ಜೈಪುರ: ಜಂಟಲ್ಮನ್ ಗೇಮ್ ಕ್ರಿಕೆಟ್ನಲ್ಲಿ ನಿಯಮಗಳ ಪ್ರಕಾರ ಮಂಕಡ್ ಮೂಲಕ ಔಟ್ ಮಾಡಬಹುದು , ಅದು ತಪ್ಪಲ್ಲ, ಆದರೆ ಆ ರೀತಿ ಔಟ್ ಮಾಡುವ ಮೊದಲು ಬ್ಯಾಟ್ಸ್ಮನ್ಗೆ ಎಚ್ಚರಿಕೆ ನೀಡಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ ಜಂಟಲ್ಮನ್ ಖ್ಯಾತಿಯ ರಾಹುಲ್ ದ್ರಾವಿಡ್
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಅಶ್ವಿನ್ ಜೋಸ್ ಬಟ್ಲರ್ ಅವರನ್ನು ಮಂಕಡ್ ರನೌಟ್ ಮಾಡಿ ವಿವಾದಕ್ಕೆ ಒಳಗಾಗಿದ್ದರು. ಇದಕ್ಕೆ ವಿಶ್ವ ಕ್ರಿಕೆಟ್ನಾದ್ಯಂತ ಚರ್ಚೆ ನಡೆದು ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದವು. ಇದಕ್ಕೆ ಕನ್ನಡಿಗ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದು, ನಿಯಮಾವಳಿಗಿಂತ ಕ್ರೀಡಾ ಸ್ಪೂರ್ತಿ ಮುಖ್ಯ ಎಂದಿದ್ದಾರೆ.
ಬಟ್ಲರ್ ರನ್ನು ಮಂಕಡ್ ಮೂಲಕ ಔಟ್ ಮಾಡುತ್ತಿರುವ ಅಶ್ವಿನ್ ನನ್ನ ಪ್ರಕಾರ ಅನಿವಾರ್ಯತೆಗಾಗಿ ಬ್ಯಾಟ್ಸ್ಮನ್ಗಳನ್ನು ಮಂಕಡ್ ಮೂಲಕ ಔಟ್ ಮಾಡುವುದು ಒಪ್ಪುವಂತದ್ದಲ್ಲ. ಮಂಕಡ್ ಔಟ್ಗೆ ನನ್ನ ವಿರೋಧವಿಲ್ಲ ಆದರೆ ಎಚ್ಚರಿಕೆ ನೀಡಿ ನಂತರ ತಿದ್ದಿಕೊಳ್ಳದಿದ್ದರೆ ಆ ರೀತಿ ಔಟ್ ಮಾಡುವುದಕ್ಕೆ ಬೌಲರ್ಗೆ ಅವಕಾಶವಿದೆ ಎಂದಿದ್ದಾರೆ.
ಇನ್ನು ಅಶ್ವಿನ್ ವಿರುದ್ಧ ಕೆಲವರು ಅತಿರೇಕವಾಗಿ ಪ್ರತಿಕ್ರಿಯಸಿದ್ದಾರೆ. ಆದರೆ ಅಶ್ವಿನ್ ಕ್ರಿಕೆಟ್ ನಿಯಾಮಾನುಸಾರ ಬಟ್ಲರ್ ಅವರನ್ನು ಔಟ್ ಮಾಡಿದ್ದಾರೆ. ಅವರ ದೃಷ್ಟಿಯಲ್ಲಿ ಅದು ಸರಿಯಾಗಿದೆ. ಆದರೆ, ಕೆಲವರ ದೃಷ್ಟಿಯಲ್ಲಿ ಅದು ತಪ್ಪಿರಬಹುದು. ಅಷ್ಟು ಮಾತ್ರಕ್ಕೆ ಅಶ್ವಿನ್ರನ್ನು ಕೆಟ್ಟ ವ್ಯಕ್ತಿ ಎಂದು ಹೇಳಬೇಕಿಲ್ಲ ಎಂದಿದ್ದಾರೆ. ನನ್ನ ಪ್ರಕಾರ ಅಶ್ವಿನ್ ಔಟ್ ಮಾಡುವ ಮುನ್ನ ಬಟ್ಲರ್ಗೆ ವಾರ್ನ್ ಮಾಡಬೇಕಿತ್ತು. ಅಶ್ವಿನ್ ಅದನ್ನು ಮಾಡಲಿಲ್ಲ, ಬಟ್ ಅದನ್ನು ಇಷ್ಟು ದೊಡ್ಡ ವಿಷಯ ಮಾಡುವ ಅಗತ್ಯವಿರಲಿಲ್ಲ. ಅವರನ್ನು ಈ ವಿಷಯವಾಗಿ ಸಬ್ಯಸ್ಥ - ಅಸಬ್ಯಸ್ಥ ಎಂದು ನಿರ್ಧರಿಸಲು ಆಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಾನೊಬ್ಬ ಕೋಚ್ ಆಗಿ ಆಟಗಾರರಿಗೆ ಮಂಕಡ್ ಮಾಡುವುದಕ್ಕು ಮುನ್ನ ಬ್ಯಾಟ್ಸ್ಮನ್ಗೆ ಎಚ್ಚರಿಕೆ ನೀಡಿ ಎಂದು ತಿಳಿಸುತ್ತೇನೆ. ವಾರ್ನ್ ಮಾಡಿದ ನಂತರವು ಆತ ತನ್ನ ತಪ್ಪನ್ನು ಮುಂದುವರಿಸಿದರೆ ನೀವು ಮಂಕಡ್ ಪ್ರಯತ್ನಿಸಬಹದು. ಆದರೆ ಕೆಲವು ಜನರು ನನ್ನ ಮಾತನ್ನು ಒಪ್ಪದಿರಬಹುದು, ಆದರೆ, ನಿಯಮದಲ್ಲಿ ಎದುರಾಳಿಗೆ ವಾರ್ನ್ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ, ಅಶ್ವಿನ್ ನಿಯಮಗಳನ್ನು ಓದಿದ್ದಾರೆ, ಅದನ್ನ ಒಪ್ಪುವುದು ಬಿಡುವುದು ಅವರ ಇಷ್ಟಕ್ಕೆ ಬಿಟ್ಟಿದ್ದು,ಆದರೆ ಆತನ ನಡವಳಿಕೆಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.