ಕರ್ನಾಟಕ

karnataka

By

Published : Mar 31, 2023, 12:52 PM IST

ETV Bharat / business

ಇಂದು ಆರ್ಥಿಕ ವರ್ಷದ ಕೊನೆ ದಿನ: ಬಾಕಿ ಕೆಲಸ ಮುಗಿಸಿಕೊಳ್ಳಿ, ನಾಳೆಯಿಂದ ಹೊಸ ಲೆಕ್ಕ

ಪ್ರಸ್ತುತ ಆರ್ಥಿಕ ವರ್ಷ ಇಂದು ಕೊನೆಗೊಳ್ಳುತ್ತದೆ. ನೀವು ಮಾಡಲೇಬೇಕಿರುವ ಪ್ರಮುಖ ಕೆಲಸಗಳು ಬಾಕಿ ಉಳಿದಿವೆಯೇ ಎಂದು ಪರಿಶೀಲಿಸಿ. ಏಕೆಂದರೆ..

march 31 deadline  have you completed these tasks  march 31 deadline news  ಆರ್ಥಿಕ ವರ್ಷದ ಕೊನೆ ದಿನವಿಂದು  ನಾಳೆಯಿಂದ ಹೊಸ ಲೆಕ್ಕ ಶುರು  ಆರ್ಥಿಕ ವರ್ಷವು ಇಂದು ಕೊನೆ  ಕೆಲವು ಪ್ರಮುಖ ಕಾರ್ಯಗಳು ಬಾಕಿ  ಆರ್ಥಿಕ ವರ್ಷದ ಕೊನೆಯ ದಿನ  ನಾಳೆಯಿಂದ ಹೊಸ ಲೆಕ್ಕಾಚಾರ  ಪ್ರಧಾನ ಮಂತ್ರಿ ವಯ ವಂದನಾ ಯೋಜನೆ  ಫಿಕ್ಸ್​ಡ ಡಿಪಾಜಿಟ್  ತೆರಿಗೆ ಉಳಿತಾಯ ಹೂಡಿಕೆಗಳು  ಹೆಚ್ಚಿನ ಪ್ರೀಮಿಯಂ ವಿಮಾ ಪಾಲಿಸಿಗಳು
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ

ಇಂದು ಮಾರ್ಚ್ 31. ಪ್ರಸಕ್ತ ಆರ್ಥಿಕ ವರ್ಷಾಂತ್ಯ. ನಾಳೆಯಿಂದ ಹೊಸ ಲೆಕ್ಕಾಚಾರ, ಹೊಸ ಯೋಜನೆ, ಹೊಸ ಭರವಸೆಯ ಹಣಕಾಸು ವರ್ಷಾರಂಭ. ಈ ನಿಟ್ಟಿನಲ್ಲಿ ಕೆಲವು ಉಪಯುಕ್ತ ಮಾಹಿತಿ.

ಪ್ರಧಾನ ಮಂತ್ರಿ ವಯ ವಂದನಾ ಯೋಜನೆ: ವೃದ್ಧಾಪ್ಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 'ಪ್ರಧಾನ ಮಂತ್ರಿ ವಯ ವಂದನಾ ಯೋಜನೆ' (ಪಿಎಂವಿವಿವೈ) ಎಂಬ ಪಿಂಚಣಿ ಯೋಜನೆ ಪ್ರಾರಂಭಿಸಿದೆ. 60 ವರ್ಷಗಳ ನಂತರ ಆದಾಯ ಕಳೆದುಕೊಳ್ಳುವವರಿಗೆ ಆಸರೆಯಾಗುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಎಲ್ಐಸಿ ನೀಡುತ್ತದೆ. 60 ವರ್ಷದ ಮೇಲ್ಪಟ್ಟವರು ಯೋಜನೆ ಸೇರಲು ಮಾರ್ಚ್ 31, 2023 ಅಂತಿಮ ಗಡುವು ಎಂದು ತಿಳಿಸಲಾಗಿದೆ. ಗರಿಷ್ಠ 15 ಲಕ್ಷ ರೂ ಪಾವತಿಸಿ ಪಾಲಿಸಿ ಖರೀದಿಸಲು ಅವಕಾಶವಿದೆ. ಮುಂದಿನ ತಿಂಗಳಿನಿಂದ ಪಿಂಚಣಿ ಆರಂಭವಾಗಲಿದೆ. ನೀವು ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಮತ್ತು ಪ್ರತಿ ವರ್ಷ ವಿಭಾಗಗಳಲ್ಲಿ ಪಿಂಚಣಿ ಪಡೆಯಬಹುದು. ಪ್ರಸ್ತುತ ಈ ಯೋಜನೆಯಡಿ ಶೇ 7.4 ರಷ್ಟು ಬಡ್ಡಿ ಸಿಗುತ್ತಿದೆ. ಅದೇ ಬಡ್ಡಿಯು 10 ವರ್ಷಗಳವರೆಗೆ ಮಾನ್ಯ.

ಫಿಕ್ಸೆಡ್ ಡಿಪಾಸಿಟ್​: ಹೂಡಿಕೆದಾರರನ್ನು ಆಕರ್ಷಿಸಲು ಬ್ಯಾಂಕುಗಳು ಅನೇಕ ವಿಶೇಷ ನಿಶ್ಚಿತ ಠೇವಣಿ ಯೋಜನೆಗಳನ್ನು ಪರಿಚಯಿಸುತ್ತಿವೆ. ಈ ವಿಶೇಷ ಯೋಜನೆಗಳ ಗಡುವು ಇಂದು ಮುಕ್ತಾಯ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 'ಅಮೃತ್ ಕಲಶ ಯೋಜನೆ' ಹೆಸರಿನಲ್ಲಿ 400 ದಿನಗಳ ಸ್ಥಿರ ಠೇವಣಿ (ಎಫ್‌ಡಿ) ಪರಿಚಯಿಸಿದೆ. ಯೋಜನೆಯು ಸಾಮಾನ್ಯ ಠೇವಣಿದಾರರಿಗೆ ಶೇ 7.10 ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇ.7.60 ಬಡ್ಡಿ ಇದೆ. ಎಸ್‌ಬಿಐ ವಿ ಕೇರ್‌ನಲ್ಲಿ ಠೇವಣಿ ಇರಿಸಿರುವ ಹಿರಿಯ ನಾಗರಿಕರಿಗೆ ಹೆಚ್ಚುವರಿ 30 ಬೇಸಿಸ್ ಪಾಯಿಂಟ್‌ಗಳ ಬಡ್ಡಿಯನ್ನು ಪಾವತಿಸುತ್ತಿದೆ. ಇದು ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅನ್ವಯ. ಪ್ರಸ್ತುತ ಯೋಜನೆಯಲ್ಲಿ ಶೇ 7.50 ಬಡ್ಡಿ ಲಭ್ಯವಿದೆ. ಇದರ ಜೊತೆಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ 'ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ', IDBI ಬ್ಯಾಂಕಿನ 'ನಮನ್ ಹಿರಿಯ ನಾಗರಿಕ ಠೇವಣಿ', ಇಂಡಿಯನ್ ಬ್ಯಾಂಕಿನ 'ಇಂಡ್ ಶಕ್ತಿ 555 ದಿನಗಳು', ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 'PSB ಫ್ಯಾಬುಲಸ್ 300 ದಿನಗಳು' ಮತ್ತು 'PSB ಫ್ಯಾಬುಲಸ್ 601 ದಿನಗಳು' ಎಂಬ ಹೆಸರಿನೊಂದಿಗೆ ಕೆಲವು ಯೋಜನೆಗಳನ್ನು ತಂದಿದೆ.

ತೆರಿಗೆ ಉಳಿತಾಯ ಹೂಡಿಕೆಗಳು:2022-23 ರ ಹಣಕಾಸು ವರ್ಷಕ್ಕೆ ಹಳೆಯ ಆದಾಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವವರು ಮಾರ್ಚ್ 31 ಮೊದಲು ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಆಗ ಮಾತ್ರ ವಿವಿಧ ವಿಭಾಗಗಳ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಜೀವ ವಿಮಾ ಪಾಲಿಸಿಗಳು, PPF, ELSS, NPS ನಂತಹ ಯೋಜನೆಗಳನ್ನು ಪರಿಶೀಲಿಸಬಹುದು. ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಯಾವುದೇ ವಿನಾಯಿತಿಗಳಿಲ್ಲ.

2019-20 ನವೀಕರಿಸಿದ ITR: 2019-20 ರ ಹಣಕಾಸು ವರ್ಷಕ್ಕೆ ಯಾರಾದರೂ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಇನ್ನೂ ನವೀಕರಿಸಲು ಬಯಸಿದರೆ ಇಂದೇ ಕೊನೆಯ ದಿನ. ಮೌಲ್ಯಮಾಪನ ವರ್ಷದ ಅಂತ್ಯದ ನಂತರ ಎರಡು ವರ್ಷಗಳಲ್ಲಿ ನವೀಕರಿಸಿದ ITR ಸಲ್ಲಿಸಬಹುದು.

ಡೆಟ್​ ಮ್ಯೂಚುವಲ್ ಫಂಡ್‌ ಪ್ರಯೋಜನಕ್ಕಾಗಿ..:ಡೆಟ್​ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಿಗೆ ದೀರ್ಘಾವಧಿಯ ತೆರಿಗೆ ಪ್ರಯೋಜನಗಳು ಏಪ್ರಿಲ್ 1, 2023 ರಿಂದ ಅನ್ವಯಿಸುವುದಿಲ್ಲ. ಈ ನಿಧಿಗಳು ಈಕ್ವಿಟಿಗಳಲ್ಲಿ ನಿರ್ವಹಣೆಯ ಅಡಿಯಲ್ಲಿ (AUM) ತಮ್ಮ ಸ್ವತ್ತುಗಳ ಶೇ 35 ಕ್ಕಿಂತ ಕಡಿಮೆ ಹೂಡಿಕೆ ಮಾಡಿದರೆ ಅವರು ಲಾಭಗಳ ಅನ್ವಯವಾಗುವ ಸ್ಲ್ಯಾಬ್ ಅನ್ನು ಅವಲಂಬಿಸಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾರಾದರೂ ದೀರ್ಘಾವಧಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಬಯಸಿದರೆ, ಇದು ಡೆಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶವಾಗಿದೆ.

ಹೆಚ್ಚಿನ ಪ್ರೀಮಿಯಂ ವಿಮಾ ಪಾಲಿಸಿಗಳು: ಯಾರಾದರೂ ಹೆಚ್ಚಿನ ಒಟ್ಟು ಪ್ರೀಮಿಯಂನೊಂದಿಗೆ ವಿಮಾ ಯೋಜನೆಗಳನ್ನು ಖರೀದಿಸಲು ಬಯಸಿದರೆ, ಇಂದು ಉತ್ತಮ ಆಯ್ಕೆ. ನಾಳೆಯಿಂದ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ವಾರ್ಷಿಕ ಪ್ರೀಮಿಯಂಗಳು 5 ಲಕ್ಷ ರೂಗಳನ್ನು ಮೀರಿದ ಜೀವ ವಿಮಾ ಪಾಲಿಸಿಗಳ ಮುಕ್ತಾಯ ಮೊತ್ತದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.

ನೀವು ಫಾರ್ಮ್ 12B ಸಲ್ಲಿಸಿದ್ದೀರಾ?: ಈ ಆರ್ಥಿಕ ವರ್ಷದಲ್ಲಿ ಯಾವುದೇ ಉದ್ಯೋಗಿಗಳು ಕಂಪನಿಯನ್ನು ಬದಲಾಯಿಸಿದ್ದರೆ, ಹೊಸ ಕಂಪನಿಯಲ್ಲಿ ಫಾರ್ಮ್ 12 ಬಿ ಸಲ್ಲಿಸಬೇಕು. ಆರ್ಥಿಕ ವರ್ಷಾಂತ್ಯದೊಳಗೆ ಇದನ್ನು ಪೂರ್ಣಗೊಳಿಸುವುದೊಳಿತು. ಆಗ ನಿಮ್ಮ ತೆರಿಗೆ ವಿವರಗಳನ್ನು ನಿರ್ಣಯಿಸುವುದು ಕಂಪನಿಗೆ ಸುಲಭವಾಗುತ್ತದೆ.

ಇದನ್ನೂ ಓದಿ:ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಲಿದ್ದಾರೆ ಅಜಯ್ ಬಂಗಾ

ABOUT THE AUTHOR

...view details