ನವದೆಹಲಿ: ಸಿರಿಧಾನ್ಯಗಳ ಕುರಿತ ಎರಡು ದಿನಗಳ ಜಾಗತಿಕ ಸಮ್ಮೇಳನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಈ ವೇಳೆ 2023ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯದ ವರ್ಷವಾಗಿ ಆಚರಿಸುತ್ತಿರುವ ಹಿನ್ನೆಲೆ ಅದರ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಭಾರತದ ಮನವಿ ಹಿನ್ನೆಲೆ ವಿಶ್ವಸಂಸ್ಥೆ 2023ರನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಘೋಷಿಸಿ, ಈ ಬಗ್ಗೆ ಜಾಗತಿಕ ಅರಿವು ಮೂಡಿಸಲು ಮುಂದಾಗಿದೆ. ಜಾಗತಿಕ ಸಿರಿಧಾನ್ಯದ ಶ್ರೀ ಅನ್ನ ಸಮ್ಮೇಳನ ಇಂದಿನಿಂದ ಆರಂಭವಾಗಿದೆ.
ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ-2023 ಆಚರಣೆ ಮುನ್ನಡೆಸಲು ಭಾರತಕ್ಕೆ ವಿಶ್ವಸಂಸ್ಥೆ ಅವಕಾಶ ನೀಡಿದೆ. ಈ ಹಿನ್ನೆಲೆ ಕೇಂದ್ರ ಸಚಿವಾಲಯ, ರಾಜ್ಯ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಯಲ್ಲಿ ಸಿರಿಧಾನ್ಯದ ಅರಿವು ಮೂಡಿಸುವ, ಪ್ರಚಾರ ನಡೆಸುವ ಕಾರ್ಯಕ್ರಮವನ್ನು ವರ್ಷಾದ್ಯಂತ ಆಚರಿಸಲಾಗುತ್ತಿದೆ. ಸುಗ್ಗಿಯ ಬಳಿಕ ಮೌಲ್ಯವರ್ಧನೆ, ದೇಶಿಯ ಬಳಕೆ ಹೆಚ್ಚಿಸುವುದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಗಿ ಉತ್ಪನ್ನಗಳ ಬ್ರ್ಯಾಂಡಿಂಗ್ಗೆ ನೆರವು ನೀಡಲಾಗುವುದು. ಸಿರಿಧಾನ್ಯಗಳನ್ನು ಮುಖ್ಯವಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿ ಬೆಳೆಯಲಾಗುತ್ತದೆ. ಭಾರತವು ಇದರ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ ನೈಜೀರಿಯಾ ಮತ್ತು ಚೀನಾ ಇದೆ.
ಖಾರಿಫ್ ಬೆಳೆ: ಸಹಾರನ್ ಆಫ್ರಿಕಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಸಿರಿಧಾನ್ಯಗಳು ಇನ್ನೂ ಸಾಂಪ್ರದಾಯಿಕ ಆಹಾರದ ಭಾಗವಾಗಿವೆ. ಭಾರತ 2020ರಲ್ಲಿ ಶೇ 41ರಷ್ಟು ಸಿರಿಧಾನ್ಯಗಳನ್ನು ಉತ್ಪಾದಿಸುವ ಮೂಲಕ ವಿಶ್ವದ ಅತಿದೊಡ್ಡ ಸಿರಿಧಾನ್ಯ ಉತ್ಪಾದಕವಾಗಿದೆ. ಖಾರಿಫ್ ಬೆಳೆಗಳಲ್ಲಿ 9 ರೀತಿಯ ಸಿರಿಧಾನ್ಯಗಳನ್ನು ಬೆಳೆಯಲಾಗುವುದು. ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಇದರ ಉತ್ಪಾದನೆ ಹೆಚ್ಚಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅಡಿಯಲ್ಲಿ ಹೈದರಾಬಾದ್ನ ರಾಜೇಂದ್ರನಗರ ಮಂಡಲದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ (IIMR - ಇಂಡಿಯನ್ ಮಿಲೆಟ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್) ಅನ್ನು ಸ್ಥಾಪಿಸಲಾಗಿದೆ.
ಖಾರಿಫ್ ಬೆಳೆಯಾಗಿ ಭಾರತದಲ್ಲಿ ಈ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಪ್ರಸ್ತುತ 130 ದೇಶಗಳಲ್ಲಿ ಇದರ ಉತ್ಪಾದನೆ ನಡೆಯುತ್ತಿದೆ. ಭಾರತ ಮತ್ತು ಏಷ್ಯಾದ 500 ಕ್ಕಿಂತಲೂ ಹೆಚ್ಚಿನ ಜನರ ಸಂಪ್ರಾದಾಯಿಕ ಆಹಾರ ಇದಾಗಿದೆ. ಈ ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ. ಇದರಲ್ಲಿ ಪ್ರೋಟಿನ್ ಹೆಚ್ಚಿದೆ.
ಸಿರಿಧಾನ್ಯದ ಪ್ರಯೋಜನ..ಆರೋಗ್ಯಕರ ಪೌಷ್ಠಿಕಯುಕ್ತ ಡಯಟ್ ಇದಾಗಿದೆ. ಯಾವುದೇ ಋತುಮಾನಕ್ಕೂ ಹೊಂದಿಕೆಯಾಗುವ ಆಹಾರ ಮತ್ತು ರೈತರ ಜೀವಿತಾವಧಿ ಹೆಚ್ಚಳಕ್ಕೆ ಸಹಾಯಕವಾಗಲಿದೆ. ಅಲ್ಲದೆ,
ಜಗತ್ತಿನ ಆಹಾರ ವ್ಯವಸ್ಥೆಯ ವೈವಿದ್ಯತೆ ಈ ಮೂಲಕ ಸುಧಾರಿಸುತ್ತದೆ.