ಕರ್ನಾಟಕ

karnataka

ಕಾಂಗ್ರೆಸ್‌ ಎಂಎಲ್‌ಸಿ ಕೆ ಸಿ ಕೊಂಡ್ಯಯ ಅವರಿಗೆ ಬಿಜೆಪಿ ನಾಯಕರಿಂದ ಅಗೌರವ..

By

Published : Oct 5, 2019, 11:12 PM IST

ಆರೋಗ್ಯ ಸಚಿವ ಬಿ. ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಬಳ್ಳಾರಿ ಲೋಕಸಭಾ ಸಂಸದ ವೈ.ದೇವೆಂದ್ರಪ್ಪ ಅವರು ವೇದಿಕೆ ಮೇಲೆ ಕೆ ಸಿ ಕೊಂಡ್ಯಯ ಅವರಿಗೆ ಅಗೌರವ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

BJP leaders

ಬಳ್ಳಾರಿ: ಆರೋಗ್ಯ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಬಳ್ಳಾರಿ ಲೋಕಸಭಾ ಸಂಸದ ವೈ.ದೇವೆಂದ್ರಪ್ಪ ಅವರು ವೇದಿಕೆ ಮೇಲೆ ಕೆ.ಸಿ ಕೊಂಡ್ಯಯ ಅವರಿಗೆ ಅಗೌರವ ತೋರಿದ್ದಾರೆ ಎನ್ನಲಾಗಿದೆ.

ಕೆ.ಸಿ ಕೊಂಡ್ಯಯ ಅವರಿಗೆ ಅಗೌರವ ತೋರಿದ ಬಿಜೆಪಿ ನಾಯಕರು..

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೆ.ಸಿ ಕೊಂಡ್ಯಯ ಅವರು ಭಾಗವಹಿಸಿದ್ದರು. ಜೊತೆಗೆ ಬಿಜೆಪಿಯ ಸಚಿವ, ಶಾಸಕರು, ಸಂಸದರು ಸಹ ಕಾರ್ಯಕ್ರಮಕ್ಕೆ ಭಾಗಹಿಸಿದ್ದು, ವೇದಿಕೆ ಹತ್ತಿದ ವಿಧಾನ ಪರಿಷತ್‌ ಸದಸ್ಯರನ್ನು ಮಾತನಾಡಿಸದೇ, ಬರೀ ಕೈಗಳ ಮೂಲಕ ಮುಂದೆ ಕುರ್ಚಿ ಇದೆ ಹೋಗಿ ಎಂದರು. ನಂತರ ಭೂಮಿ ಪೂಜೆಯ ಸ್ತಂಭಗಳ ಉದ್ಘಾಟನೆಗೆ ಕರೆಯದೇ ಬಿಜೆಪಿಯ ಸಚಿವ, ಶಾಸಕ ಮತ್ತು ಸಂಸದರು ಹೋಗಿದ್ದು, ಕೆ.ಸಿ ಕೊಂಡ್ಯಯ ವೇದಿಕೆ ಮೇಲೆ ಒಬ್ಬರೆ ಇದ್ದರು.

ಬಳ್ಳಾರಿ ಜಿಲ್ಲೆ ವಿಭಜನೆಗೆ ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡ್ಯಯ, ಶಾಸಕ ಆನಂದ್ ಸಿಂಗ್ ಜೊತೆಗೆ ಕೈ ಜೋಡಿಸಿದ್ದರು. ಹಾಗೆಯೇ ವಿಜಯನಗರ ಜಿಲ್ಲೆ ಆಗಬೇಕೆಂದು ಒತ್ತಾಯಿಸಿದ್ದರು. ಅದರ ಪರಿಣಾಮವಾಗಿ ಬಿಜೆಪಿಯ ಸಚಿವ, ಶಾಸಕರು, ಸಂಸದರು ಹೀಗೆ ನಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details