ಮುಂಬೈ(ಮಹಾರಾಷ್ಟ್ರ):ನವದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಗೋವಾ ಕಡೆಗೆ ಹೊರಟಿದ್ದ ರಾಜಧಾನಿ ಎಕ್ಸ್ಪ್ರೆಸ್ ಮಹಾರಾಷ್ಟ್ರದ ರತ್ನಗಿರಿ ಬಳಿಯ ಸುರಂಗವೊಂದರ ಸಮೀಪ ಹಳಿ ತಪ್ಪಿದೆ.
ಹಳಿಯ ಮೇಲೆ ಬಂಡೆಗಳು ಉರುಳಿದ್ದ ಪರಿಣಾಮ ರೈಲು ಹಳಿ ತಪ್ಪಿ, ಹಳಿಯಿಂದ ಹೊರಗೆ ಚಲಿಸಿದೆ. ಕರ್ಬುಡೆ ಸುರಂಗದ ಬಳಿ ರೈಲು ಹಳಿ ತಪ್ಪಿದೆ ಎಂದು ಪಿಟಿಐಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.