOUT THE AUTHOR

...view details