ಕರ್ನಾಟಕ

karnataka

ETV Bharat / city

ಶಕ್ತಿಧಾಮದ ಮಕ್ಕಳ ನೋಡಿಕೊಳ್ಳಲು ಅಶ್ವಿನಿ ಮೇಡಂ ಬಳಿ ಅನುಮತಿ ಕೇಳಿದ್ದೇನೆ: ನಟ ವಿಶಾಲ್

ಪುನೀತ್ ರಾಜಕುಮಾರ್ ಸೂಪರ್​ಸ್ಟಾರ್ ಆಗಿದ್ದರೂ, ಸ್ಟಾರಿಸಂ ತೋರಿಸುತ್ತಿರಲಿಲ್ಲ. ಅವರು ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು ಎಂದು ಕಾಲಿವುಡ್ ನಟ ವಿಶಾಲ್(Kollywood actor Vishal) ಹೇಳಿದ್ದಾರೆ.

By

Published : Nov 17, 2021, 1:52 PM IST

Actor Vishal visits Puneeth Rajkumar's grave in Kanteerava Studio
ಶಕ್ತಿಧಾಮದ ಮಕ್ಕಳ ನೋಡಿಕೊಳ್ಳಲು ಅಶ್ವಿನಿ ಮೇಡಂ ಬಳಿ ಅನುಮತಿ ಕೇಳಿದ್ದೇನೆ: ನಟ ವಿಶಾಲ್

ಬೆಂಗಳೂರು:ಪುನೀತ್ ರಾಜಕುಮಾರ್ ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು. ಸೂಪರ್ ಸ್ಟಾರ್ ಆಗಿದ್ದರೂ ಸ್ಟಾರಿಸಂ ತೋರಿಸುತ್ತಿರಲಿಲ್ಲ. ಪುನೀತ್ ಇಲ್ಲ ಎಂಬ ವಿಚಾರವನ್ನು ಜೀರ್ಣಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ ಎಂದು ಕಾಲಿವುಡ್ ನಟ ವಿಶಾಲ್(Kollywood actor Vishal) ಬೇಸರ ವ್ಯಕ್ತಪಡಿಸಿದರು.

ಇಂದು ಪುನೀತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಲಿವುಡ್ ನಟ ವಿಶಾಲ್ ಇಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಭಾವುಕರಾದರು. ಈ ವೇಳೆ ಮಾತನಾಡಿದ ಅವರು ಪುನೀತ್ ಅವರ ಅಗಲಿಕೆ ಸಮಾಜಕ್ಕೂ, ಸಿನಿಮಾ ರಂಗಕ್ಕೂ ತುಂಬಲಾಗದ ನಷ್ಟವಾಗಿದೆ ಎಂದಿದ್ದಾರೆ.

ಅಪ್ಪು ಸಮಾಧಿ ಬಳಿ ಭೇಟಿ ನೀಡಿದ ವಿಶಾಲ್

ಈಗಷ್ಟೇ ಅಪ್ಪು ಮನೆಗೆ ಭೇಟಿ ನೀಡಿದ್ದೆನು. ಅವರ ಕಾರ್ಯ ಮುಂದುವರೆಸಲು ಅಶ್ವಿನಿ ಮೇಡಂ ಬಳಿ ಅನುಮತಿ ಕೇಳಿದ್ದೇನೆ. 1800 ವಿದ್ಯಾರ್ಥಿಗಳನ್ನು ನೋಡಿಕೊಳ್ಳೋಕೆ ಅನುಮತಿ ಕೇಳಿದ್ದು, ಇನ್ನು ಕೆಲವೇ ದಿನಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಾರೆ ಎಂದು ನಟ ವಿಶಾಲ್ ಹೇಳಿದ್ದಾರೆ.

ಇದನ್ನೂ ಓದಿ:ಛೇ ದುರ್ವಿದಿಯೇ..ಈಜಾಡಲು ಹೋಗಿ ನೀರಲ್ಲಿ ಮುಳುಗಿ ತೆಲಂಗಾಣದ 6 ವಿದ್ಯಾರ್ಥಿಗಳು ಸಾವು

ABOUT THE AUTHOR

...view details