ಕರ್ನಾಟಕ

karnataka

ಎಣ್ಣೆ ಏಟಲ್ಲಿ ಗುಂಡೇಟು..ಅಪ್ರಾಪ್ತರ ಕ್ರೌರ್ಯಕ್ಕೆ ಚಹಾ ಮಾರುವವನ ಸ್ಥಿತಿ ಗಂಭೀರ

By

Published : Oct 18, 2021, 5:41 PM IST

ಮದ್ಯದ ಅಮಲಿನಲ್ಲಿದ್ದ ಮೂವರು ಅಪ್ರಾಪ್ತರು, ಚಹಾ ಅಂಗಡಿಗೆ ಬಂದು ಅಲ್ಲಿನ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಬಳಿಕ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಗುಂಡೇಟು
ಗುಂಡೇಟು

ನವದೆಹಲಿ: ಮೂವರು ಅಪ್ರಾಪ್ತರು ಚಹಾ ಮಾರುವವನೊಂದಿಗೆ ಜಗಳವಾಡಿ, ಬಳಿಕ ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಸಫ್ದರ್​ಜಂಗ್​ನಲ್ಲಿ ನಡೆದಿದೆ. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಅಪ್ರಾಪ್ತರ ಕ್ರೌರ್ಯಕ್ಕೆ ಚಹಾ ಮಾರುವವನ ಸ್ಥಿತಿ ಗಂಭೀರ

ನಿನ್ನೆ ತಡರಾತ್ರಿ ಮದ್ಯದ ಅಮಲಿನಲ್ಲಿದ್ದ ಮೂವರು ಅಪ್ರಾಪ್ತರು, ಚಹಾ ಅಂಗಡಿಗೆ ಬಂದು ಅಲ್ಲಿನ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಬಳಿಕ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಣ್ಣದಾಗಿ ಶುರುವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಆರೋಪಿಗಳು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು, ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ರಂಜಿತ್ ಸಿಂಗ್ ಕೊಲೆ ಪ್ರಕರಣ : ರಾಮ್​ ರಹೀಮ್​ ಸೇರಿ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ABOUT THE AUTHOR

...view details