ಜಬಲ್ಪುರ (ಮಧ್ಯಪ್ರದೇಶ):ಕೋವಿಡ್ ಅವಧಿಯಲ್ಲಿ ನಕಲಿ ರೆಮ್ಡೆಸಿವಿರ್ ಪ್ರಕರಣದ ಪ್ರಮುಖ ಆರೋಪಿ ಸರಬ್ಜಿತ್ ಸಿಂಗ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿ ಕಾರಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಪೆಟ್ರೋಲ್ ಹಾಕಿರುವ ಬಿಲ್ ನೀಡಿರುವ ದೂರಿನ ಮೇರೆಗೆ ಮಧ್ಯ ಪ್ರದೇಶ ನ್ಯಾಯಾಧೀಶರು ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ತೂಕ ಮತ್ತು ಅಳತೆ ಇಲಾಖೆ ಪೆಟ್ರೋಲ್ ಬಂಕ್ನ್ನು ಸೀಲ್ ಮಾಡಿದೆ. ಪೆಟ್ರೋಲ್ ಬಂಕ್ ಯಂತ್ರಗಳನ್ನು ಪರಿಶೀಲಿಸುವವರೆಗೆ ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವನ್ನು ನಿಷೇಧಿಸಲಾಗಿದೆ.
ಹೆಚ್ಚುವರಿ ಬಿಲ್ ನೀಡಿ ವಂಚನೆ: ಮೂಲಗಳ ಪ್ರಕಾರ, ಮಧ್ಯ ಪ್ರದೇಶ ಹೈಕೋರ್ಟ್ ನ್ಯಾಯಾಧೀಶರು ನಿನ್ನೆ(ಗುರುವಾರ) ರಾತ್ರಿ ಪೆಟ್ರೋಲ್ ಬಂಕ್ಗೆ ಪೆಟ್ರೋಲ್ ತುಂಬಿಸಲು ತೆರಳಿದ್ದರು. ಪೆಟ್ರೋಲ್ ಟ್ಯಾಂಕ್ ತುಂಬಲು ಸೂಚನೆಯ ಮೇರೆಗೆ ಬಂಕ್ ಉದ್ಯೋಗಿ ಕಾರಿಗೆ ಪೆಟ್ರೋಲ್ ಪೂರ್ಣ ಮಾಡಿದರು. ಕಾರು ತುಂಬುತ್ತಿದ್ದಾಗ ಮೀಟರ್ ರೀಡಿಂಗ್ ಪ್ರಕಾರ 57 ಲೀಟರ್ ಪೆಟ್ರೋಲ್ ಕಾರಿಗೆ ಹಾಕಲಾಗಿದೆ ಎಂದು ಬಿಲ್ ನೀಡಲಾಗಿದೆ. ಅಷ್ಟರಲ್ಲಿ ಕಾರಿನಲ್ಲಿ ಕುಳಿತಿದ್ದ ನ್ಯಾಯಾಧೀಶರು ಬಿಲ್ ನೋಡಿ ಶಾಕ್ ಆಗಿದ್ದಾರೆ. ಏಕೆಂದರೆ ವಾಹನದಲ್ಲಿ ಪೆಟ್ರೋಲ್ನ ಒಟ್ಟು ಮಿತಿ 50 ಲೀಟರ್ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ವಾಹನಕ್ಕೆ ಹೆಚ್ಚು ಪೆಟ್ರೋಲ್ ಬಿಲ್ ನೋಡಿ ಅನುಮಾನಗೊಂಡು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.
ಅಧಿಕಾರಿಗಳಿಗೆ ಛೀಮಾರಿ:ನ್ಯಾಯಾಧೀಶರ ದೂರಿನ ಮೇರೆಗೆ ತೂಕ ಮತ್ತು ಅಳತೆ ಇಲಾಖೆ ವಿಭಾಗದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಯಂತ್ರಗಳ ಪ್ರಾಥಮಿಕ ಪರಿಶೀಲನೆ ನಡೆಸಿದರು. ಅವರ ಕಾರಿನ ಟ್ಯಾಂಕ್ ಸಾಮರ್ಥ್ಯ 50 ಲೀಟರ್ ಆಗಿದೆ. ಆಗಲೇ 5 ರಿಂದ 7 ಲೀಟರ್ ಪೆಟ್ರೋಲ್ ಇತ್ತು. ಉದ್ಯೋಗಿ ಎಲ್ಲಿಂದ 57 ಲೀಟರ್ ಪೆಟ್ರೋಲ್ ತುಂಬಿಸಿದ್ದಾನೆ. ಈ ರೀತಿ ದಿನನಿತ್ಯ ಸಾವಿರಾರು ಜನರ ದರೋಡೆ ನಡೆಯುತ್ತಿದ್ದು, ಆಡಳಿತ ಮೌನವಾಗಿದೆ ಎಂದು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದರು.