ಕರ್ನಾಟಕ

karnataka

ETV Bharat / briefs

ಹೃದಯಕ್ಕೆ ಹತ್ತಿರವಾದವಳು ಕ್ಯಾನ್ಸರ್​​ಗೆ ಬಲಿಯಾದಳು... ಇದೇ ಕೊರಗಲ್ಲೇ ಜೀವ ಬಿಟ್ಟ ವಿದ್ಯಾರ್ಥಿ​​​...!!

ನಿಶ್ಚಿತಾರ್ಥವಾಗಿದ್ದ ವಧು ಸಾವನ್ನಪ್ಪಿದ್ದಾಳೆ ಎಂದು ವ್ಯಾಸಂಗಕ್ಕೆ ಸ್ವದೇಶ ಬಿಟ್ಟು ಬಂದಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ಸಂಚಲನ ಮೂಡಿಸುತ್ತಿದೆ.

By

Published : May 29, 2019, 1:26 PM IST

Updated : May 29, 2019, 4:40 PM IST

ಕೃಪೆ: Twitter

ಹೈದರಾಬಾದ್​:ನೀನಿಲ್ಲದ ಜೀವನ ನನಗೆ ಬೇಸರವಾಗುತ್ತಿದೆ. ನೀ ಇಲ್ಲದ ಲೋಕದಲ್ಲಿ ನಾನಿರಲ್ಲ, ಓ ಗೆಳತಿ ನಿನ್ನ ಬಳಿ ನಾನೂ ಬರ್ತಿದ್ದೇನೆ ಎಂದು ಮರಣಪತ್ರ ಬರೆದಿಟ್ಟು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಯೆಮನ್​ ದೇಶದ ಮೊಹಮದ್ ಓಥ್ಮನ್ ಅಲಿ (24) ತನ್ನ ಸಂಬಂಧಿ ಫೈಜಲ್​ ಮಬ್ಕೊತ್​ ಹಸನ್​ ಜೊತೆ ಸೇರಿ ಹೈದರಾಬಾದ್​ನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದರು. ಅಲಿಗೆ 9 ತಿಂಗಳ ಹಿಂದೆ ಯೆಮನ್​ ದೇಶದ ಯುವತಿ ಜೊತೆ ನಿಶ್ಚಿತಾರ್ಥವಾಗಿತ್ತು. ಇಬ್ಬರು ಫೋನ್​ನಲ್ಲಿ ಮಾತನಾಡುತ್ತಲೇ ಮಾನಸಿಕವಾಗಿ ಹತ್ತಿರವಾಗಿದ್ದರು. ಆದ್ರೆ,​ ವಿಧಿಯಾಟಕ್ಕೆ ಯುವತಿ ಬಲಿಯಾಗಿದ್ದಳು. ಕ್ಯಾನ್ಸರ್​ ಖಾಯಿಲೆಯಿಂದ ಬಳಲುತ್ತಿದ್ದ ಆಕೆ 3 ತಿಂಗಳ ಹಿಂದೆ ಸಾವನ್ನಪ್ಪಿದ್ದಳು.

ಯೆಮನ್​ ದೇಶದ ಮೊಹಮದ್ ಓಥ್ಮನ್ ಅಲಿ

ಭಾವಿ ಪತ್ನಿ ಸಾವಿನ ಸುದ್ದಿ ತಿಳಿದ ಅಲಿ ಮಾನಸಿಕ ಖಿನ್ನತೆಗೆ ಒಳಗಾದರು. ಇದೇ ಸಮಯದಲ್ಲಿ ಅಲಿಯ ವಿಸಾ ಸಮಯ ಮುಗಿದು ಹೋಗಿದೆ ಎಂದು ಎಫ್​ಆರ್​ಆರ್​ಒನಿಂದ ಸಮಾಚಾರ ಬಂದಿತ್ತು. ಅಲಿಗೆ ಭಾರತವನ್ನು ಬಿಟ್ಟು ಹೋಗುವ ಪರಿಸ್ಥಿತಿ ಎದುರಾಯಿತು. ಇದರಿಂದ ಅಲಿ ಮತ್ತಷ್ಟು ಮಾನಸಿಕವಾಗಿ ಬಳಲಿದ್ದಾರೆ. ಕೊನೆಗೆ ಡೆತ್​ನೋಟ್​ ಬರೆದಿಟ್ಟ ಅಲಿ ನೇಣಿಗೆ ಶರಣಾಗಿದ್ದಾರೆ.

ಹಸನ್​ ಮನೆಗೆ ಬಂದು ನೋಡಿದಾಗ ಅಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಹಸನ್​ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಅಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಡೆತ್​ನೋಟ್​ನ್ನು ವಶಕ್ಕೆ ಪಡೆದರು. ಅಲಿ ಡೆತ್​ನೋಟ್​ನಲ್ಲಿ, ಯುವತಿ ಜೊತೆ ನಿಶ್ಚಿತಾರ್ಥವಾಗಿದ್ದು ಆಕೆಯ ಸಾವು ಮತ್ತು ಒಂಟಿತನದ ಬಗ್ಗೆ ಉಲ್ಲೇಖಿಸಿದ್ದಾರೆ.

ಪೊಲೀಸರು ಅನುಮಾನಸ್ಪದ ಸಾವು(UDR) ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Last Updated : May 29, 2019, 4:40 PM IST

ABOUT THE AUTHOR

...view details