ಕರ್ನಾಟಕ

karnataka

By

Published : Jul 15, 2023, 9:26 PM IST

ETV Bharat / bharat

ಗೋಧ್ರಾ ಹತ್ಯಾಕಾಂಡ ಆರೋಪಿಗೆ ಪೆರೋಲ್​ ನೀಡಿದ ಹೈಕೋರ್ಟ್​.. ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರ

2002ರ ಗೋಧ್ರಾ ಹತ್ಯಾಕಾಂಡದ ಆರೋಪಿಗೆ 15 ದಿನಗಳ ಪೆರೋಲ್ ನೀಡಿದ ಗುಜರಾತ್ ಹೈಕೋರ್ಟ್ ನಿರ್ಧಾರಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

Gujarat HC granted 15 days parole  Godhra train carnage accused  Godhra case  ಆರೋಪಿಗೆ ಪೆರೋಲ್​ ನೀಡಿದ ಹೈಕೋರ್ಟ್  ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರ  2002ರ ಗೋಧ್ರಾ ಹತ್ಯಾಕಾಂಡದ ಆರೋಪಿ  15 ದಿನಗಳ ಪೆರೋಲ್ ನೀಡಿದ ಗುಜರಾತ್ ಹೈಕೋರ್ಟ್  ಹೈಕೋರ್ಟ್ ನಿರ್ಧಾರಕ್ಕೆ ರಾಜ್ಯ ಸರ್ಕಾರ ವಿರೋಧ  ಸೊಸೆಯ ಮದುವೆಯಲ್ಲಿ ಪಾಲ್ಗೊಳ್ಳಲು ಪೆರೋಲ್  ಪೆರೋಲ್ ಅರ್ಜಿಗೆ ರಾಜ್ಯ ಸರ್ಕಾರ ವಿರೋಧ  ಪೆರೋಲ್ ರಜೆ ಕೋರಿ ಅರ್ಜಿ
ಗೋಧ್ರಾ ಹತ್ಯಾಕಾಂಡ ಆರೋಪಿಗೆ ಪೆರೋಲ್​ ನೀಡಿದ ಹೈಕೋರ್ಟ್

ಅಹಮದಾಬಾದ್, ಗುಜರಾತ್​: 2002ರ ಗೋದ್ರಾ ಹತ್ಯಾಕಾಂಡದ ಆರೋಪಿ ಹಸನ್ ತನ್ನ ಸೊಸೆಯ ಮದುವೆಯಲ್ಲಿ ಪಾಲ್ಗೊಳ್ಳಲು ಪೆರೋಲ್ ಕೋರಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಹೈಕೋರ್ಟ್ ಸ್ವೀಕರಿಸಿದೆ. ಹಸನ್​ ವಕೀಲ ಎಂ.ಎಸ್.ಭಡ್ಕಿ ಅವರು ಜೈಲಿನಲ್ಲಿ ಹಸನ್​ ಅವರ ನಡತೆಯ ದಾಖಲೆ ಉತ್ತಮವಾಗಿದೆ ಎಂದು ತಿಳಿಸಿದರು.

ಸರ್ಕಾರದ ವಿರೋಧ:ಈ ಪೆರೋಲ್ ಅರ್ಜಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಆರೋಪಿಯು ಜೀವಾವಧಿ ಶಿಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದಾಗ ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿತ್ತು. ಇದರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ಇಡೀ ಪ್ರಕರಣ ನಡೆಯುತ್ತಿರುವಾಗ ಗುಜರಾತ್ ಹೈಕೋರ್ಟ್ ಇದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ಪೂರ್ಣ ವಿಚಾರಣೆ ನಂತರ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ನಿಶಾ ಎಂ. ಠಾಕೂರ್ ಅವರು, ಶಿಕ್ಷೆಯ ಅಮಾನತು, ಪೆರೋಲ್ ಮತ್ತು ಜಾಮೀನು ಪ್ರತ್ಯೇಕ ವಿಷಯಗಳಾಗಿವೆ. ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಮೇಲ್ಮನವಿ ಪ್ರಕ್ರಿಯೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಇದರೊಂದಿಗೆ, ಭಾರತದ ಸಂವಿಧಾನದ 226 ನೇ ವಿಧಿಯ ಅಡಿ ಪೆರೋಲ್ ರಜೆ ಕೋರಿ ಅರ್ಜಿಗಳನ್ನು ಪರಿಶೀಲಿಸುವ ಅಧಿಕಾರವನ್ನು ಹೈಕೋರ್ಟ್ ಹೊಂದಿದೆ ಎಂದು ನ್ಯಾಯಾಧೀಶರು ಹೇಳಿದರು.

ಏನಿದು ಪ್ರಕರಣ: ಫೆಬ್ರವರಿ 27, 2002 ರಂದು ಕರಸೇವಕರೊಂದಿಗೆ ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಇದು ರಾಜ್ಯದಲ್ಲಿ ಕೋಮುಗಲಭೆಗೆ ಕಾರಣವಾಗಿತ್ತು. ಆರೋಪಿಗಳ ವಿರುದ್ಧ ಪಂಚಮಹಲ್ ಗೋಧ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗೋಧ್ರಾ ನ್ಯಾಯಾಲಯದಲ್ಲಿ ಸಂಪೂರ್ಣ ಪ್ರಕರಣದ ವಿಚಾರಣೆ ನಡೆದಿದ್ದು, ಆರೋಪಿ ಹಸನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದರೂ ಅಲ್ಲಿಯೂ ಆತನ ಶಿಕ್ಷೆಯನ್ನು ಎತ್ತಿ ಹಿಡಿಯಲಾಯಿತು.

ವಿಶೇಷ ರಜೆ ಅರ್ಜಿ ಸಲ್ಲಿಕೆ: ಆರೋಪಿ ಹಸನ್ 2018ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ವಿಚಾರಣೆ ಇನ್ನೂ ಬಾಕಿ ಉಳಿದಿದೆ. ಹಸನ್ ಕೂಡ ಜಾಮೀನು ಅರ್ಜಿ ಸಲ್ಲಿಸಿದ್ದರು. ಸದ್ಯಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಬಾಕಿ ಇದೆ.

ಓದಿ:ನರೋಡಾ ಹತ್ಯಾಕಾಂಡ ತೀರ್ಪು ಇಂದು: ಏನಾಗುತ್ತೆ 64 ಜನರ ಹಣೆಬರಹ?

ರೈಲು ಸುಟ್ಟಿದ್ದ ಆರೋಪಿಗೆ ಜಾಮೀನು:2002ರ ಗೋಧ್ರಾ ಗಲಭೆಯಲ್ಲಿ ರೈಲು ಬೋಗಿಗೆ ಬೆಂಕಿ ಇಟ್ಟು ಸುಟ್ಟು ಹಾಕಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿ ಫಾರೂಕ್​ಗೆ ಸುಪ್ರೀಂ ಕೋರ್ಟ್ ಕಳೆದ ವರ್ಷವಷ್ಟೇ ಜಾಮೀನು ಮಂಜೂರು ಮಾಡಿತ್ತು. ಈತ ಕಳೆದ 17 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಜಾಮೀನು ನೀಡಿತ್ತು.

ಒಂಬತ್ತು ಪ್ರಕರಣಗಳ ತನಿಖೆ:ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಗೋದ್ರಾ ಘಟನೆ ಸೇರಿದಂತೆ ಒಟ್ಟು 9 ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿತ್ತು. ಈ ಪೈಕಿ 8 ಪ್ರಕರಣಗಳನ್ನು ತಂಡ ಅಂತ್ಯಗೊಳಿಸಿದೆ.

ABOUT THE AUTHOR

...view details