ಕರ್ನಾಟಕ

karnataka

By

Published : Jul 2, 2022, 1:29 PM IST

ETV Bharat / bharat

ಪಿಎಂ ಮೋದಿ ಬಿಟ್ಟು ಯಶವಂತ್​ ಸಿನ್ಹಾ ಆಹ್ವಾನ.. ಮತ್ತೆ ಶಿಷ್ಟಾಚಾರ ಪಾಲಿಸದ ಕೆಸಿಆರ್​

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಯಶವಂತ್​ ಸಿನ್ಹಾ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದು, ಸಿಎಂ ಕೆಸಿಆರ್​ ಅವರು ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡಿದ್ದಾರೆ.

ಮತ್ತೆ ಶಿಷ್ಟಾಚಾರ ಪಾಲಿಸದ ಕೆಸಿಆರ್​
ಮತ್ತೆ ಶಿಷ್ಟಾಚಾರ ಪಾಲಿಸದ ಕೆಸಿಆರ್​

ಹೈದರಾಬಾದ್​:ಪ್ರಧಾನಮಂತ್ರಿ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೆ, ಅವರನ್ನು ಆಯಾ ರಾಜ್ಯದ ಮುಖ್ಯಮಂತ್ರಿಗಳೇ ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಳ್ಳುವುದು ಶಿಷ್ಟಾಚಾರ. ಇದನ್ನು ಬಿಟ್ಟು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರೇಶೇಖರ ರಾವ್ ಅವರು ಪ್ರಧಾನಿಯ ಬದಲಾಗಿ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾದ ಯಶವಂತ್​ ಸಿನ್ಹಾ ಅವರನ್ನು ವಿಮಾನ ನಿಲ್ದಾಣಕ್ಕೆ ತೆರಳಿ ಆಹ್ವಾನಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ತಮಗೆ ಬೆಂಬಲ ಕೋರಲು ಯಶವಂತ್ ಸಿನ್ಹಾ ಅವರು ತೆಲಂಗಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ, ಸಿಎಂ ಕೆ. ಚಂದ್ರಶೇಖರ್​ರಾವ್​ ಅವರು ಸಂಪುಟ ಸಹೋದ್ಯೋಗಿಗಳ ಜೊತೆಗೂಡಿ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಬಂದು ಸಿನ್ಹಾ ಅವರನ್ನು ಬರಮಾಡಿಕೊಂಡಿದ್ದಾರೆ. ಬಳಿಕ ಟಿಆರ್​ಎಸ್​ ಕಾರ್ಯಕರ್ತರು ಹಮ್ಮಿಕೊಂಡಿರುವ ಜಲವಿಹಾರ್​ ಬೈಕ್​ ರ್ಯಾಲಿಯಲ್ಲಿ ಭಾಗಿಯಾದರು. ಯಶವಂತ್​ ಸಿನ್ಹಾ ಅವರು ತಮ್ಮನ್ನು ಬೆಂಬಲಿಸಲು ಕೋರಿ ಸಭೆ ಆಯೋಜಿಸಿದ್ದು, ಇದರಲ್ಲಿ ಸಿಎಂ ಭಾಗವಹಿಸುವ ಸಾಧ್ಯತೆ ಇದೆ.

ಇದು ಮೂರನೇ ಸಲ:ಈ ಹಿಂದೆ ಪ್ರಧಾನಿ ಮೋದಿ ಅವರು ಹೈದರಾಬಾದ್​ಗೆ 2 ಬಾರಿ ಭೇಟಿ ನೀಡಿದಾಗಲೂ ಅನಾರೋಗ್ಯ ಮತ್ತು ಕೆಲಸ ಒತ್ತಡ ಕಾರಣ ನೀಡಿ ಬರಮಾಡಿಕೊಳ್ಳುವುದರಿಂದ ತಪ್ಪಿಸಿಕೊಂಡಿದ್ದರು. ಇದೀಗ ಮೂರನೇ ಸಲವೂ ಗೈರಾಗಲಿದ್ದಾರೆ.

ಓದಿ:ಪ್ರಧಾನಿ ಸ್ವಾಗತಕ್ಕೆ ತೆರಳುತ್ತಿಲ್ಲ ಸಿಎಂ ಕೆಸಿಆರ್.. ಆರು ತಿಂಗಳಲ್ಲಿ ಇದು ಮೂರನೇ ಬಾರಿ

ABOUT THE AUTHOR

...view details