ಕರ್ನಾಟಕ

karnataka

By

Published : Jul 13, 2020, 12:26 AM IST

ETV Bharat / city

ಬಹ್ರೇನ್, ಮಸ್ಕತ್‌ನಿಂದ ಮರಳಿದ 334 ಅನಿವಾಸಿ ಕನ್ನಡಿಗರು

ಬಹ್ರೇನ್ ಹಾಗೂ ಮಸ್ಕತ್‌ನಲ್ಲಿ ಸಿಲುಕಿದ್ದ 334 ಅನಿವಾಸಿ ಕನ್ನಡಿಗರು ವಂದೇ ಭಾರತ್ ಮಿಷನ್ ಯೋಜನೆಯ ಎರಡು ವಿಮಾನಗಳ ಮೂಲಕ ಭಾನುವಾರ ಸಂಜೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ.

334 Non-resident Kannadigas who returned to Mangalore from Bahrain, Muscat
ಬಹರೈನ್, ಮಸ್ಕತ್‌ನಿಂದ ತಾಯ್ನಾಡಿಗೆ ಮರಳಿದ 334 ಅನಿವಾಸಿ ಕನ್ನಡಿಗರು

ಮಂಗಳೂರು: ಬಹ್ರೇನ್ ಹಾಗೂ ಮಸ್ಕತ್‌ನಲ್ಲಿ ಸಿಲುಕಿದ್ದ 334 ಅನಿವಾಸಿ ಕನ್ನಡಿಗರು ಎರಡು ವಿಮಾನಗಳ ಮೂಲಕ ಭಾನುವಾರ ಸಂಜೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ.

ವಂದೇ ಭಾರತ್ ಯೋಜನೆಯಡಿ ಈ ಎರಡೂ ವಿಮಾನಗಳು‌ ಮಂಗಳೂರಿಗೆ ಆಗಮಿಸಿವೆ. ಬಹ್ರೇನ್​ನಿಂದ ಸಂಜೆ 4:40ಕ್ಕೆ ಆಗಮಿಸಿರುವ ವಿಮಾನದಲ್ಲಿ 107 ಪುರುಷರು ಹಾಗೂ 49 ಮಹಿಳೆಯರು ಸೇರಿದಂತೆ 156 ಪ್ರಯಾಣಿಕರು ಭಾರತ ತಲುಪಿದ್ದಾರೆ. ಮಸ್ಕತ್‌ನಿಂದ ಸಂಜೆ 5:30ಕ್ಕೆ ಆಗಮಿಸಿರುವ ವಿಮಾನದಲ್ಲಿ 140 ಪುರುಷರು, 34 ಮಹಿಳೆಯರು ಹಾಗೂ 4 ಮಕ್ಕಳು ಸೇರಿದಂತೆ ಒಟ್ಟು 178 ಪ್ರಯಾಣಿಕರಿದ್ದರು.

ಈ ಎಲ್ಲಾ ಪ್ರಯಾಣಿಕರಿಗೆ ಜಿಲ್ಲಾಡಳಿತದ ವತಿಯಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ನೋಡಲ್ ಅಧಿಕಾರಿ ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.

ABOUT THE AUTHOR

...view details