ಮಂಡಿ(ಹಿಮಾಚಲಪ್ರದೇಶ):ಹಿಮಾಚಲಪ್ರದೇಶ ದೇವ ಭೂಮಿಯೆಂದೇ ಹೆಸರುವಾಸಿ. ಇಲ್ಲಿನ ಜನರು ದೇವರ ಬಗ್ಗೆ ಆಳವಾದ ನಂಬಿಕೆ ಹೊಂದಿದ್ದಾರೆ. ಚೌಹಾರ್ ಕಣಿವೆಯ ಜನರು ಹುರಂಗು ನಾರಾಯಣ್ ಜತೆಗೆ ಇತರೆ ದೇವರುಗಳ ಮೇಲೂ ಅಪಾರ ನಂಬಿಕೆ ಇಟ್ಟಿದ್ದಾರೆ.
ಮಂಡಿ ಜಿಲ್ಲೆಯ ಡ್ರಾಂಗ್ ವಿಧಾನಸಭಾ ಕ್ಷೇತ್ರದ ಚೌಹಾರ್ ಕಣಿವೆಯಲ್ಲಿ ಕ್ಷೀರ ಹರಿದು ಬರುತ್ತಿದೆ. ಗುಡ್ಡದ ಮೇಲಿಂದ ಹಾಲು ಹರಿದು ಬರುತ್ತಿದ್ದು, ನೆಲಕ್ಕೆ ಬಂದ ಸ್ವಲ್ಪ ಸಮಯದಲ್ಲೇ ಮೊಸರಾಗಿ ಪರಿವರ್ತನೆಯಾಗುತ್ತದೆ.
ಚೌಹಾರ್ ಕಣಿವೆಯ ಸ್ಥಳೀಯರು ಈ ಅಚ್ಚರಿಯ ದೃಶ್ಯ ಕಣ್ತುಂಬಿಕೊಳ್ಳಲು ದೌಡಾಯಿಸುತ್ತಿದ್ದಾರೆ. ಈ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಮಹಾದೇವನ ಸ್ಥಳವೂ ಇದೆ. ಇನ್ನೊಂದು ಗುಡ್ಡದೊಳಗೆ ಸಣ್ಣ ಸಣ್ಣ ಹೊಂಡಗಳನ್ನು ನಿರ್ಮಿಸಲಾಗಿದೆ. ಅದರ ಒಳಗೆ ಬಹಳ ಹಿಂದಿನಿಂದಲೂ ಮಹಿಳೆಯರ ಸ್ತನ ಹೋಲುವ ರೀತಿಯ ಆಕೃತಿಗಳಿವೆ. ಅಲ್ಲಿಯೂ ಕ್ಷೀರ ರೀತಿಯ ದ್ರವ ಹರಿದು ಬರುತ್ತಿದ್ದು, ಜನರು ಪೂಜೆ ಸಲ್ಲಿಸುತ್ತಾರೆ.