ನವದೆಹಲಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡತನವನ್ನು ಅಮೂಲಾಗ್ರವಾಗಿ ನಿರ್ಮೂಲನೆ ಮಾಡುವುದಕ್ಕೆ ಕ್ರಾಂತಿಕಾರಿ ಯೋಜನೆ ಜಾರಿಗೆ ತರುವುದಾಗಿ ರಾಹುಲ್ ಗಾಂಧಿ ಚುನಾವಣೆ ಹೊಸ್ತಿಲಲ್ಲಿ ಘೋಷಿಸಿದ್ದಾರೆ.
ದೇಶದ 5 ಕೋಟಿ ಬಡ ಕುಟುಂಬಗಳಿಗೆ ವರ್ಷಕ್ಕೆ ₹ 72 ಸಾವಿರ ಕನಿಷ್ಠ ಆದಾಯ ನೀಡುವ ರಾಹುಲ್ ಭರವಸೆಯು ದೇಶದ ಬೊಕ್ಕಸದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಮುಳುಗಿದ್ದಾರೆ. ಇನ್ನೊಂದು ಕಡೆ, ಕಾಂಗ್ರೆಸ್ಗೆ ಮತೆ ಬೇಟೆಯ ಸರಕಾರಿ ಆಗಲಿದೆಯಾ ಎಂದು ರಾಜಕೀಯ ಪರಿಣಿತರು ಓಟ್ ಬ್ಯಾಂಕ್ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. 'ನ್ಯೂನತಮ್ ಆಯ್ ಯೋಜನೆ' ಬಗ್ಗೆ (ಎನ್ವೈಎವೈ) ಆರ್ಥಿಕ ತಜ್ಞರು ಪ್ರಸ್ತುತ ಆರ್ಥಿಕ ಸನ್ನಿವೇಶ, ಜಿಡಿಪಿ, ನಗದು ಕೊರತೆ ಸೇರಿದಂತೆ ಹಲವು ಆಯಾಮಗಳಲ್ಲಿ ವಿಶ್ಲೇಷಿಸಿದ್ದಾರೆ.
ಇಂದಿರಾ ಗಾಂಧಿ ಅವರು 1969ರ ಚುನಾವಣೆ ಹೊಸ್ತಿಲಲ್ಲಿ 'ರಾಷ್ಟ್ರೀಕೃತ ಬ್ಯಾಂಕ್'ಗಳ ಘೋಷಣೆ ಹಾಗೂ 1971ರಲ್ಲಿ 'ಗರೀಬಿ ಹಠಾವೋ' ಸ್ಲೋಗನ್ ಕಾಂಗ್ರೆಸ್ಗೆ ದಂಡಿಯಾಗಿ ಗ್ರಾಮೀಣ ಹಾಗೂ ಬಡ ವರ್ಗದ ಮತಗಳು ಹರಿದು ಬಂದವು. ಈಗ ಇಂದಿರಾ ಮೊಮ್ಮಗ ರಾಹುಲ್ ಗಾಂಧಿ ಅವರು ಅಜ್ಜಿಯ ಹಾದಿ ತುಳಿದು, 'ದೇಶದ ಶೇ 20ರಷ್ಟು ಕುಟುಂಬಗಳು ಕಡುಬಡತನದಲ್ಲಿವೆ. ತಿಂಗಳಿಗೆ ₹12 ಸಾವಿರಕ್ಕಿಂತ ಕಡಿಮೆ ವರಮಾನ ಇರುವ ಕುಟುಂಬಕ್ಕೆ ತಿಂಗಳಿಗೆ ₹6 ಸಾವಿರ, ವಾರ್ಷಿಕ 72 ಸಾವಿರ ರೂ. ನೀಡುವ' ವಾಗ್ದಾನ ಘೋಷಿಸಿದ್ದಾರೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ರಾಹುಲ್ ಅಂದುಕೊಂಡಷ್ಟು ಇದು ಜಾರಿ ಆಗುವುದು ಸುಲಭವಲ್ಲ ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
2019 - 20ರ ಮಧ್ಯಾಂತರ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಮೊದಲ ನಾಲ್ಕು ತಿಂಗಳ ವೆಚ್ಚ ಮಾಡಲು ₹ 34.17 ಲಕ್ಷ ಕೋಟಿ ರೂ. ಲೇಖಾನುದಾನಕ್ಕೆ ಸಂಸತ್ತಿನ ಒಪ್ಪಿಗೆ ಕೋರಿ ಆಯವ್ಯಯ ಮಂಡಿಸಿದೆ. ವರ್ಷಕ್ಕೆ ಒಟ್ಟು ₹ 97.43 ಲಕ್ಷ ಕೋಟಿ ವೆಚ್ಚ ಇದಕ್ಕೆ ತಗುಲಿದೆ. ಈ ಯೋಜನೆಯಿಂದ ಮುಂದಿನ ಆರ್ಥಿಕ ವರ್ಷದಂದು ಕೇಂದ್ರ ಬೊಕ್ಕಸಕ್ಕೆ ವಾರ್ಷಿಕ ₹ 3.6 ಲಕ್ಷ ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಒಟ್ಟು ಬಜೆಟ್ನ ಶೇ 13ರಷ್ಟು ಈ ಯೋಜನೆಗೆ ತಗುಲುವ ವೆಚ್ಚ. ಹಣಕಾಸು ಕೊರತೆಯ ಅರ್ಧಕ್ಕಿಂತ ಇದು ಅಧಿಕವಾಗಿದೆ ಎಂಬುದು ಆರ್ಥಿಕ ತಜ್ಞರ ವಾದ.
ಸರ್ಕಾರದ ಎಲ್ಲ ಯೋಜನಾ ವೆಚ್ಚಗಳ ನಂತರ ರಾಹುಲ್ ಅವರ 'ಎನ್ವೈಎವೈ', 2019-20ರ ಹಣಕಾಸಿನ ಕೊರತೆ 10.6 ಲಕ್ಷ ಕೋಟಿಗೆ ಏರಿಕೆ ಆಗಲಿದೆ. ಮುಂದಿನ ಆರ್ಥಿಕ ವರ್ಷದ ನಿರೀಕ್ಷಿತ ಜಿಡಿಪಿಯ ಶೇ 5.1ರಷ್ಟು ಆಗಲಿದೆ. ಮತ್ತೊಂದೆಡೆ 'ಎನ್ವೈಎವೈ' ಅಡಿ ಆಹಾರ ಸಬ್ಸಿಡಿ ಸಹ ಪಡೆಯಬಹುದಾಗಿದ್ದು, ಇದು 2018-19ರಲ್ಲಿ 1.84 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. 'ಮನ್ರೆಗಾ' ಅಡಿ ಆದಾಯ ಖಾತರಿ ಸೇರ್ಪಡೆಗೊಳ್ಳುವಂತಿದ್ದು, ಇದಕ್ಕೆ ₹ 60 ಸಾವಿರ ಕೋಟಿಗಳಷ್ಟು ಹೊಂದಿಸಬೇಕಿದೆ.
ಬಡವರ ಆದಾಯ ಮೇಲೆತ್ತುವ ರಾಹುಲ್ ಗಾಂಧಿಯ ಯೋಜನೆಯ ಪ್ರಸ್ತಾವನೆಗಿಂತ 2/3ಕ್ಕಿಂತ ತುಸು ಅಧಿಕ ವ್ಯಯವಾಗುವಂತಿದೆ. ಇದಕ್ಕೆ ಮತ್ತೊಮ್ಮೆ 1.2 ಲಕ್ಷ ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಆಗ ಹಣಕಾಸಿನ ಕೊರತೆಯ ಪ್ರಮಾಣ ₹ 8.2 ಲಕ್ಷ ಕೋಟಿಗೆ ಏರಿಕೆ ಆಗಲೂ ಬಹುದು ಅಥವಾ ಜಿಡಿಪಿಯಲ್ಲಿ ಶೇ 4 ಪ್ರತಿಶತ ತಲುಪಬಹುದು. ಹೀಗಾಗಿ, 'ಎನ್ವೈಎವೈ' ಅನುಷ್ಠಾನದಿಂದ ಪ್ರಸ್ತುತ ಹಣಕಾಸಿನ ಕೊರತೆಯು ಶೇ 3.4ರಿಂದ 4ರಷ್ಟರಲ್ಲಿ ಅಥವಾ 5.1ರ ನಡುವೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.