ದುರಸ್ತಿ ವೇಳೆ ವಿದ್ಯುತ್ ಶಾಕ್... ಕಂಬದಲ್ಲಿದ್ದ ಲೈನ್ಮ್ಯಾನ್ ಕೆಳಗೆಬಿದ್ದು ಸಾವು
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಕೆ) ಬಳಿಯ ಮುಖ್ಯ ವಿದ್ಯುತ್ ಕಂಬದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾಗ ದಿಢೀರ್ ವಿದ್ಯುತ್ ಹರಿದ ಪರಿಣಾಮ ಲೈನ್ಮ್ಯಾನ್ ಸಾವನ್ನಪ್ಪಿದ್ದಾರೆ.
ಬೀದರ್: ವಿದ್ಯುತ್ ಕಂಬ ಏರಿ ತಂತಿ ಜೋಡಣೆ ಮಾಡುತ್ತಿದ್ದ ಜೆಸ್ಕಾಂ ಇಲಾಖೆಯ ಲೈನ್ಮ್ಯಾನ್ವೋರ್ವರು ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬ್ಯಾಲಹಳ್ಳಿ (ಕೆ) ಎಂಬಲ್ಲಿ ಘಟನೆ ನಡೆದಿದೆ.
ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಕೆ) ಬಳಿಯ ಮುಖ್ಯ ವಿದ್ಯುತ್ ಕಂಬದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾಗ ಒಮ್ಮಲೇ ಹರಿದ ವಿದ್ಯುತ್ನಿಂದಾಗಿ ಲಿಂಗರಾಜು ರಮೇಶ ನಾಯಕ (23) ಎಂಬಾತ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತ ಲಿಂಗರಾಜು ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವರಾಗಿದ್ದು, ಜೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಧನ್ನೂರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
TAGGED:
GESCOM LINEMEN DEATH