ಕರ್ನಾಟಕ

karnataka

ಬಿಜೆಪಿ ಸರ್ಕಾರ ಆರೇಳು ತಿಂಗಳು ಮಾತ್ರ ಎಂಬ ಕುಮಾರಸ್ವಾಮಿ ಹೇಳಿಕೆಗೆ ಶ್ರೀರಾಮುಲು ವ್ಯಂಗ್ಯ

By

Published : Aug 15, 2022, 6:58 PM IST

ಹೆಚ್​ ಡಿ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಇನ್ನು ಆರೇಳು ತಿಂಗಳು ಮಾತ್ರ ಇರುತ್ತದೆ ಎಂದಿದ್ದ ಹೇಳಿಕೆಗೆ ಶ್ರೀರಾಮುಲು ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದರು.

b-sriramulu
ಹೆಚ್​ ಡಿ ಕುಮಾರಸ್ವಾಮಿ ಭವಿಷ್ಯ ಕೇಳಿದಲ್ಲಿ ನಾನು ಕೇಳಿಸುವೆ

ಬಳ್ಳಾರಿ :ಹೆಚ್​ ಡಿ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ನಿಲ್ಲಲ್ಲ ಎಂಬುದನ್ನು ಯಾರೋ ಜ್ಯೋತಿಷಿಯನ್ನು ಕೇಳಿ ಹೇಳಿರಬೇಕು. ನಮ್ಮ ಶಾಸಕ ಸೋಮಶೇಖರ ರೆಡ್ಡಿ ಅವರಿಗೂ ಜ್ಯೋತಿಷ್ಯದ ಬಗ್ಗೆ ನಂಬಿಕೆ ಇದೆ. ನಾವಿಬ್ಬರೂ ಕುಮಾರಸ್ವಾಮಿ ಅವರು ಕೇಳಿಸಿದ ಜ್ಯೋತಿಷಿಗಳ ಹತ್ತಿರವೇ ಸರ್ಕಾರ ಉಳಿಸಿಕೊಳ್ಳೋದು ಹೇಗೆ ಎಂದು ಕೇಳಿಕೊಂಡು ಬರುತ್ತೇವೆ ಎಂದು ಸಚಿವ ಬಿ ಶ್ರೀರಾಮುಲು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಹೇಳಿಕೆಗೆ ಶ್ರೀರಾಮುಲು ವ್ಯಂಗ್ಯ

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಗರದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೆ ತರಲಾಗುವುದು. ಬಳ್ಳಾರಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ 50 ಎಕರೆ ಭೂಮಿ ಮಂಜೂರಾಗಿದೆ. ಕೃಷಿ ಮಹಾವಿದ್ಯಾಲಯಕ್ಕೆ 25 ಕೋಟಿ ರೂ. ಅನುದಾನ ಬಂದಿದೆ. 2008-09ರಂದು ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡು ಜಮೀನಿನಲ್ಲಿ ವಿಮಾನ ನಿಲ್ದಾಣಕ್ಕೆ ಕೆಕೆಆರ್​ಡಿಬಿಯಿಂದ 40 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ನಾವು ಹೋರಾಟಗಾರರ ಗುರುತಿಸುವ ಕೆಲಸ ಮಾಡಿದರೆ ಇವರಿಗೆ ನೆಹರು ಫೋಟೋ ಇಲ್ಲ ಎನ್ನುವ ಚಿಂತೆ : ಸಿಎಂ ವ್ಯಂಗ್ಯ

ABOUT THE AUTHOR

...view details