ಕರ್ನಾಟಕ

karnataka

By

Published : Jun 30, 2021, 3:14 AM IST

Updated : Jun 30, 2021, 5:08 AM IST

ETV Bharat / city

ಬೆಂಗಳೂರಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕೆಂಗೇರಿಯ ಸರ್ಕಾರಿ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಎಚ್‌.ಸಿ.ರಾಮಣ್ಣ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

government-college-principal-suicide
ಬೆಂಗಳೂರಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು:ಸರ್ಕಾರಿ ಕಾಲೇಜು ಪ್ರಾಂಶುಪಾಲರೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಗರದ ಸರ್ಕಾರಿ ಕಾಲೇಜಿನ 59 ವರ್ಷದ ಪ್ರಾಂಶುಪಾಲರ ಮೃತದೇಹ ಮಂಗಳವಾರ ಸಂಜೆ ಪಶ್ಚಿಮ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿರುವ ನಿವಾಸದಲ್ಲಿ ಪತ್ತೆಯಾಗಿದೆ.

ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಪ್ರಸ್ತುತ ಕೆಂಗೇರಿ ಸರ್ಕಾರಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎಚ್‌.ಸಿ.ರಾಮಣ್ಣ ಆತ್ಮಹತ್ಯೆ ಮಾಡಿಕೊಂಡವರೆಂದು ತಿಳಿದುಬಂದಿದೆ. ಹೌಸಿಂಗ್ ಬೋರ್ಡ್‌ ಲೇಔಟ್​​ನಲ್ಲಿರುವ ಮನೆಯಲ್ಲಿ ರಾಮಣ್ಣ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುಟುಂಬವು ಇತ್ತೀಚೆಗೆ ಕಾಮಾಕ್ಷಿಪಾಳ್ಯದಲ್ಲಿರುವ ಮತ್ತೊಂದು ಮನೆಗೆ ಸ್ಥಳಾಂತರಗೊಂಡಿದ್ದರಿಂದ ರಾಮಣ್ಣ ನೇಣು ಬಿಗಿದ ಸ್ಥಿತಿಯಲ್ಲಿರುವ ಮನೆ ಖಾಲಿಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪತಿ ಮನೆಗೆ ಹಿಂದಿರುಗದಿದ್ದಾಗ ರಾಮಣ್ಣರ ಪತ್ನಿ ರಾಜೇಶ್ವರಿ ಸಂಜೆ ವೇಳೆಗೆ ಖಾಲಿ ಇದ್ದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ರೇಖಾ ಕದಿರೇಶ್ ಕೊಲೆ ಪ್ರಕರಣ : ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ

ಕೆಲವು ಕಾರಣಗಳಿಂದಾಗಿ ರಾಮಣ್ಣ ಕುಟುಂಬವು ಕಾಮಾಕ್ಷಿಪಾಳ್ಯದಲ್ಲಿರುವ ಮನೆಗೆ ಸ್ಥಳಾಂತರಗೊಂಡಿತ್ತು. ರಾಮಣ್ಣ ಮನೆಯನ್ನು ಬಾಡಿಗೆಗೆ ನೀಡಲು ಬಯಸಿದ್ದರು. ಬಾಡಿಗೆಗೆ ಯಾರೋ ಬಂದಿದ್ದಾರೆಂದು ಹೇಳಿ ರಾಮಣ್ಣ ಮಧ್ಯಾಹ್ನ ಹಳೆಯ ಮನೆಗೆ ಹೋಗಿದ್ದರು ಎಂದು ಪತ್ನಿ ಹೇಳಿದ್ದಾರೆ.

Last Updated : Jun 30, 2021, 5:08 AM IST

ABOUT THE AUTHOR

...view details