ಕರ್ನಾಟಕ

karnataka

ETV Bharat / business

ಕಡು ಬಡವರಿಗೆ ₹ 72 ಸಾವಿರ... ಯೋಜನೆ ಕಾರ್ಯ ಸಾಧುವೆ..? ಆರ್ಥಿಕ ತಜ್ಞರ ವಾದವೇನು?

ದೇಶದ 5 ಕೋಟಿ ಬಡ ಕುಟುಂಬಗಳಿಗೆ ವರ್ಷಕ್ಕೆ ₹ 72 ಸಾವಿರ ಕನಿಷ್ಠ ಆದಾಯ ನೀಡುವ ರಾಹುಲ್ ಭರವಸೆಯು ದೇಶದ ಬೊಕ್ಕಸದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಮುಳುಗಿದ್ದಾರೆ. ಇನ್ನೊಂದು ಕಡೆ, ಕಾಂಗ್ರೆಸ್​ ಮತ ಬೇಟೆಗೆ ಈ ಯೋಜನೆ ಸಹಕಾರಿ ಆಗಲಿದೆಯಾ ಎನ್ನುವ ಬಗ್ಗೆಯೇ ಭಾರಿ ಚರ್ಚೆ ಆಗುತ್ತಿದೆ.

By

Published : Mar 27, 2019, 3:40 PM IST

ಎನ್​ವೈಎವೈ

ನವದೆಹಲಿ: ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಬಡತನವನ್ನು ಅಮೂಲಾಗ್ರವಾಗಿ ನಿರ್ಮೂಲನೆ ಮಾಡುವುದಕ್ಕೆ ಕ್ರಾಂತಿಕಾರಿ ಯೋಜನೆ ಜಾರಿಗೆ ತರುವುದಾಗಿ ರಾಹುಲ್ ಗಾಂಧಿ ಚುನಾವಣೆ ಹೊಸ್ತಿಲಲ್ಲಿ ಘೋಷಿಸಿದ್ದಾರೆ.

ದೇಶದ 5 ಕೋಟಿ ಬಡ ಕುಟುಂಬಗಳಿಗೆ ವರ್ಷಕ್ಕೆ ₹ 72 ಸಾವಿರ ಕನಿಷ್ಠ ಆದಾಯ ನೀಡುವ ರಾಹುಲ್ ಭರವಸೆಯು ದೇಶದ ಬೊಕ್ಕಸದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಮುಳುಗಿದ್ದಾರೆ. ಇನ್ನೊಂದು ಕಡೆ, ಕಾಂಗ್ರೆಸ್​ಗೆ ಮತೆ ಬೇಟೆಯ ಸರಕಾರಿ ಆಗಲಿದೆಯಾ ಎಂದು ರಾಜಕೀಯ ಪರಿಣಿತರು ಓಟ್​ ಬ್ಯಾಂಕ್ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. 'ನ್ಯೂನತಮ್​ ಆಯ್ ಯೋಜನೆ' ಬಗ್ಗೆ (ಎನ್​ವೈಎವೈ) ಆರ್ಥಿಕ ತಜ್ಞರು ಪ್ರಸ್ತುತ ಆರ್ಥಿಕ ಸನ್ನಿವೇಶ, ಜಿಡಿಪಿ, ನಗದು ಕೊರತೆ ಸೇರಿದಂತೆ ಹಲವು ಆಯಾಮಗಳಲ್ಲಿ ವಿಶ್ಲೇಷಿಸಿದ್ದಾರೆ.

ಇಂದಿರಾ ಗಾಂಧಿ ಅವರು 1969ರ ಚುನಾವಣೆ ಹೊಸ್ತಿಲಲ್ಲಿ 'ರಾಷ್ಟ್ರೀಕೃತ ಬ್ಯಾಂಕ್'​ಗಳ ಘೋಷಣೆ ಹಾಗೂ 1971ರಲ್ಲಿ 'ಗರೀಬಿ ಹಠಾವೋ' ಸ್ಲೋಗನ್​ ಕಾಂಗ್ರೆಸ್​ಗೆ ದಂಡಿಯಾಗಿ ಗ್ರಾಮೀಣ ಹಾಗೂ ಬಡ ವರ್ಗದ ಮತಗಳು ಹರಿದು ಬಂದವು. ಈಗ ಇಂದಿರಾ ಮೊಮ್ಮಗ ರಾಹುಲ್​ ಗಾಂಧಿ ಅವರು ಅಜ್ಜಿಯ ಹಾದಿ ತುಳಿದು, 'ದೇಶದ ಶೇ 20ರಷ್ಟು ಕುಟುಂಬಗಳು ಕಡುಬಡತನದಲ್ಲಿವೆ. ತಿಂಗಳಿಗೆ ₹12 ಸಾವಿರಕ್ಕಿಂತ ಕಡಿಮೆ ವರಮಾನ ಇರುವ ಕುಟುಂಬಕ್ಕೆ ತಿಂಗಳಿಗೆ ₹6 ಸಾವಿರ, ವಾರ್ಷಿಕ 72 ಸಾವಿರ ರೂ. ನೀಡುವ' ವಾಗ್ದಾನ ಘೋಷಿಸಿದ್ದಾರೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ರಾಹುಲ್​ ಅಂದುಕೊಂಡಷ್ಟು ಇದು ಜಾರಿ ಆಗುವುದು ಸುಲಭವಲ್ಲ ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

2019 - 20ರ ಮಧ್ಯಾಂತರ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಮೊದಲ ನಾಲ್ಕು ತಿಂಗಳ ವೆಚ್ಚ ಮಾಡಲು ₹ 34.17 ಲಕ್ಷ ಕೋಟಿ ರೂ. ಲೇಖಾನುದಾನಕ್ಕೆ ಸಂಸತ್ತಿನ ಒಪ್ಪಿಗೆ ಕೋರಿ ಆಯವ್ಯಯ ಮಂಡಿಸಿದೆ. ವರ್ಷಕ್ಕೆ ಒಟ್ಟು ₹ 97.43 ಲಕ್ಷ ಕೋಟಿ ವೆಚ್ಚ ಇದಕ್ಕೆ ತಗುಲಿದೆ. ಈ ಯೋಜನೆಯಿಂದ ಮುಂದಿನ ಆರ್ಥಿಕ ವರ್ಷದಂದು ಕೇಂದ್ರ ಬೊಕ್ಕಸಕ್ಕೆ ವಾರ್ಷಿಕ ₹ 3.6 ಲಕ್ಷ ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಒಟ್ಟು ಬಜೆಟ್​ನ ಶೇ 13ರಷ್ಟು ಈ ಯೋಜನೆಗೆ ತಗುಲುವ ವೆಚ್ಚ. ಹಣಕಾಸು ಕೊರತೆಯ ಅರ್ಧಕ್ಕಿಂತ ಇದು ಅಧಿಕವಾಗಿದೆ ಎಂಬುದು ಆರ್ಥಿಕ ತಜ್ಞರ ವಾದ.

ಸರ್ಕಾರದ ಎಲ್ಲ ಯೋಜನಾ ವೆಚ್ಚಗಳ ನಂತರ ರಾಹುಲ್​ ಅವರ 'ಎನ್​ವೈಎವೈ', 2019-20ರ ಹಣಕಾಸಿನ ಕೊರತೆ 10.6 ಲಕ್ಷ ಕೋಟಿಗೆ ಏರಿಕೆ ಆಗಲಿದೆ. ಮುಂದಿನ ಆರ್ಥಿಕ ವರ್ಷದ ನಿರೀಕ್ಷಿತ ಜಿಡಿಪಿಯ ಶೇ 5.1ರಷ್ಟು ಆಗಲಿದೆ. ಮತ್ತೊಂದೆಡೆ 'ಎನ್​ವೈಎವೈ' ಅಡಿ ಆಹಾರ ಸಬ್ಸಿಡಿ ಸಹ ಪಡೆಯಬಹುದಾಗಿದ್ದು, ಇದು 2018-19ರಲ್ಲಿ 1.84 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. 'ಮನ್ರೆಗಾ' ಅಡಿ ಆದಾಯ ಖಾತರಿ ಸೇರ್ಪಡೆಗೊಳ್ಳುವಂತಿದ್ದು, ಇದಕ್ಕೆ ₹ 60 ಸಾವಿರ ಕೋಟಿಗಳಷ್ಟು ಹೊಂದಿಸಬೇಕಿದೆ.

ಎನ್​ವೈಎವೈ

ಬಡವರ ಆದಾಯ ಮೇಲೆತ್ತುವ ರಾಹುಲ್ ಗಾಂಧಿಯ ಯೋಜನೆಯ ಪ್ರಸ್ತಾವನೆಗಿಂತ 2/3ಕ್ಕಿಂತ ತುಸು ಅಧಿಕ ವ್ಯಯವಾಗುವಂತಿದೆ. ಇದಕ್ಕೆ ಮತ್ತೊಮ್ಮೆ 1.2 ಲಕ್ಷ ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಆಗ ಹಣಕಾಸಿನ ಕೊರತೆಯ ಪ್ರಮಾಣ ₹ 8.2 ಲಕ್ಷ ಕೋಟಿಗೆ ಏರಿಕೆ ಆಗಲೂ ಬಹುದು ಅಥವಾ ಜಿಡಿಪಿಯಲ್ಲಿ ಶೇ 4 ಪ್ರತಿಶತ ತಲುಪಬಹುದು. ಹೀಗಾಗಿ, 'ಎನ್​ವೈಎವೈ' ಅನುಷ್ಠಾನದಿಂದ ಪ್ರಸ್ತುತ ಹಣಕಾಸಿನ ಕೊರತೆಯು ಶೇ 3.4ರಿಂದ 4ರಷ್ಟರಲ್ಲಿ ಅಥವಾ 5.1ರ ನಡುವೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಒಂದು ಸರಳ ಉದಾಹರಣೆ:
10 ಕೋಟಿ ರೂ. ಬಂಡವಾಳ ಹೂಡಿ ಮೊಬೈಲ್​ ತಯಾರಿಕಾ ಘಟಕ ತೆರೆಯಲಾಗಿದೆ. ಅದರ ಜೀವತಾವಧಿ ಐದು ವರ್ಷ ಮಾತ್ರ. ಮೊಬೈಲ್​ ಕಂಪನಿಯು ವಾರ್ಷಿಕ ಆದಾಯ ₹ 2 ಸಾವಿರ ಕೋಟಿ ಮುಖೇನ ನಷ್ಟ ಭರ್ತಿಮಾಡಿಕೊಳ್ಳಬೇಕಾಗುತ್ತದೆ. ಕಂಪನಿಯು ಪ್ರತಿ ವರ್ಷ 10,000 ಮೊಬೈಲ್​ ಯೂನಿಟ್​ಗಳನ್ನು ತಯಾರಿಸಬಲ್ಲದು. ಆದರೆ, ಸಾಕಷ್ಟು ಮೊಬೈಲ್​ಗಳ ಬೇಡಿಕೆ ಇಲ್ಲದೆ, ಇರುವುದರಿಂದ ವಾರ್ಷಿಕ ಶೇ 50 ಸಾಮರ್ಥ್ಯದಲ್ಲಿ 5,000 ಮೊಬೈಲ್​ಗಳನ್ನು ಉತ್ಪತಿ ಮಾಡುತ್ತದೆ. ಪ್ರತಿ ಮೊಬೈಲ್​ಗೆ ತಯಾರಿಕ ವೆಚ್ಚ ₹ 2,000 ಆಗುತ್ತದೆ. ಇದು ಶೇ 50ರಷ್ಟು ಉತ್ಪಾದನ ಸಾಮರ್ಥ್ಯದಲ್ಲಿ ಎಂಬುದು ಮುಖ್ಯವಾಗುತ್ತದೆ. ಸರಾಸರಿ ಸ್ಥಿರ ವೆಚ್ಚವು ಪ್ರತಿ ಮೊಬೈಲ್​ಗೆ ₹ 4,000 ಆಗುತ್ತದೆ.

ಇದೇ ರೀತಿ, ಸರ್ಕಾರ ಮೊಬೈಲ್​ ಖರೀದಿಸುವ ಕಡು ಬಡವರಿಗೆ ಹಣ ವರ್ಗಾಯಿಸುತ್ತದೆ. ಮೊಬೈಲ್​ ಬೇಡಿಕೆ ಹೆಚ್ಚಾಗುತ್ತದೆ. ಕಂಪನಿ ಹೆಚ್ಚು ಮೊಬೈಲ್ ತಯಾರಿಸಬಹುದು. ಪ್ರತಿ ಮೊಬೈಲ್​ ತಯಾರಿಕಾ ವೆಚ್ಚ ಕೆಳಕ್ಕೆ ತಳ್ಳಲ್ಪಡುತ್ತದೆ. ಪಠ್ಯ ಪುಸ್ತಕದಲ್ಲಿ ಓದಿದಂತೆ, ಬೇಡಿಕೆ ಹೆಚ್ಚಾದಾಗ ಬೆಲೆ ಸಹ ಏರಿಕೆ ಆಗುತ್ತದೆ. ಆದರೆ, ಇಲ್ಲಿ ಬೆಲೆ ಇಳಿ ಮುಖದತ್ತ ಸಾಗುತ್ತದೆ ಎಂದು ರೂಪಕವಾಗಿ ವಿಶ್ಲೇಷಿಸಿದ್ದಾರೆ.

ಭಾರತೀಯ ಉದ್ಯಮಗಳು ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಭಾರತದಲ್ಲಿ ಉತ್ಪಾದಿಸುವ ಸರಕುಗಳ ಖರೀದಿಗೆ ಗ್ರಾಹಕರಲ್ಲಿ ಅದಕ್ಕೆ ತಕ್ಕುದಾದಷ್ಟು ಹಣವಿಲ್ಲ. ಹೀಗಾಗಿ, ನಮ್ಮಲ್ಲಿನ ಕಾರ್ಖಾನೆಗಳು ಶೇ 75ಕ್ಕಿಂತ ಕಡಿಮೆ ಸಾಮರ್ಥದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಿಮೆಂಟ್ ಉದ್ಯಮ ಒಂದರಲ್ಲೇ ಶೇ 70ರಷ್ಟು ಉತ್ಪಾದನೇ ಚಟುವಟಿಕೆ ಕಡಿಮೆಯಾಗಿದೆ. ಆಟೋ ವಲಯ ಕೂಡ ಕೆಟ್ಟ ಪರಿಸ್ಥಿತಿಯಲ್ಲಿದ್ದು, ಭಾರತದ ದೊಡ್ಡ- ದೊಡ್ಡ ವಾಹನ ತಯಾರಿಕ ಕಂಪನಿಗಳು ಉತ್ಪಾದನೆಯನ್ನು ಕಡಿತಗೊಳಿಸಿವೆ. ಟಾಟಾ ಮೋಟಾರ್ಸ್​ ಮೂರು ತಿಂಗಳಲ್ಲಿ ಪ್ರತಿ ಕಾರಿನ ಮೇಲೆ ಸುಮಾರು 65 ಸಾವಿರ ರೂ. ಬೆಲೆ ಏರಿಸುವ ನಿರ್ಧಾರ ಹೊರಡಿಸಿದೆ.

ಒಂದು ಗುಣಾತ್ಮಕ ಭರವಸೆ:
ಆರ್ಥಿಕತೆಯ ಬೇಡಿಕೆಯನ್ನು ಉತ್ತೇಜಿಸಲು 3.6 ಲಕ್ಷ ಕೋಟಿ ರೂ. ಆರ್ಥಿಕವಾಗಿ ಹಿಂದುಳಿದವರ ಕೈಗಿಟ್ಟರೇ ಒಂದು ಗುಣಾತ್ಮಕ ಪರಿಣಾಮ ಬೀರಬಹುದು. ಬಡವರು ಹೆಚ್ಚು ಆಹಾರ, ಹಾಲು, ಔಷಧ, ಬಟ್ಟೆ, ಮೊಬೈಲ್​ ಸೇರಿದಂತೆ ಇತರ ನಿತ್ಯ ಅವಶ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಇಲ್ಲವೇ ತಮ್ಮ ಮಕ್ಕಳ ಶಿಕ್ಷಣದ ಮೇಲೆ ವ್ಯಯಿಸಿ 'ಇಂಗ್ಲಿಷ್- ಮಧ್ಯಮ' ಶಾಲೆಗೆ ಕಳುಹಿಸಬಹುದು. ಎಫ್ಎಂಸಿಜಿ, ತಯಾರಿಕ, ಸಿಮೆಂಟ್, ಜವಳಿ ಉದ್ಯಮದಲ್ಲಿ ಬೇಡಿಕೆ ಹೆಚ್ಚಾಗಬಹುದು.

ಎನ್​ವೈಎವೈ

ಜನರು ತಮ್ಮ ಉಳಿತಾಯದ ಒಂದು ಪಾಲನ್ನು ರಿಯಲ್ ಎಸ್ಟೇಟ್​, ಆಟೋ, ವಾಹನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು. ಒಂದಿಷ್ಟು ನಗದು ಬ್ಯಾಂಕ್​ಗಳಿಗೆ ಹರಿದು ಬರಬಹುದು. ಹಣದುಬ್ಬರ ಹಾಗೂ ಬೆಲೆ ಏರಿಕೆಯಲ್ಲಿ ಬದಲಾವಣೆಗೆ ಕಾರಣ ಆಗಬಹುದು.

'ಎನ್​ವೈಎವೈ' ಸಕರಾತ್ಮಕವಾಗಿ ಪರಿಣಾಮ ಬೀರಿದರೇ ಜಿಡಿಪಿಯ ನೈಜ ಬೆಳವಣಿಗೆಗೆ ನೆರವಾಗಬಲ್ಲದು. ಹಣದುಬ್ಬರ ಶೇ 5ಕ್ಕೇ ಜಿಗಿದು ಜಿಡಿಪಿ ಬೆಳವಣಿಗೆ ಪ್ರಮಾಣ ಶೇ 10ರಷ್ಟು ಮುಂದುವರಿಯಬಹುದು. ಇದು ಸಾಧ್ಯವಾದರೇ ಉದ್ದೇಶಿತ ಜಿಡಿಪಿ ₹ 210 ಲಕ್ಷ ಕೋಟಿಯಿಂದ ₹ 217 ಲಕ್ಷ ಕೋಟಿಗೆ ತಲುಪಬಹುದು. ಸರ್ಕಾರದ ತೆರಿಗೆ ರಶೀದಿ ಸಹ ₹ 53,000 ಕೋಟಿ ಆಗಬಹುದು ಎಂದು ಆರ್ಥಿಕ ತಜ್ಞರ ನಿರೀಕ್ಷೆಯಾಗಿದೆ.

ABOUT THE AUTHOR

...view details