ಕರ್ನಾಟಕ

karnataka

By

Published : Apr 23, 2021, 2:05 PM IST

ETV Bharat / bharat

ಶಶಿ ತರೂರ್​ ಎಡವಟ್ಟು: ಸುಮಿತ್ರಾ ಮಹಾಜನ್​​​ ಸಾವಿನ ಸುಳ್ಳು ಸುದ್ದಿ ಟ್ವೀಟ್​ ಮಾಡಿ ಡಿಲಿಟ್​ ಮಾಡಿದ ಕೈ ನಾಯಕ

ಸುಳ್ಳು ಸುದ್ದಿಯನ್ನು ನಿಜವೆಂದು ನಂಬಿ ಸುಮಿತ್ರಾ ಮಹಾಜನ್ ಅವರು ನಿಧನರಾಗಿದ್ದಾರೆಂದು ಟ್ವೀಟ್​ ಮಾಡಿದ್ದ ಶಶಿ ತರೂರ್, ಅನೇಕರು ಈ ವಿಚಾರ ಸತ್ಯವಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಂತೆಯೇ ತಮ್ಮ ಟ್ವೀಟ್​ ಅಳಿಸಿಹಾಕಿ ಕ್ಷಮೆ ಕೇಳಿದ್ದಾರೆ.

Tharoor deletes tweet on Sumitra Mahajan after BJP leaders say she is fine
ಸುಮಿತ್ರಾ ಮಹಾಜನ್​​​ ಸಾವಿನ ಸುಳ್ಳು ಸುದ್ದಿ ಟ್ವೀಟ್​ ಮಾಡಿ ಡಿಲೀಟ್​ ಮಾಡಿದ ಶಶಿ ತರೂರ್​

ನವದೆಹಲಿ:ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಿಧನರಾಗಿದ್ದಾರೆಂದು ಟ್ವೀಟ್​ ಮಾಡಿದ್ದ ಕಾಂಗ್ರೆಸ್​ ನಾಯಕ ಶಶಿ ತರೂರ್, ಅದು ಸುಳ್ಳು ಸುದ್ದಿ ಎಂದು ತಿಳಿಯುತ್ತಿದ್ದಂತೆಯೇ ಡಿಲಿಟ್​ ಮಾಡಿದ್ದಾರೆ.

ಶಶಿ ತರೂರ್ ಟ್ವೀಟ್​ ಮಾಡುತ್ತಿದ್ದಂತೆಯೇ ಬಿಜೆಪಿ ನಾಯಕ ಕೈಲಾಶ್​ ವಿಜಯವರ್ಗಿಯಾ ಸೇರಿದಂತೆ ಅನೇಕರು ಈ ವಿಚಾರ ಸತ್ಯವಲ್ಲ. ಮಹಾಜನ್ ಅವರು ಆರೋಗ್ಯವಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಇದರಿಂದ ಎಚೆತ್ತುಕೊಂಡ ತರೂರ್​ ತಕ್ಷಣವೇ ಟ್ವೀಟ್​ ಅಳಿಸಿ ಹಾಕಿದ್ದರು.

ಶಶಿ ತರೂರ್ ಟ್ವೀಟ್​

"ಈ ಸುದ್ದಿ ವಿಶ್ವಾಸಾರ್ಹ ಮೂಲದಿಂದ ಬಂದಿದ್ದೆಂದು ನಾನು ನಂಬಿ ಟ್ವೀಟ್​ ಮಾಡಿದ್ದೆ. ಇದೀಗ ಟ್ವೀಟ್​ ಅಳಿಸಿ ಹಾಕಲು ಸಂತಸವೆನಿಸುತ್ತಿದೆ. ಯಾರೋ ಇಂತಹ ಸುದ್ದಿಗಳನ್ನು ಸೃಷ್ಟಿ ಮಾಡುತ್ತಾರೆಂದರೆ ಆಶ್ಚರ್ಯವೆನಿಸುತ್ತದೆ" ಎಂದು ಶಶಿ ತರೂರ್ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕೈಲಾಶ್​ ವಿಜಯವರ್ಗಿಯಾ ಅವರಿಗೂ ಧನ್ಯವಾದ ತಿಳಿಸಿ, ಸುಮಿತ್ರಾ ಮಹಾಜನ್ ಅವರು ಆರೋಗ್ಯದಿಂದ ದೀರ್ಘಕಾಲ ಬದುಕಲಿ ಎಂದು ಹೇಳಿದ್ದಾರೆ. ಅಲ್ಲದೇ ಮಹಾಜನ್ ಅವರ ಪುತ್ರನಿಗೆ ದೂರವಾಣಿ ಕರೆ ಮಾಡಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.

ಈ ಬಳಿಕ ಸುಮಿತ್ರಾ ಮಹಾಜನ್ ಅವರ ಪುತ್ರ ವಿಡಿಯೋ ಮಾಡಿ, ನಮ್ಮ ತಾಯಿ ಆರೋಗ್ಯವಾಗಿದ್ದು, ಅವರ ಬಗ್ಗೆ ಹರಡಿರುವ ಸುಳ್ಳು ಸುದ್ದಿಗಳಿಗೆ ಉತ್ತರಿಸದಂತೆ ಜನರನ್ನು ಒತ್ತಾಯಿಸಿದ್ದಾರೆ.

ABOUT THE AUTHOR

...view details