ಕರ್ನಾಟಕ

karnataka

By

Published : Dec 8, 2022, 10:52 AM IST

ETV Bharat / bharat

ಅತ್ಯಾಚಾರ ಆರೋಪದಿಂದ ಮಾನಸಿಕ ಖಿನ್ನತೆ: ಪತ್ನಿ, ಮಕ್ಕಳಿಗೆ ವಿಷಹಾಕಿ ಕೊಂದು ವ್ಯಕ್ತಿ ಆತ್ಮಹತ್ಯೆ

ಅತ್ಯಾಚಾರ ಆರೋಪದಿಂದ ಮಾಸಿಕ ಖಿನ್ನತೆಗೆ ಒಳಗಾಗಿ ಪತ್ನಿ ಮತ್ತು ಮಕ್ಕಳನ್ನು ವಿಷಹಾಕಿ ಕೊಂದು ತಾನೂ ನೇಣಿಗೆ ಶರಣಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Etv Bharat
ಅತ್ಯಾಚಾರ ಆರೋಪದಿಂದ ಮಾಸಿಕ ಖಿನ್ನತೆ:

ಬನ್ಸ್‌ವಾರ(ರಾಜಸ್ಥಾನ):ಅತ್ಯಾಚಾರ ಆರೋಪಕ್ಕೆ ಇಡೀ ಕುಟುಂಬವೇ ಸಾವಿಗೀಡಾದ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಹಾಕಿ ಕೊಂದು ನಂತರ ತಾವೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬನ್ಸ್‌ವಾರ ಜಿಲ್ಲೆಯ ಉದಯಪುರ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಿಠಾಪುರ ನಿವಾಸಿ ಮೋಹನ್ ದಾಮೋರ್ (40) ಆತನ ಪತ್ನಿ ಶಾರದಾ ದಾಮೋರ್(36) 14 ಮತ್ತು 5 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಮೃತರು ಎಂದು ಗುರುತಿಸಲಾಗಿದೆ. ಗುಜರಾತ್ ನ್ಯಾಯಾಲಯದಲ್ಲಿ 40 ವರ್ಷದ ಮೋಹನ್ ದಾಮೋರ್ ವಿರುದ್ಧ ಅತ್ಯಾಚಾರ ಪ್ರಕರಣ ನಡೆಯುತ್ತಿದೆ ಎಂದು ಹೇಳಲಾಗ್ತಿದೆ.

ಈ ಪ್ರಕರಣ ದಾಖಲಾದ ಹಿನ್ನೆಲೆ ಮೋಹನ್ ದಾಮೋರ್ 3 ತಿಂಗಳು ಜೈಲಿನಲ್ಲಿದ್ದರು. ಜೈಲಿನಿಂದ ಬಂದ ಮೇಲೆ ಖಿನ್ನತೆಗೆ ಒಳಗಾಗಿದ್ದ ಮೋಹನ್, ತಮ್ಮ ಪತ್ನಿ ಮತ್ತು ಮಕ್ಕಳಿಗೆ ವಿಷ ಹಾಕಿ ಕೊಂದು ತಾನು ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗ್ತಿದೆ.

ಮೋಹನ್ ಅವರ ತಂದೆ ನಾಥು ಅವರು ಬುಧವಾರ ಸಂಜೆ ಮೋಹನ್ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳ ಹಿಂದೆಯೇ ಆತ ನೇಣು ಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಪ್ರಸ್ತುತ ಎಫ್‌ಎಸ್‌ಎಲ್ ಮತ್ತು ಇತರ ತಂಡಗಳು ತನಿಖೆಯಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಜಾಮೀನಿನ ಮೇಲೆ ಹೊರಬಂದು ಎಸ್ಕೇಪ್: 5 ವರ್ಷದ ಬಳಿಕ ಬೆರಳು ಮುದ್ರೆ ಪರಿಶೀಲನೆ ತಂತ್ರಜ್ಞಾನದಿಂದ ಸಿಕ್ಕಿಬಿದ್ದ

ABOUT THE AUTHOR

...view details