ಕರ್ನಾಟಕ

karnataka

By

Published : May 15, 2019, 1:12 PM IST

ETV Bharat / briefs

ದುರಸ್ತಿ ವೇಳೆ ವಿದ್ಯುತ್ ಶಾಕ್​​... ಕಂಬದಲ್ಲಿದ್ದ ಲೈನ್​ಮ್ಯಾನ್ ಕೆಳಗೆಬಿದ್ದು ಸಾವು

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಕೆ) ಬಳಿಯ ಮುಖ್ಯ ವಿದ್ಯುತ್ ಕಂಬದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾಗ ದಿಢೀರ್​ ವಿದ್ಯುತ್ ಹರಿದ ಪರಿಣಾಮ ಲೈನ್​ಮ್ಯಾನ್​ ಸಾವನ್ನಪ್ಪಿದ್ದಾರೆ.

ಬೀದರ್​ನಲ್ಲಿ ಲೈನ್​ಮನ್ ಸಾವು

ಬೀದರ್: ವಿದ್ಯುತ್ ಕಂಬ ಏರಿ ತಂತಿ ಜೋಡಣೆ ಮಾಡುತ್ತಿದ್ದ ಜೆಸ್ಕಾಂ ಇಲಾಖೆಯ ಲೈನ್​ಮ್ಯಾನ್​ವೋರ್ವರು ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬ್ಯಾಲಹಳ್ಳಿ (ಕೆ) ಎಂಬಲ್ಲಿ ಘಟನೆ ನಡೆದಿದೆ.

ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಕೆ) ಬಳಿಯ ಮುಖ್ಯ ವಿದ್ಯುತ್ ಕಂಬದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾಗ ಒಮ್ಮಲೇ ಹರಿದ ವಿದ್ಯುತ್​​ನಿಂದಾಗಿ ಲಿಂಗರಾಜು ರಮೇಶ ನಾಯಕ (23) ಎಂಬಾತ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತ ಲಿಂಗರಾಜು ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವರಾಗಿದ್ದು, ಜೆಸ್ಕಾಂನಲ್ಲಿ ಲೈನ್​ಮ್ಯಾನ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಧನ್ನೂರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

For All Latest Updates

ABOUT THE AUTHOR

...view details