ಶ್ರೀಕಾಕುಳಂ:ಎಚ್ಚರ್ಲ ತಾಲೂಕಿ ಮುದ್ದಾಡಪೇಟ್ದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಹೆಂಡ್ತಿಯ ಜೊತೆ ಸಹೋದರಿಯನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಿಂದಾಗಿ ಜಿಲ್ಲೆಯ ಜನತೆ ದಿಗ್ಭ್ರಮೆಗೊಂಡಿದ್ದಾರೆ.
ಮುದ್ದಾಡಪೇಟೆ ನಿವಾಸಿ ವಿ.ಸಿ ಅಪ್ಪನ್ನ ತನ್ನ ಹೆಂಡ್ತಿ ಅಪ್ಪಮ್ಮ ಮತ್ತು ಸಹೋದರಿ ಲಕ್ಷ್ಮಿಯನ್ನು ಕುಡಿದ ಮತ್ತಿನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ವೇಳೆ, ಅಡ್ಡ ಬಂದ ತಂದೆ ಮತ್ತು ಇನ್ನೊಬ್ಬಳ ಸಹೋದರಿಗೆ ಗಾಯಗೊಳಿಸಿದ್ದಾರೆ. ಬಳಿಕ ಅಪ್ಪನ್ನ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ.