ಕರ್ನಾಟಕ

karnataka

ETV Bharat / bharat

ಹಸಿವು ತಾಳದೆ ಪದೆ ಪದೇ ಭಿಕ್ಷೆ ಬೇಡಿದ ಬಾಲಕ.. ಕತ್ತು ಹಿಸುಕಿ ಕೊಂದೇಬಿಟ್ಟ ಹೆಡ್​ ಕಾನ್ಸ್​ಟೇಬಲ್​! - ದಾತಿಯಾದಲ್ಲಿ ಬಾಲಕನನ್ನು ಕೊಲೆ ಮಾಡಿದ ಪೊಲೀಸ್​

ಆ ಬಾಲಕ ಹಸಿವಿನಿಂದ ಬಳಲುತ್ತಿದ್ದ. ಹೀಗಾಗಿ ಅಲ್ಲಿದ್ದ ಪೊಲೀಸಪ್ಪನ ಬಳಿ ತನ್ನ ಹಸಿವು ನೀಗಿಸಿಕೊಳ್ಳಲು ಹಣಕ್ಕಾಗಿ ಭಿಕ್ಷೆ ಬೇಡಿದ್ದಾನೆ. ಸದ್ಯ ನನ್ನ ಬಳಿ ಹಣವಿಲ್ಲವೆಂದು ಪೊಲೀಸಪ್ಪ ಹೇಳಿ ಕಳಿಸಿದ್ದಾಋಏ. ಆದ್ರೂ ಸಹಿತ ಆ ಬಾಲಕ ಪದೇ ಪದೇ ಹಣ ಕೇಳಿದ್ದಾನೆ. ಇದರಿಂದ ಕೋಪಗೊಂಡ ಪೊಲೀಸ್​ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಈ ಘಟನೆ ಮಧ್ಯಪ್ರದೇಶದ ದಾತಿಯಾದಲ್ಲಿ ನಡೆದಿದೆ.

MP cop kills boy for asking for money to buy food  Cop kills boy in Datia  Madhya Pradesh crime news  ಮಧ್ಯಪ್ರದೇಶದಲ್ಲಿ ಊಟಕ್ಕಾಗಿ ಹಣ ಕೇಳಿದ ಬಾಲಕನನ್ನು ಕೊಲೆ ಮಾಡಿದ ಪೊಲೀಸ್​ ದಾತಿಯಾದಲ್ಲಿ ಬಾಲಕನನ್ನು ಕೊಲೆ ಮಾಡಿದ ಪೊಲೀಸ್​ ಮಧ್ಯಪ್ರದೇಶ ಅಪರಾಧ ಸುದ್ದಿ
ಹುಡುಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪೊಲೀಸಪ್ಪ

By

Published : May 12, 2022, 12:57 PM IST

ದಾತಿಯಾ (ಮಧ್ಯಪ್ರದೇಶ):ದಾತಿಯಾ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ರಥಯಾತ್ರೆಯ ಸಂಭ್ರಮ ಭರ್ಜರಿಯಾಗಿ ನಡೆದಿದ್ದ ವೇಳೆ ಹಸಿವಿನಿಂದ ಬಳಲುತ್ತಿದ್ದ ಬಾಲಕನೋರ್ವ ಕೊಲೆಗೀಡಾಗಿದ್ದಾನೆ. ಆಹಾರ ಖರೀದಿಸಲು ಪದೆ ಪದೇ ಹಣ ಕೇಳಿದ್ದ ಆರು ವರ್ಷದ ಬಾಲಕನನ್ನು ಹೆಡ್​ ಕಾನ್ಸ್​​ಟೇಬಲ್​ವೋರ್ವ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಪೊಲೀಸ್ ಕಾನ್ಸ್‌ಟೇಬಲ್ ರವಿ ಶರ್ಮಾ ಕೊಲೆ ಆರೋಪಿ.

ಏನಿದು ಘಟನೆ.. ಕಳೆದ ಗುರುವಾರದಂದು ದತಿಯಾದಲ್ಲಿ ರಥಯಾತ್ರೆ ನಡೆಯುತ್ತಿತ್ತು. ರಥಯಾತ್ರೆ ಹಿನ್ನೆಲೆ ಪೊಲೀಸ್​ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಈ ಪಡೆಯಲ್ಲಿ ಪೊಲೀಸ್ ಹೆಡ್​ ಕಾನ್ಸ್‌ಟೇಬಲ್ ರವಿ ಶರ್ಮಾ ಸಹ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಹಸಿವು ತಾಳಲಾರದೇ ಬಾಲಕನೊಬ್ಬ ಹೆಡ್​ ಕಾನ್ಸ್‌ಟೇಬಲ್ ಶರ್ಮಾ ಬಳಿ ತೆರಳಿ ಹಣಕ್ಕಾಗಿ ಭಿಕ್ಷೆ ಬೇಡಿದ್ದಾನೆ. ಶರ್ಮಾ ಮೊದಲು ಆ ಬಾಲಕನನ್ನು ವಾಪಸ್​ ಕಳುಹಿಸಿದ್ದಾನೆ. ಆದ್ರೂ ಸಹ ಆ ಬಾಲಕ ಪದೆ ಪದೇ ಶರ್ಮಾ ಬಳಿ ಬಂದು ಭಿಕ್ಷೆ ಬೇಡುತ್ತಿದ್ದನು. ಇದರಿಂದ ಕೋಪಗೊಂಡ ಹೆಡ್​ ಕಾನ್ಸ್‌ಟೇಬಲ್ ಶರ್ಮಾ ಅವರು ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಬಾಲಕನ ಶವವನ್ನು ಗ್ವಾಲಿಯಾರ್​ನ ನಿರ್ಜನ ಪ್ರದೇಶದಲ್ಲಿ ಎಸೆದು ಏನು ಅರಿಯದಂತೆ ಇದ್ದನು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಓದಿ:ಲೋಕೋಪಯೋಗಿ ಇಂಜಿನಿಯರ್ ಪರೀಕ್ಷೆ ಅಕ್ರಮ: ಆರೋಪಿ ರುದ್ರಗೌಡ 10 ದಿನ ಪೊಲೀಸ್ ವಶಕ್ಕೆ

ಬಾಲಕನ ಶವ ಪತ್ತೆ: ದಾತಿಯಾ ನಿವಾಸಿ ಸಂಜೀವ್ ಸೇನ್ ತನ್ನ ಮಗ ಮಯಾಂಕ್ (6 ವರ್ಷ)ನನ್ನು ಮೇ 5 ರಂದು ಯಾರೋ ಅಪರಿಚಿತ ವ್ಯಕ್ತಿ ಕಿಡ್ನ್ಯಾಪ್​ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾಹಿತಿ ಕಲೆಹಾಕಲು ತನಿಖೆ ಆರಂಭಿಸಿದ್ದರು. ಈ ವೇಳೆ ಝಾನ್ಸಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ವಾಲಿಯರ್‌ನ ವಿವೇಕಾನಂದ ಚೌರಾಹ ಪ್ರದೇಶದಲ್ಲಿ ಬಾಲಕನ ಶವ ಪತ್ತೆಯಾಗಿದೆ. ಈ ಬಾಲಕನ ಶವ ಮಯಾಂಕ್​ನದ್ದು ಎಂದು ಗುರುತಿಸಲಾಯಿತು ಎಂದು ಪೊಲೀಸ್​ ಅಧಿಕಾರಿ ತಿಳಿಸಿದರು.

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?:ಬಾಲಕ ನಾಪತ್ತೆಯಾಗಿದ್ದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಆ ವ್ಯಕ್ತಿಯನ್ನು ಪೊಲೀಸ್ ಹೆಡ್ ಕಾನ್ಸ್​ಟೇಬಲ್ ರವಿ ಶರ್ಮಾ ಎಂದು ಗುರುತಿಸಲಾಗಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಾಗ ಆತ ತಪ್ಪೊಪ್ಪಿಕೊಂಡಿದ್ದಾರೆ.

ಮಾನಸಿಕ ಒತ್ತಡ: ಕಳೆದ ಹಲವು ತಿಂಗಳಿಂದ ಶರ್ಮಾ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ವೇಳೆ ಬಾಲಕ ನಿರಂತರವಾಗಿ ಹಣ ಕೇಳಿದಾಗ ಸಿಟ್ಟಿಗೆದ್ದಿದ್ದಾರೆ. ಕೋಪದಲ್ಲಿ ಬಾಲಕನನ್ನು ಪೊಲೀಸ್​ ವಾಹನದ ಹಿಂಬದಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಆ ಶವವನ್ನು ಕಾರಿನಲ್ಲಿ ಇಟ್ಟುಕೊಂಡು ಸುಮಾರು 70 ಕಿ.ಮೀ ದೂರದ ಗ್ವಾಲಿಯಾರ್ನ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಎಸೆದಿದ್ದಾರೆ ಎಂದು ಆರೋಪಿ ವಿಚಾರಣೆ ವೇಳೆ ಹೇಳಿದ್ದಾರೆ ಅಂತಾ ಎಸ್ಪಿ ರಾಥೋಡ್ ತಿಳಿಸಿದ್ದಾರೆ.

ABOUT THE AUTHOR

...view details