ಕರ್ನಾಟಕ

karnataka

ETV Bharat / briefs

ನಡು ರಸ್ತೆಯಲ್ಲಿ ಅದೂ ಮಟಮಟ ಮಧ್ಯಾಹ್ನವೇ ಕೊಚ್ಚಿ ಕೊಲೆ..!

ಬೈಕಿನಲ್ಲಿ ಬಂದಿಳಿದ ದುಷ್ಕರ್ಮಿ ವಾಹನಗಳು ಸಂಚರಿಸುತ್ತಿರುವ ವೇಳೆಯಲ್ಲೇ  ನಡುರಸ್ತೆಯಲ್ಲೇ ಮೆಹಬೂಬ್​​ನನ್ನು ಬೀಳಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾದ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

By

Published : May 31, 2019, 4:54 PM IST

ಕೊಲೆ

ಸಂಗಾರೆಡ್ಡಿ(ತೆಲಂಗಾಣ):ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಹಾಡಹಗಲೇ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಪಟ್ಟನಚೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಹಬೂಬ್​​ ಎನ್ನುವ ವ್ಯಕ್ತಿಯನ್ನು ಅರ್ಷದ್ ಹುಸೇನ್ ಎಂಬುವವನ ಸಹಚರ ಎಂದು ಹೇಳಲಾಗುತ್ತಿರುವ ವ್ಯಕ್ತಿ ದಾರುಣವಾಗಿ ಹತ್ಯೆ ಎಸೆಗಿದ್ದಾನೆ.

ಕೊಲೆಯ ದೃಶ್ಯ

ಬೈಕಿನಲ್ಲಿ ಬಂದಿಳಿದ ದುಷ್ಕರ್ಮಿ ವಾಹನಗಳು ಸಂಚರಿಸುತ್ತಿರುವ ವೇಳೆಯಲ್ಲೇ ನಡುರಸ್ತೆಯಲ್ಲೇ ಮೆಹಬೂಬ್​​ನನ್ನು ಬೀಳಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಈ ಹತ್ಯೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದ್ದು, ಅರ್ಷದ್ ಹುಸೇನ್ ಹತ್ಯೆಯಲ್ಲಿ ಮೆಹಬೂಬ್​​ ಎ ಒನ್​ ಆರೋಪಿಯಾಗಿದ್ದ. ಇದೇ ಪ್ರಕರಣದಲ್ಲಿ ಇಂದು ಮೆಹಬೂಬ್​ ಕೋರ್ಟ್​ಗೆ ಹಾಜರಾಗಿ ವಾಪಸ್​ ಮನೆಗೆ ತೆರಳುತ್ತಿದ್ದ ವೇಳೆ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details