ಕರ್ನಾಟಕ

karnataka

By

Published : Mar 30, 2020, 12:39 PM IST

ETV Bharat / city

ಕೊರೊನಾ ನಿಯಂತ್ರಣಕ್ಕೆ ಕಠಿಣ ನಿರ್ಧಾರ: ಬೈಲಹೊಂಗಲದಲ್ಲಿ ಪೆಟ್ರೋಲ್ ಬಂಕ್ ಬಂದ್

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್ ಬಂದ್ ಮಾಡುವಂತೆ ತಹಶಿಲ್ದಾರ್​ ಆದೇಶ ನೀಡಿದ್ದಾರೆ.

corona Panic, petrol bank ban in belgavi
ಪೆಟ್ರೋಲ್ ಬಂಕ್ ಬಂದ್

ಬೆಳಗಾವಿ: ಕೊರೊನಾ ವೈರಸ್‌ ಹರಡದಂತೆ ‌ತಡೆಗಟ್ಟುವ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್​ಗಳನ್ನು ಬಂದ್ ಮಾಡುವ ಮೂಲಕ ಬೈಲಹೊಂಗಲ ತಾಲೂಕಾ ಆಡಳಿತಾಧಿಕಾರಿಗಳು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಬೈಲಹೊಂಗಲ ತಾಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಪೆಟ್ರೋಲ್ ಬಂಕ್ ಬಂದ್ ಮಾಡುವಂತೆ ತಹಶೀಲ್ದಾರ್​ ಆದೇಶ ನೀಡಿದ್ದಾರೆ. ಜನರು ಹೊರಗಡೆ ಬರದಂತೆ ಸರ್ಕಾರ ಎಷ್ಟೇ ಕಟ್ಟೆಚ್ಚರ ತೆಗೆದುಕೊಂಡರೂ ಒಂದಿಲ್ಲೊಂದು ಕಾರಣವೊಡ್ಡಿ ರಸ್ತೆಗಿಳಿಯುತ್ತಿದ್ದಾರೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ವಿಚಾರ ತಿಳಿದುಬಂದಿದೆ.

ಕೊರೊನಾ ನಿಯಂತ್ರಣಕ್ಕೆ ಕಠಿಣ ನಿರ್ಧಾರ : ಪೆಟ್ರೋಲ್ ಬಂಕ್ ಬಂದ್

ಜನರ ನಿಯಂತ್ರಣ ಮಾಡುವ ಉದ್ದೇಶದಿಂದ ಅಗತ್ಯ ಸೇವೆ ಒದಗಿಸಲು ವೈದ್ಯರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಬ್ಯಾಂಕ್ ನೌಕರರು, ಪತ್ರಕರ್ತರು ಸೇರಿದಂತೆ ಒಟ್ಟು ಹತ್ತು ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಪೆಟ್ರೋಲ್ ನೀಡಲಾಗುತ್ತಿದೆ.

ABOUT THE AUTHOR

...view details