ಕರ್ನಾಟಕ

karnataka

By

Published : Oct 23, 2022, 12:54 PM IST

Updated : Oct 23, 2022, 1:01 PM IST

ETV Bharat / bharat

ಸೋನಿಯಾ ಗಾಂಧಿ ಅಧ್ಯಕ್ಷತೆಯ 2 ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿ ರದ್ದು

ಸೋನಿಯಾ ಗಾಂಧಿ ಅಧ್ಯಕ್ಷತೆಯ 2 ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ.

Sonia Gandhi
ಸೋನಿಯಾ ಗಾಂಧಿ

ನವದೆಹಲಿ:ಕಾಂಗ್ರೆಸ್ ನಾಯಕಿಸೋನಿಯಾ ಗಾಂಧಿ ಅಧ್ಯಕ್ಷತೆಯ ರಾಜೀವ್ ಗಾಂಧಿ ಫೌಂಡೇಶನ್ (ಆರ್‌ಜಿಎಫ್) ಮತ್ತು ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ (ಆರ್‌ಜಿಸಿಟಿ) ಎಂಬ ಎರಡು ಎನ್‌ಜಿಒಗಳ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಗಳನ್ನು ಕೇಂದ್ರ ಗೃಹ ಸಚಿವಾಲಯ (ಎಂಹೆಚ್‌ಎ) ರದ್ದುಗೊಳಿಸಿದೆ.

2020ರಲ್ಲಿ ಗೃಹ ಸಚಿವಾಲಯದ 'ಅಂತರ-ಸಚಿವಾಲಯ ಸಮಿತಿ ನಡೆಸಿದ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ತನಿಖಾಧಿಕಾರಿಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ದಾಖಲೆಗಳ ದುರ್ಬಳಕೆ, ಹಣದ ದುರುಪಯೋಗ ಮತ್ತು ಚೀನಾ ಸೇರಿದಂತೆ ವಿದೇಶಗಳಿಂದ ಹಣವನ್ನು ಸ್ವೀಕರಿಸುವಾಗ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರ್‌ಜಿಎಫ್‌ನ ಟ್ರಸ್ಟಿಗಳು:ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರ್‌ಜಿಎಫ್‌ನ ಅಧ್ಯಕ್ಷರಾಗಿದ್ದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಸುಮನ್ ದುಬೆ ಮತ್ತು ಅಶೋಕ್ ಗಂಗೂಲಿ ಟ್ರಸ್ಟಿಗಳಾಗಿದ್ದಾರೆ.

ಆರ್‌ಜಿಎಫ್‌ 1991ರಲ್ಲಿ ಸ್ಥಾಪನೆಯಾಗಿತ್ತು. 1991 ರಿಂದ 2009 ರವರೆಗೆ ಆರೋಗ್ಯ, ವಿಜ್ಞಾನ–ತಂತ್ರಜ್ಞಾನ, ಮಹಿಳೆಯರು–ಮಕ್ಕಳು, ಅಂಗವಿಕಲರಿಗೆ ಬೆಂಬಲ ಸೇರಿದಂತೆ ಹಲವಾರು ನಿರ್ಣಾಯಕ ಸಂಗತಿಗಳಲ್ಲಿ ಆರ್‌ಜಿಎಫ್‌ ಕೆಲಸ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲೂ ಆರ್‌ಜಿಎಫ್‌ ಕೆಲಸ ಮಾಡಿದೆ ಎಂದು ಅದರ ವೆಬ್‌ಸೈಟ್‌ನಲ್ಲಿ ಮಾಹಿತಿ ಇದೆ.

ದೇಶದ ಹಿಂದುಳಿದ ಜನರ, ವಿಶೇಷವಾಗಿ ಗ್ರಾಮೀಣ ಬಡವರ ಅಭಿವೃದ್ಧಿ ಅಗತ್ಯಗಳನ್ನು ಪರಿಹರಿಸಲು 2002ರಲ್ಲಿ ಆರ್‌ಜಿಸಿಟಿ ಸ್ಥಾಪಿಸಲಾಯಿತು. ರಾಜೀವ್ ಗಾಂಧಿ ಮಹಿಳಾ ವಿಕಾಸ್ ಪರಿಯೋಜನಾ (RGMVP) ಮತ್ತು ಇಂದಿರಾಗಾಂಧಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (IGEHRC) ಎಂಬ ಎರಡು ಅಭಿವೃದ್ಧಿ ಉಪಕ್ರಮಗಳ ಮೂಲಕ ಇದು ಪ್ರಸ್ತುತ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಕಾರ್ಯನಿರ್ವಹಿಸುತ್ತದೆ.

ಜುಲೈ 2020ರಲ್ಲಿ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ), ಆದಾಯ ತೆರಿಗೆ ಕಾಯ್ದೆ ಮತ್ತು ಎಫ್‌ಸಿಆರ್‌ಎಗಳ ಸಂಭವನೀಯ ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಯ ನೇತೃತ್ವದಲ್ಲಿ ಅಂತರ-ಸಚಿವಾಲಯ ಸಮಿತಿಯ ರಚಿಸಲಾಯಿತು. ತನಿಖಾ ತಂಡವು ಇಡಿ ಹೊರತುಪಡಿಸಿ ಗೃಹ ಮತ್ತು ಹಣಕಾಸು ಸಚಿವಾಲಯಗಳು, ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳನ್ನು ಒಳಗೊಂಡಿತ್ತು.

2020ರಲ್ಲಿ ಲಡಾಖ್‌ನಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಜೊತೆ ಭಾರತೀಯ ಸೇನೆ ಮುಖಾಮುಖಿಯಾದ ಸಂದರ್ಭದಲ್ಲಿ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆ.ಪಿ ನಡ್ಡಾ ಅವರು 2005 ಮತ್ತು 2009 ರ ನಡುವೆ ಆರ್‌ಜಿಎಫ್‌ಗೆ ಚೀನಾ ನಿಧಿಯನ್ನು ನೀಡಿಲ್ಲ ಎಂದು ಆರೋಪಿಸಿದ್ದರು.

ಇದನ್ನೂ ಓದಿ:ವಿಶೇಷ ಅಂಕಣ: ಚೀನಾದ ದೇಣಿಗೆ ಎಂಬುದೇ ವಿಶ್ವಾಸಘಾತುಕತನ

Last Updated : Oct 23, 2022, 1:01 PM IST

ABOUT THE AUTHOR

...view details