ಕರ್ನಾಟಕ

karnataka

By

Published : May 26, 2021, 7:06 PM IST

ETV Bharat / bharat

ನಟ ಕೆಆರ್​ಕೆ ವಿರುದ್ದ ಸಲ್ಮಾನ್ ಮಾನನಷ್ಟ ಮೊಕದ್ದಮೆ; ಸಲ್ಲು ಭಾಯ್ ಕೆರಳಿದ್ಯಾಕೆ?

ಮುಂಬೈನ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಇದರ ವಿಚಾರಣೆಯನ್ನು ಆದಷ್ಟು ಬೇಗನೇ ನಡೆಸುವಂತೆ ಸಲ್ಮಾನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ. ಬಹುಶಃ ಗುರುವಾರವೇ ವಿಚಾರಣೆ ನಡೆಯಬಹುದು ಎಂದು ತಿಳಿದು ಬಂದಿದೆ.

Salman Khan files defamation case against KRK for Radhe review
ನಟ ಕೆಆರ್​ಕೆ ವಿರುದ್ದ ಸಲ್ಮಾನ್ ಮಾನನಷ್ಟ ಮೊಕದ್ದಮೆ; ಭಾಯ್ ಕೆರಳಿದ್ಯಾಕೆ?

ಮುಂಬೈ: ಬಾಲಿವುಡ್​ ಸೂಪರಸ್ಟಾರ್ ಸಲ್ಮಾನ್ ಖಾನ್, ನಟ ಕಮಾಲ್ ಆರ್. ಖಾನ್ (ಕೆಆರ್​ಕೆ) ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತಮ್ಮ ಹೊಸ ಚಿತ್ರ 'ರಾಧೆ' ಬಗ್ಗೆ ವಿಮರ್ಶೆ ಬರೆದಿರುವುದಕ್ಕಾಗಿ ಸಲ್ಮಾನ್ ಖಾನ್ ಕಮಾಲ್ ವಿರುದ್ಧ ಕೇಸ್ ಹಾಕಿದ್ದಾರೆ. ಸಲ್ಮಾನ್ ಖಾನ್ ಕಾನೂನು ತಜ್ಞರ ತಂಡವು ಈ ಕುರಿತು ಕೆಆರ್​ಕೆ ಅವರಿಗೆ ನೋಟಿಸ್​ ಜಾರಿ ಮಾಡಿದೆ.

ತಮಗೆ ಸಲ್ಮಾನ್ ನೋಟಿಸ್​ ನೀಡಿರುವುದನ್ನು ಸ್ವತಃ ಕೆಆರ್​ಕೆ ಖಚಿತ ಪಡಿಸಿದ್ದು, ಈ ಬಗ್ಗೆ ಮೇ 25 ರಂದು ಟ್ವೀಟ್ ಮಾಡಿದ್ದಾರೆ.

ಮುಂಬೈನ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಇದರ ವಿಚಾರಣೆಯನ್ನು ಆದಷ್ಟು ಬೇಗನೇ ನಡೆಸುವಂತೆ ಸಲ್ಮಾನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ. ಬಹುಶಃ ಗುರುವಾರವೇ ವಿಚಾರಣೆ ನಡೆಯಬಹುದು ಎಂದು ತಿಳಿದು ಬಂದಿದೆ.

ಇನ್ನು ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಮಾಲ್ ಆರ್. ಖಾನ್, ತಮ್ಮ ವಿರುದ್ಧ ಹೂಡಲಾದ ಮೊಕದ್ದಮೆ ವಾಪಸ್​ ಪಡೆಯುವಂತೆ ಸಲ್ಮಾನ್ ತಂದೆ ಸಲೀಮ ಖಾನ್ ಅವರಿಗೆ ಮನವಿ ಮಾಡಿದ್ದಾರೆ. ಇನ್ನು ಮುಂದೆ ಯಾವತ್ತೂ ತಾವು ಸಲ್ಮಾನ್ ಚಿತ್ರಗಳ ಬಗ್ಗೆ ವಿಮರ್ಶೆ ಮಾಡುವುದಿಲ್ಲ ಎಂದು ಕೆಆರ್​ಕೆ ಸಲೀಮ ಖಾನ್​ರಿಗೆ ಹೇಳಿದ್ಧಾರೆ.

ಸಲ್ಮಾನ್ ನಟನೆಯ 'ರಾಧೆ; ಯುವರ್ ಮೋಸ್ಟ್​ ವಾಂಟೆಡ್​ ಭಾಯ್' ಚಲನಚಿತ್ರವು ವಿಶ್ವಾದ್ಯಂತ ಈದ್ ಹಬ್ಬದಂದು ಬಿಡುಗಡೆಯಾಗಿತ್ತು. ಕೊರೊನಾ ವೈರಸ್​ ಬಿಕ್ಕಟ್ಟಿನ ಕಾರಣದಿಂದ ಭಾರತದಲ್ಲಿ ಬಹುತೇಕ ಸಿನಿಮಾ ಮಂದಿರಗಳು ಕ್ಲೋಸ್​ ಇರುವ ಕಾರಣ ಸಿನಿಮಾವನ್ನು ಜೀ5 ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆ ಮಾಡಲಾಗಿತ್ತು.

ABOUT THE AUTHOR

...view details