ಕರ್ನಾಟಕ

karnataka

By

Published : Aug 4, 2020, 3:24 PM IST

ETV Bharat / city

ಆರೋಗ್ಯ ಇಲಾಖೆ ಎಡವಟ್ಟು: ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸೋಂಕಿತನ ಮನೆ ಸೀಲ್​​ಡೌನ್​​

ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಆತನ ಮನೆಯನ್ನು ಆರೋಗ್ಯ ಇಲಾಖೆ ಸೀಲ್‌ಡೌನ್ ಮಾಡಿರುವ ಘಟನೆ ನಡೆದಿದೆ.

Infected home seal down upon discharge
ಡಿಸ್ಚಾರ್ಜ್​ ರಿಪೋರ್ಟ್​

ಧಾರವಾಡ: ಆರೋಗ್ಯ ಇಲಾಖೆಯಿಂದ ಇದೀಗ ‌ಮತ್ತೊಂದು ಎಡವಟ್ಟಾಗಿದೆ. ಕೊರೊನಾ ವೈರಸ್‌ ಸೋಂಕಿತ ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅವರ ಮನೆಯನ್ನು ಸೀಲ್‌ಡೌನ್ ಮಾಡಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ‌.

ಗ್ರಾಮದ 32 ವರ್ಷದ ವ್ಯಕ್ತಿಗೆ ಜುಲೈ 25ರಂದು ಸೋಂಕು ದೃಢಪಟ್ಟಿತ್ತು. ಆತ ಆಗಸ್ಟ್ 3ರಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದರು.

ಡಿಸ್ಚಾರ್ಜ್​​ ಆದ ಬಳಿಕ ಸೋಂಕಿತನ ಮನೆ ಸೀಲ್​​ಡೌನ್ ಮಾಡಿದ್ದೇಕೆ?​​

ಇಂದು ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮನೆಯನ್ನು ಸೀಲ್‌ಡೌನ್ ಮಾಡಿದ್ದಾರೆ. ಅವರಿಗೆ ಧಾರವಾಡದ ಬಿಸಿಎಂ ಹಾಸ್ಟೆಲ್​​​ನಲ್ಲಿ ಐಸೊಲೇಷನ್​​​ನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಅಧಿಕಾರಿಗಳ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ABOUT THE AUTHOR

...view details