ಕರ್ನಾಟಕ

karnataka

ಹಗರಣ ಬಯಲಿಗೆಳೆದ 'ಈಟಿವಿ ಭಾರತ' ವರದಿಗಾರನ ವಿರುದ್ಧ FIR ಏಕೆ?: ತೇಜಸ್ವಿ ಯಾದವ್ ಆಕ್ರೋಶ

By

Published : May 30, 2021, 8:11 PM IST

ಬಿಹಾರದಲ್ಲಿ ಸಂಚಲನ ಸೃಷ್ಟಿಸಿರುವ ಆ್ಯಂಬುಲೆನ್ಸ್ ಪ್ರಕರಣ ಸಂಬಂಧ ಆಡಳಿತ ಪಕ್ಷದ ವಿರುದ್ಧ ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡುವ ಪತ್ರಕರ್ತರ ಮೇಲೆ ಎಫ್​ಐಆರ್ ದಾಖಲಿಸುವ ಅಭ್ಯಾಸ ಆರಂಭಿಸಿದೆ ಎಂದು ಟೀಕಿಸಿದ್ದಾರೆ.

ತೇಜಸ್ವಿ ಯಾದವ್
ತೇಜಸ್ವಿ ಯಾದವ್

ಪಾಟ್ನಾ (ಬಿಹಾರ): ಆ್ಯಂಬುಲೆನ್ಸ್ ವಿವಾದ ಪ್ರಕರಣ ಬಯಲಿಗೆಳೆದಿದ್ದ ಈಟಿವಿ ಭಾರತ ವರದಿಗಾರನ ವಿರುದ್ಧ ಎಫ್​ಐಆರ್ ದಾಖಲಾಗಿರುವ ಸಂಬಂಧ ಬಿಹಾರ ಸರ್ಕಾರದ ವಿರುದ್ಧ ಆಕ್ರೋಶದ ಧ್ವನಿ ಕೇಳಿ ಬಂದಿದೆ.

ಈ ಪ್ರಕರಣ ಸಂಬಂಧ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಟ್ವೀಟ್ ಮಾಡಿ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸರ್ಕಾರದ ನ್ಯೂನತೆಗಳು ಮತ್ತು ವಾಸ್ತವಾಂಶ ವರದಿ ಮಾಡುವ ಪತ್ರಕರ್ತರ ವಿರುದ್ಧ ಎಫ್​​ಐಆರ್​ ದಾಖಲಿಸುವ ಹೊಸ ಅಭ್ಯಾಸವನ್ನು ನಿತೀಶ್ ಕುಮಾರ್ ಸರ್ಕಾರ ಆರಂಭಿಸಿದೆ. ಈಗ ಕೇಂದ್ರ ಸಚಿವ ಚೌಬೆ ಅವರ ನಕಲಿ ಆ್ಯಂಬುಲೆನ್ಸ್ ವಿವಾದ ಹೊರತಂದ ಈಟಿವಿ ಭಾರತ ವರದಿಗಾರನ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದಿದ್ದಾರೆ.

ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ಪ್ರಕರಣವನ್ನು ವರದಿ ಮಾಡಿದ್ದಕ್ಕಾಗಿ ಈಟಿವಿ ಭಾರತದ ವರದಿಗಾರ ಉಮೇಶ್ ಪಾಂಡೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬಿಜೆಪಿ ಮುಖಂಡ ಮತ್ತು ಬಕ್ಸಾರ್ ವಿಧಾನಸಭೆಯ ಮಾಜಿ ಅಭ್ಯರ್ಥಿ ಪರಶುರಾಮ್​​​ ಚತುರ್ವೇದಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಬಕ್ಸಾರ್‌ನ ಸದರ್ ಪೊಲೀಸ್ ಠಾಣೆಯಲ್ಲಿ 500, 506, 290, 420 ಮತ್ತು ಸೆಕ್ಷನ್ 3 ರ ಅಡಿಯಲ್ಲಿ ವರದಿಗಾರನ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ಓದಿ:ಬಿಹಾರ ಆ್ಯಂಬುಲೆನ್ಸ್ ವಿವಾದ ಬಯಲಿಗೆಳೆದ ಈಟಿವಿ ಭಾರತ ವರದಿಗಾರನ ವಿರುದ್ಧ ಎಫ್​ಐಆರ್​​

ABOUT THE AUTHOR

...view details