ಕರ್ನಾಟಕ

karnataka

ETV Bharat / bharat

Live Update: ಬೊಮ್ಮಾಯಿ ಟೀಂ ರೆಡಿ; 29 ಮಂದಿಗೆ ಸಚಿವಗಿರಿ ಭಾಗ್ಯ

By

Published : Aug 4, 2021, 10:53 AM IST

Updated : Aug 4, 2021, 3:45 PM IST

Karnataka New Cabinet Formation Live Update
ಸಚಿವ ಸಂಪುಟ ರಚನೆ

15:29 August 04

ಕೊನೆಯವರಾಗಿ ಮುನಿರತ್ನ ಪ್ರಮಾಣ ವಚನ ಸ್ವೀಕಾರ

  • ಬೆಂಗಳೂರಿನ ಆರ್‌ ಆರ್‌ ನಗರ ಕ್ಷೇತ್ರದ ಶಾಸಕ ಮುನಿರತ್ನ ಪ್ರಮಾಣ ವಚನ ಸ್ವೀಕಾರ
  • ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ತಾವರ್‌ ಚಂದ್‌ ಗೆಹ್ಲೋಟ್‌ ಹಾಗೂ ನೂತನ ಸಚಿವರಿಂದ ಫೋಟೋ ಸೆಷನ್‌

15:22 August 04

ಎಂಟಿಬಿ, ಬಿಸಿ ನಾಗೇಶ್‌, ಹಾಲಪ್ಪ ಆಚಾರ್‌ ಪ್ರಮಾಣ ವಚನ ಸ್ವೀಕಾರ

  • ವಿಧಾನ ಪರಿಷತ್‌ ಸದಸ್ಯ ಎಂ.ಟಿ.ಬಿ ನಾಗರಾಜ್, ಕೆ.ಆರ್.ಪೇಟೆ ಶಾಸಕ ಕೆ.ಸಿ ನಾರಾಯಣ್ ಗೌಡ
  • ತಿಪಟೂರು ಶಾಸಕ ಬಿ.ಸಿ ನಾಗೇಶ್, ಕಾರ್ಕಳದ ಸುನೀಲ್‌ ಕುಮಾರ್‌, ಯಲಬುರಗದ ಹಾಲಪ್ಪ ಆಚಾರ್‌ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

15:16 August 04

ನೂತನ ಸಚಿವರಿಗೆ ಮಾಜಿ ಸಿಎಂ ಬಿಎಸ್‌ವೈ ಶುಭಾಶಯ

  • ಇಂದು ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೂ ಮೊದಲು ನನ್ನನ್ನು ಭೇಟಿ ಮಾಡಲು ಆಗಮಿಸಿದ ಮುಖ್ಯಮಂತ್ರಿ ಬಿಎಸ್‌ ಬೊಮ್ಮಾಯಿ ಮತ್ತು ಪಕ್ಷದ ಇನ್ನಿತರ ಮುಖಂಡರಿಗೆ ಶುಭ ಹಾರೈಸಲಾಯಿತು - ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟ್

15:06 August 04

ಡಾ.ಕೆ.ಸುಧಾಕರ್‌ ಪ್ರತಿಜ್ಞಾವಿಧಿ ಸ್ವೀಕಾರ

  • ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಕೆ.ಸುಧಾಕರ್, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಕೆ.ಗೋಪಾಲಯ್ಯ ದೇವರ ಹೆಸರಿನಲ್ಲಿ, ಶಶಿಕಲಾ ಜೊಲ್ಲೆ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

15:01 August 04

ಬಸವಣ್ಣ ಹೆಸರಿನಲ್ಲಿ ಪ್ರಮಾಣ ವಚನ

  • ಶಿವರಾಂ ಹೆಬ್ಬಾರ್, ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜು ದೇವರ ಹೆಸರಿನಲ್ಲಿ ಹಾಗೂ ರೈತರು, ಬಸವಣ್ಣ ಹೆಸರಿನಲ್ಲಿ ಬಿ.ಸಿ. ಪಾಟೀಲ್ ಪ್ರಮಾಣ

14:53 August 04

ರೈತರು, ಸಂತ ಸೇವಾಲಾಲ್ ಹೆಸರಿನಲ್ಲಿ ಪ್ರಮಾಣ ವಚನ

  • ಡಾ.ಸಿ.ಎನ್.ಅಶ್ವತ್ಥ ನಾರಾಯಣ ದೇವರ ಹೆಸರಿನಲ್ಲಿ, ಆನಂದ್‌ ಸಿಂಗ್‌ ವಿಜಯನಗರ, ಪಂಪ ವಿರೂಪಾಕ್ಷ, ತಾಯಿ ಚಾಮುಂಡಿ ಹೆಸರಿನಲ್ಲಿ,
  • ಕೋಟಾ ಶ್ರೀನಿವಾಸ ಪೂಜಾರಿ ದೇವರ ಹೆಸರಿನಲ್ಲಿ, ಪ್ರಭು ಚೌಹ್ಹಾನ್ ಗೋಮಾತಾ, ಸಂತ ಸೇವಾಲಾಲ್ ಹೆಸರಿನಲ್ಲಿ,
  • ಬಿಳಿಗಿ ಶಾಸಕ ಮುರುಗೇಶ್‌ ನಿರಾಣಿ ದೇವರು, ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕಾರ

14:42 August 04

ಅಶೋಕ್‌, ಕಾರಜೋಳ, ಈಶ್ವರಪ್ಪ, ಬಿ.ಶ್ರೀರಾಮುಲು ಪ್ರಮಾಣ ವಚನ ಸ್ವೀಕಾರ

  • ಬೆಂಗಳೂರಿನ ಪದ್ಮನಾಭ ನಗರದ ಶಾಸಕ ಆರ್‌.ಅಶೋಕ್‌, ಮುಧೋಳ ಕ್ಷೇತ್ರದ ಗೋವಿಂದ ಕಾರಜೋಳ,
  • ಶಿವಮೊಗ್ಗದ ಕ್ಷೇತ್ರದ ಕೆ.ಎಸ್‌.ಈಶ್ವರಪ್ಪ, ಮೊಳಕಾಲುಮ್ಮೂರು ಶಾಸಕ ಬಿ.ಶ್ರೀರಾಮುಲು ಪ್ರಮಾಣ ವಚನ ಸ್ವೀಕಾರ

14:37 August 04

ಅರಗ ಜ್ಞಾನೇಂದ್ರ ಪ್ರಮಾಣ ವಚನ ಸ್ವೀಕಾರ

  • ಅರಗ ಜ್ಞಾನೇಂದ್ರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

14:36 August 04

ಜೆ ಸಿ ಮಾಧುಸ್ವಾಮಿ ಪ್ರಮಾಣ

  • ಜೆ ಸಿ ಮಾಧುಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

14:15 August 04

ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ

  • ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ
  • ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರಿಂದ ಪ್ರತಿಜ್ಞಾವಿಧಿ ಬೋಧನೆ
  • ಮೊದಲಿಗೆ ಗೋವಿಂದ ಕಾರಜೋಳ ಪ್ರಮಾಣವಚನ ಸ್ವೀಕಾರ
  • ಎರಡನೆಯದಾಗಿ ಕೆ.ಎಸ್​ ಈಶ್ವರಪ್ಪ ಪ್ರಮಾಣ

13:31 August 04

ಸವದಿ ಧನ್ಯವಾದ

  • ಜನತೆಗೆ ಲಕ್ಷ್ಮಣ ಸವದಿ ಧನ್ಯವಾದ
  • ಕಳೆದ ಎರಡು ವರ್ಷ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದ ಮಾಜಿ ಡಿಸಿಎಂ
  • ಸಚಿವ ಸ್ಥಾನ ಕೈ ತಪ್ಪಿದ್ದರಿಂದ ನಿರಾಸೆ
  • ಬಿಎಸ್​ವೈ ಸಂಪುಟದಲ್ಲಿ ಡಿಸಿಎಂ, ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ
  • ಫೇಸ್​ಬುಕ್​ ಫೋಸ್ಟ್ ಮೂಲಕ ಧನ್ಯವಾದ ಹೇಳಿದ ಮಾಜಿ ಸಚಿವ

13:01 August 04

12 ಜಿಲ್ಲೆಗಳಿಗೆ ಸಿಗದ ಪ್ರಾತಿನಿಧ್ಯ

6 ಜಿಲ್ಲೆಗಳಿಂದ ತಲಾ ಇಬ್ಬರಿಗೆ ಸ್ಥಾನ

ಬಿಎಸ್​ವೈ ಸಂಪುಟದಲ್ಲೂ ಹಲವು ಜಿಲ್ಲೆಗಳಿಗೆ ಸಿಕ್ಕಿರಲಿಲ್ಲ ಪ್ರಾತಿನಿಧ್ಯ

ಪ್ರಾತಿನಿಧ್ಯ ಸಿಗದ ಜಿಲ್ಲೆಗಳಿವು :

  • ಮೈಸೂರು
  • ಕಲಬುರಗಿ
  • ರಾಮನಗರ
  • ಕೊಡಗು
  • ರಾಯಚೂರು
  • ಹಾಸನ
  • ವಿಜಯಪುರ
  • ಬಳ್ಳಾರಿ
  • ದಾವಣಗೆರೆ
  • ಕೋಲಾರ
  • ಯಾದಗಿರಿ
  • ಚಿಕ್ಕಮಗಳೂರು

12:59 August 04

ನೂತನ ಸಚಿವರಿಗೆ ಕಾರುಗಳು ರೆಡಿ

  • ನೂತನ ಸಚಿವರಿಗಾಗಿ ರಾಜಭವನಕ್ಕೆ ತೆರಳಿದ ಕಾರುಗಳು
  • ಕುಮಾರಕೃಪಾ ಅತಿಥಿಗೃಹದಿಂದ ರಾಜಭವನಕ್ಕೆ ತೆರಳಿದ ಕಾರುಗಳು
  • ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವವರಿಗೆ ಸರ್ಕಾರಿ ಕಾರು
  • ಮಧ್ಯಾಹ್ನ 2:15 ನೂತನ ಸಚಿವರಿಂದ ಪ್ರತಿಜ್ಞಾ ವಿಧಿ ಸ್ವೀಕಾರ

12:34 August 04

ಬಿಎಸ್​ವೈಗೆ ನೂತನ ಸಚಿವರಿಂದ ಧನ್ಯವಾದ

  • ಬಿಎಸ್​ವೈ ನಿವಾಸಕ್ಕೆ ತೆರಳಿದ ನೂತನ ಸಚಿವರು
  • ಸಿಎಂ ಸುದ್ದಿಗೋಷ್ಠಿ ಬಳಿಕ ಕಾವೇರಿ ನಿವಾಸಕ್ಕೆ ಭೇಟಿ
  • ಮಾಜಿ ಸಿಎಂಗೆ ಧನ್ಯವಾದ ಹೇಳಿದ ನೂತನ ಸಚಿವರ ತಂಡ
  • ಹೂಗುಚ್ಚ ನೀಡಿ ಅಭಿನಂದನೆ
  • ನೂತನ ಸಚಿವರಿಗೆ ಸಿಎಂ ಬೊಮ್ಮಾಯಿ ಸಾಥ್

12:25 August 04

ಬಿಎಸ್​ವೈ ಸಂಪುಟದ 5 ಮಂದಿಗೆ ಕೊಕ್​

ಸಚಿವ ಸ್ಥಾನ ಕಳೆದುಕೊಂಡವರು

  • ಜಗದೀಶ್ ಶೆಟ್ಟರ್
  • ಅರವಿಂದ ಲಿಂಬಾವಳಿ
  • ಲಕ್ಷಣ ಸವದಿ
  • ಎಸ್.​ ಸುರೇಶ್ ಕುಮಾರ್​
  • ಸಿ.ಪಿ ಯೋಗೇಶ್ವರ್ ​

12:01 August 04

ನೂತನ ಸಂಪುಟದಲ್ಲಿ ಲಿಂಗಾಯತರಿಗೆ ಸಿಂಹಪಾಲು

  • ಇಂದು 29 ಜನರು ಸಚಿವರಾಗಿ ಪ್ರಮಾಣ ವಚನ
  • ಡಿಸಿಎಂ ಸ್ಥಾನ ತೆಗೆದು ಹಾಕಿದ ಸಿಎಂ ಬೊಮ್ಮಾಯಿ
  • ಹೈಕಮಾಂಡ್ ಸೂಚನೆಯಂತೆ ಡಿಸಿಎಂ ಸ್ಥಾನ ಇಲ್ಲ
  • ಜಾತಿವಾರು ಲೆಕ್ಕಚಾರ ಹಾಕಿ ಸಚಿವ ಸ್ಥಾನ
  • ಒಬಿಸಿ 7, ಎಸ್​ಸಿ 3, ಎಸ್​ಟಿ 1, ಒಕ್ಕಲಿಗ 7, ಲಿಂಗಾಯತ 8
  • ಮತ್ತು, ರೆಡ್ಡಿ ಸಮುದಾಯ ಒಬ್ಬರು ಮತ್ತು ಓರ್ವ ಮಹಿಳೆಗೆ ಸಂಪುಟದಲ್ಲಿ ಸ್ಥಾನ
  • ನೂತನ ಸಚಿವರ ಪಟ್ಟಿ ರಾಜ್ಯಪಾಲರಿಗೆ ರವಾನಿಸಿದ ಸಿಎಂ

11:56 August 04

ನೂತನ ಸಂಪುಟದಲ್ಲಿ ಬೆಂಗಳೂರಿಗೆ ಏಳು ಸ್ಥಾನ

  • ಬೆಂಗಳೂರು ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನ
  • ಬೆಂಗಳೂರು ನಗರ ಜಿಲ್ಲೆಯಿಂದ 7 ಮಂದಿಗೆ ಮಣೆ
  • ಆರ್​. ಆಶೋಕ್ - ಪದ್ಮನಾಭ ನಗರ
  • ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರ
  • ಎಸ್.ಟಿ.ಸೋಮಶೇಖರ್- ಯಶವಂತಪುರ
  • ಭೈರತಿ‌ ಬಸವರಾಜ - ಕೆ.ಆರ್ ಪುರಂ
  • ಮುನಿರತ್ನ- ಆರ್.ಆರ್ ನಗರ
  • ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
  • ವಿ.ಸೋಮಣ್ಣ- ಗೋವಿಂದ್ ರಾಜನಗರ

11:48 August 04

ನೂತನ ಸಚಿವರ ಪಟ್ಟಿ

ಸಿಎಂ ನೇರವಾಗಿ ಕರೆ ಮಾಡಿ ಪ್ರಮಾಣ ವಚನಕ್ಕೆ ಆಹ್ವಾನ ನೀಡಿರುವ ಶಾಸಕರ ಪಟ್ಟಿ

  • ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
  • ಆರ್.ಅಶೋಕ್ - ಪದ್ಮನಾಭ ನಗರ
  • ಬಿ.ಸಿ. ಪಾಟೀಲ್ - ಹಿರೇಕೆರೂರು
  • ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರ
  • ಉಮೇಶ್ ಕತ್ತಿ- ಹುಕ್ಕೇರಿ
  • ಎಸ್.ಟಿ.ಸೋಮಶೇಖರ್- ಯಶವಂತಪುರ
  • ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ
  • ಬೈರತಿ‌ ಬಸವರಾಜ - ಕೆ.ಆರ್ ಪುರಂ
  • ಮುರುಗೇಶ್ ನಿರಾಣಿ - ಬಿಳಿಗಿ
  • ಶಿವರಾಂ ಹೆಬ್ಬಾರ್- ಯಲ್ಲಾಪುರ
  • ಶಶಿಕಲಾ ಜೊಲ್ಲೆ- ನಿಪ್ಪಾಣಿ
  • ಕೆ.ಸಿ ನಾರಾಯಣ್ ಗೌಡ - ಕೆ‌ಆರ್ ಪೇಟೆ
  • ಸುನೀಲ್ ಕುಮಾರ್ - ಕಾರ್ಕಳ
  • ಅರಗ ಜ್ಞಾನೇಂದ್ರ - ತೀರ್ಥ ಹಳ್ಳಿ
  • ಗೋವಿಂದ ಕಾರಜೋಳ -ಮುಧೋಳ
  • ಮುನಿರತ್ನ- ಆರ್ ಆರ್ ನಗರ
  • ಎಂ.ಟಿ.ಬಿ ನಾಗರಾಜ್ - ಎಂ.ಎಲ್.ಸಿ
  • ಗೋಪಾಲಯ್ಯ-   ಮಹಾಲಕ್ಷ್ಮಿ ಲೇಔಟ್
  • ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
  • ಹಾಲಪ್ಪ ಆಚಾರ್ - ಯಲಬುರಗ
  • ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ
  • ಕೋಟಾ ಶ್ರೀನಿವಾಸ ಪೂಜಾರಿ - ಎಂ.ಎಲ್. ಸಿ
  • ಪ್ರಭು ಚೌಹ್ಹಾನ್- ಔರಾದ್
  • ವಿ.ಸೋಮಣ್ಣ- ಗೋವಿಂದ್ ರಾಜನಗರ
  • ಎಸ್ ಅಂಗಾರ-ಸುಳ್ಯ
  • ಆನಂದ್ ಸಿಂಗ್ - ಹೊಸಪೇಟೆ
  • ಸಿ.ಸಿ‌ ಪಾಟೀಲ್ - ನರಗುಂದ
  • ಬಿ.ಸಿ ನಾಗೇಶ್ - ತಿಪಟೂರು
  • ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

11:44 August 04

ಬಿಎಸ್​ವೈ ನಿವಾಸಕ್ಕೆ ತೆರಳಿದ ಸಿಎಂ

ಬಿಎಸ್​ವೈ ನಿವಾಸಕ್ಕೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ

ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ

11:33 August 04

ಬೆಲ್ಲದ್​ಗೆ ತಪ್ಪಿದ ಸ್ಥಾನ

ಸಿಎಂ ರೇಸ್​​ನಲ್ಲಿದ್ದ ಅರವಿಂದ್ ಬೆಲ್ಲದ್​ಗೆ ಸಚಿವ ಸ್ಥಾನ ಅನುಮಾನ?

ಧಾರವಾಡ ಪಶ್ಚಿಮ ಶಾಸಕ ಅರವಿಂದ್ ಬೆಲ್ಲದ್​ ಬಾರದ ಕರೆ

ಸಿಎಂ ಬೊಮ್ಮಾಯಿ ಅವರಿಂದ ಕರೆ ಬಾರದೆ ನಿರಾಸೆ

ವರಿಷ್ಠರ ಲಾಬಿಯಿಂದ ಬೆಲ್ಲದ್​ಗೆ ತಪ್ಪಿದ ಸಚಿವ ಸ್ಥಾನ?

11:23 August 04

ಕಾವೇರಿ ನಿವಾಸದ ಪ್ರತಿಭಟನೆ

  • ಕಾವೇರಿ ನಿವಾಸದ ಬಳಿ ಹೈಡ್ರಾಮಾ
  • ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಕಾವೇರಿ
  • ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬೆಂಬಲಿಗರಿಂದ ಪ್ರತಿಭಟನೆ
  • ಶ್ರೀನಿವಾಸ ಶೆಟ್ಟಿಗೆ ಸಚಿವ ಸ್ಥಾನ ನೀಡದಕ್ಕೆ ಆಕ್ರೋಶ
  • ಬಿಎಸ್​ವೈಗೆ ಹೂಗುಚ್ವ ನೀಡಿ ವಿನೂತನ ರೀತಿಯ ಪ್ರತಿಭಟನೆ

11:05 August 04

ಶಿವಮೊಗ್ಗದ ಇಬ್ಬರಿಗೆ ಸಚಿವ ಸ್ಥಾನ ?

  • ಶಿವಮೊಗ್ಗ ಜಿಲ್ಲೆಯಇಬ್ಬರು ಪ್ರಭಾವಿ ಶಾಸಕರಿಗೆ ಸಚಿವ ಸ್ಥಾನ
  • ಶಾಸಕ ಆರಗ ಜ್ಞಾನೇಂದ್ರ ಮತ್ತು ಕೆ.ಎಸ್​ ಈಶ್ವರಪ್ಪಗೆ ಪಟ್ಟ
  • ಈಶ್ವರಪ್ಪ ಮಗ ಕಾಂತೇಶ್ ಆಡಿಯೋ ವೈರಲ್
  • ಇಬ್ಬರು ಶಾಸಕರ ಅಭಿಮಾನಗಳಲ್ಲಿ ಹರ್ಷ

10:21 August 04

ಎಲ್ಲ ಕುತೂಹಲಗಳಿಗೆ ಬಿತ್ತು ತೆರೆ

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಡೆಗೂ ಮುಹೂರ್ತ ಫಿಕ್ಸ್​ ಆಗಿದೆ. ಇಂದು ಮಧ್ಯಾಹ್ನ 2.15 ಕ್ಕೆ ನೂತನ ಸಚಿವರ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

  • ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ
  • ರಾಜಭವನದ ಸುತ್ತ ಬಾರಿ ಬಂದೋಬಸ್ತ್
  • ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಭದ್ರತೆ
  • ಆರು ಡಿಸಿಪಿಗಳು, ಎಸಿಪಿ, ಇನ್ಸ್‌ಪೆಕ್ಟರ್​​ಗಳು ಸೇರಿ 700 ಮಂದಿ ಪೊಲೀಸರ ನಿಯೋಜನೆ
  • ಪಾಸ್ ಇರುವವರಿಗೆ ಮಾತ್ರ ರಾಜಭವನ ಪ್ರವೇಶ
  • ಜನ ಜಂಗುಳಿ ಜಾಸ್ತಿಯಾದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ
  • ರಾಜಭವನದ ಸುತ್ತ ಸಂಚಾರ ದಟ್ಟಣೆಯಾಗದಂತೆ ಮುನ್ನೆಚ್ಚರಿಕೆ
  • ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ರಾಜಭವನ ರಸ್ತೆಯಲ್ಲಿ ಸಂಚಾರ ಸ್ಥಗಿತ
  • ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ
Last Updated : Aug 4, 2021, 3:45 PM IST

ABOUT THE AUTHOR

...view details