ಕರ್ನಾಟಕ

karnataka

By

Published : Apr 17, 2020, 2:05 PM IST

ETV Bharat / city

ತಮ್ಮ ಊರಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್​​ನಲ್ಲಿ ಇಡಬೇಡಿ: ಚಿಂಚಲಿ ಗ್ರಾಮಸ್ಥರು

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಕೊರೊನಾ ಶಂಕಿತರನ್ನು ಚಿಂಚಲಿ ಗ್ರಾಮದ ಮಾಯಕ್ಕಾದೇವಿ ವಸತಿ ಧರ್ಮ ಶಾಲೆಯಲ್ಲಿ ನಿಗಾದಲ್ಲಿಡುವ ನಿರ್ಧಾರ ಮಾಡಿದ್ದ ತಾಲೂಕಾಡಳಿತದ ಕ್ರಮಕ್ಕೆ ಚಿಂಚಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ.

chinchilla-villagers-oppose-quarantine-of-corona-suspects-in-there-village
ಮಾಯಕ್ಕಾದೇವಿ ವಸತಿ ಧರ್ಮಶಾಲೆ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಕೊರೊನಾ ಶಂಕಿತರನ್ನು ಪಕ್ಕದ ಚಿಂಚಲಿ ಗ್ರಾಮಕ್ಕೆ ಸ್ಥಳಾಂತರ ಮಾಡುವುದಕ್ಕೆ ಗ್ರಾಮದ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಚಿಂಚಲಿ ಗ್ರಾಮದ ಮಾಯಕ್ಕಾದೇವಿ ವಸತಿ ಧರ್ಮ ಶಾಲೆಯಲ್ಲಿ ಕೊರೊನಾ ಶಂಕಿತರನ್ನು ನಿಗಾದಲ್ಲಿಡಲು ಮುಂದಾಗಿದ್ದ ತಾಲೂಕಾಡಳಿತ ಕ್ರಮವನ್ನು ಗ್ರಾಮಸ್ಥರು ವಿರೋಧಿಸಿದ್ದಾರೆ.

ಕೊರೊನಾ ಶಂಕಿತರ ಕ್ವಾರಂಟೈನ್​ಗೆ ಚಿಂಚಲಿ ಗ್ರಾಮಸ್ಥರ ವಿರೋಧ

ಧರ್ಮ ಶಾಲೆ ಎದುರು ಜಮಾವಣೆಗೊಂಡ ಜನ, ನಮ್ಮ ಊರಲ್ಲಿ ಕೊರೊನಾ ಸೋಂಕಿತರು ಇಲ್ಲ. ಪಕ್ಕದ ಊರಿನವರನ್ನು ತಂದು ನಮ್ಮ ಗ್ರಾಮಕ್ಕೆ ಸೋಂಕು ತಗುಲಿಸಬೇಡಿ ಎಂದು ಒತ್ತಾಯಿಸಿದರು.

ABOUT THE AUTHOR

...view details