ಕರ್ನಾಟಕ

karnataka

ಸೋಮವಾರದ ಪಂಚಾಂಗ, ರಾಶಿ ಭವಿಷ್ಯ: ನಿಮ್ಮ ವೃತ್ತಿ ಬದುಕಿಗೆ ಹೊಸ ತಿರುವು!

By ETV Bharat Karnataka Team

Published : Dec 18, 2023, 5:01 AM IST

Monday Horoscope: ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..

etv-bharat-horoscope-today
ಸೋಮವಾರದ ಪಂಚಾಂಗ ಹಾಗೂ ರಾಶಿ ಭವಿಷ್ಯ: ನಿಮ್ಮ ವೃತ್ತಿ ಬದುಕಿಗೆ ಹೊಸ ತಿರುವು!

ಇಂದಿನ ಪಂಚಾಂಗ:

ದಿನಾಂಕ : 18-12-2023, ಸೋಮವಾರ

ಸಂವತ್ಸರ : ಶುಭಕೃತ್

ಆಯನ: ದಕ್ಷಿಣಾಯಣ

ಋತು: ಹೇಮಂತ

ಮಾಸ: ಮಾರ್ಗಶಿರ

ಪಕ್ಷ: ಶುಕ್ಲ

ತಿಥಿ: ಷಷ್ಠಿ

ನಕ್ಷತ್ರ: ಸ್ತಭಿಷ

ಸೂರ್ಯೋದಯ: ಮುಂಜಾನೆ 06:34 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 1:39 ರಿಂದ 3:04 ಗಂಟೆ ತನಕ

ವರ್ಜ್ಯಂ : ಸಂಜೆ 6:15 ರಿಂದ 7:50 ಗಂಟೆವರೆಗೆ

ದುರ್ಮುಹೂರ್ತ: ಮಧ್ಯಾಹ್ನ 12:58 ರಿಂದ 1:46 ಹಾಗೂ 3:22 ರಿಂದ 4:10 ಗಂಟೆ ತನಕ

ರಾಹುಕಾಲ: ಬೆಳಗ್ಗೆ 07:59 ರಿಂದ 09:24 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:54 ಗಂಟೆಗೆ

ಇಂದಿನ ರಾಶಿ ಭವಿಷ್ಯ:

ಮೇಷ :ನೀವು ಈಗ ನಿಮ್ಮ ಎಲ್ಲ ಮಾನಸಿಕ ಸಾಮರ್ಥ್ಯಗಳನ್ನು ಒಗ್ಗೂಡಿಸಬೇಕು ಏಕೆಂದರೆ ನೀವು ತಕ್ಷಣದ, ಸ್ಥಳದಲ್ಲಿಯೇ ನಿರ್ಧಾರಗಳನ್ನು ತೆಗೆದುಕೊಲ್ಳಬೇಕು. ನೀವು ಸೂಕ್ತ ಸಲಹೆ ಪಡೆದುಕೊಳ್ಳಬೇಕು, ಏಕೆಂದರೆ ನಿಮ್ಮ ನಿರ್ಧಾರಗಳು ದೀರ್ಘಾವಧಿ ಪರಿಣಾಮ ಹೊಂದಿರಬಹುದು ಅಲ್ಲದೆ ಅವು ಹಣಕಾಸನ್ನು ಒಳಗೊಂಡಿರಬಹುದು.

ವೃಷಭ :ನಿಮಗೆ ಸುಲಭ, ನಿರಾತಂಕದ ದಿನ ಮುಂದಿದೆ. ಯಾವುದೇ ಚಿಂತೆ, ಆತಂಕಗಳಿಲ್ಲ. ಆದರೆ, ನೀವು ಒಂದು ಸಲಕ್ಕೆ ನೀವು ನಿರ್ವಹಿಸಲಾಗದ ಹಲವು ವಿಷಯಗಳಲ್ಲಿ ತೊಡಗಿಕೊಳ್ಳುತ್ತೀರಿ. ಇದು ನಿಮಗೆ ಒತ್ತಡ ಉಂಟು ಮಾಡಬಹುದು. ನೀವು ಪ್ರಾಯೋಗಿಕವಾಗಿರಿ ಮತ್ತು ಅತಿಯಾಗಿ ಏನೂ ಮಾಡಬೇಡಿ. ವಾಸ್ತವಿಕ ಮತ್ತು ತಾರ್ಕಿಕವಾಗಿರಿ.

ಮಿಥುನ :ನೀವು ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಆಲೋಚಿಸುತ್ತೀರಿ ಮತ್ತು ಈ ವಿಷಯಗಳನ್ನು ಕುಟುಂಬದ ಸದಸ್ಯರೊಂದಿಗೆ ಚರ್ಚಿಸುತ್ತೀರಿ ಹಾಗೂ ನಿಮ್ಮ ಅಭಿಪ್ರಾಯ ಅವರಿಗೆ ಗೊತ್ತಾಗುವಂತೆ ಮಾಡುತ್ತೀರಿ. ಇದಲ್ಲದೆ ನೀವು ನಿಮಗೆ ಹತ್ತಿರವಾದ ಕಾನೂನು, ಶಿಕ್ಷಣ, ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಂಸ್ಕೃತಿಯ ಕುರಿತೂ ಚರ್ಚೆ ಮಾಡುತ್ತೀರಿ.

ಕರ್ಕಾಟಕ :ನೀವು ಬಾಕಿ ಇರುವ ಕೆಲಸಗಳನ್ನು ಮುಗಿಸಲು ಶ್ರಮಿಸುತ್ತೀರಿ. ನೀವು ವೈಯಕ್ತಿಕ ಕೆಲಸಗಳಿಗಿಂತ ವೃತ್ತಿಗೆ ಗಮನ ನೀಡುತ್ತೀರಿ. ಆದ್ದರಿಂದ ನೀವು ವೃತ್ತಿ ಮತ್ತು ವ್ಯಾಪಾರ ಬಿಕ್ಕಟ್ಟುಗಳಲ್ಲಿ ಸಿಲುಕಿಕೊಳ್ಳುತ್ತೀರಿ. ಸಂಜೆಯ ವೇಳೆಗೆ, ನಿಮಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ಸಾಹದ ಕ್ಷಣಗಳಿವೆ.

ಸಿಂಹ :ಇಂದು ನಿಮ್ಮ ಸಂಗಾತಿಯನ್ನು ಸಂತೋಷಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೀರಿ. ಆದ್ದರಿಂದ ನೀವು ಜಾರುವ ಸಾಧ್ಯತೆ ಬಹಳ ಕಡಿಮೆ. ನೀವು ಇಂದು ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಶಕ್ತರಾಗುತ್ತೀರಿ. ಇಂದು ನಿಮ್ಮ ಎಲ್ಲ ಹಣಕಾಸು ವ್ಯವಹಾರಗಳಲ್ಲೂ ಎಚ್ಚರಿಕೆ ವಹಿಸಬೇಕು.

ಕನ್ಯಾ :ನೀವು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲವರಾದರೆ ಜೀವನದಲ್ಲಿ ತಿರುವಿನ ಅಂಶ ಅಗತ್ಯ. ನೀವು ಇಂದು ಏನು ಮಾಡಿದರೂ ಅದರಲ್ಲಿ ಉತ್ತಮ ಸಾಧನೆ ಮಾಡುತ್ತೀರಿ. ಹಣಕಾಸು ಮತ್ತು ಬಾಂಧವ್ಯಗಳು ಆದ್ಯತೆಯ ಪಟ್ಟಿಯಲ್ಲಿ ಮುಖ್ಯವಾಗಿವೆ, ಆದರೆ ಅದೇ ಕ್ರಮದಲ್ಲಿಲ್ಲ. ನೀವು ದೇವರನ್ನು ಪ್ರಾರ್ಥಿಸುತ್ತಾ ಸಾಕಷ್ಟು ಸಮಯ ಕಳೆಯುತ್ತೀರಿ.

ತುಲಾ :ನೀವು ಇಂದು ಹೊಸ ವಿಷಯಗಳ ಬಗ್ಗೆ ಜ್ಞಾನ ಪಡೆಯಲು ಪ್ರಯತ್ನಿಸುತ್ತೀರಿ. ನೀವು ಇಂದು ಉತ್ಸಾಹ ಮತ್ತು ಸಕಾರಾತ್ಮಕತೆ ಅನುಭವಿಸುತ್ತೀರಿ. ನೀವು ಮಿತ್ರರೊಂದಿಗೆ ಮಾತನಾಡುವಾಗ ಹೆಚ್ಚು ಆಸಕ್ತಿ ತೋರುತ್ತೀರಿ. ಇದು ನಿಮ್ಮನ್ನು ಅವರಿಗೆ ಹತ್ತಿರವಾಗಿಸುತ್ತದೆ. ನಿಮ್ಮ ಜೀವನಸಂಗಾತಿಯಿಂದ ನಿಮಗೆ ಅನುಕೂಲಗಳಿವೆ. ನೀವು ಆತ್ಮೀಯ ಬಂಧುವಿನ ಜೊತೆಯಲ್ಲಿ ಸಂತೋಷವಾಗಿರುತ್ತೀರಿ.

ವೃಶ್ಚಿಕ :ನೀವು ನಿಮ್ಮ ಮಹತ್ವಾಕಾಂಕ್ಷೆಗಳ ಅತಿರೇಕದಲ್ಲಿದ್ದೀರಿ ಮತ್ತು ದೊಡ್ಡ ದನಿಯಲ್ಲಿ ಹೇಳುತ್ತಿದ್ದೀರಿ. ಆದರೆ ಅತ್ಯಂತ ಬಲವಂತ ಹಾಗೂ ತೀವ್ರತೆ ನಿಮ್ಮ ಇಮೇಜ್ ಹಾಳು ಮಾಡುತ್ತದೆ. ವಿಷಯಗಳ ಕುರಿತಾಗಿ ಸಂಘರ್ಷಗಳಿಂದ ದೂರ ಉಳಿಯುವುದು ಸೂಕ್ತ.

ಧನು :ಮಾತುಗಳಲ್ಲಿ ಜ್ಞಾನ ಮತ್ತು ಕೃತ್ಯಗಳಲ್ಲಿ ನಾಯಕ- ಇದು ನಿಮ್ಮ ಇಂದಿನ ಅವತಾರ. ಕೆಲಸದಲ್ಲಿ ಶುಭಸುದ್ದಿ ನಿರೀಕ್ಷಿಸಿ, ಅದರಲ್ಲೂ ವೇತನ ಹೆಚ್ಚಳ ಅಥವಾ ಕಛೇರಿಯ ಸ್ಥಳಾವಕಾಶದಲ್ಲಿ ಹೆಚ್ಚಳವಾಗಬಹುದು. ಅಕೌಂಟೆಂಟ್ ಗಳು ಮತ್ತು ಫ್ರಾಂಚೈಸಿಗಳು ಇಂದು ಒಳ್ಳೆಯ ಸಂಖ್ಯೆಗಳನ್ನು ಕಾಣುತ್ತಾರೆ!

ಮಕರ :ನೀವು ಅತ್ಯಂತ ಪ್ರಣಯಿ ಮತ್ತು ನಿಮ್ಮ ಪ್ರಿಯತಮೆಯನ್ನು ಮನ ಒಲಿಸಲು ಪ್ರತಿ ಯೋಜನೆಯೊಂದಿಗೆ ನೀವು ಆಕೆಯನ್ನು ಆಗಸದಲ್ಲಿ ತೇಲಾಡಿಸುತ್ತೀರಿ. ಆದರೆ ಕಲ್ಪನಾಜಗತ್ತಿನಲ್ಲಿ ತೇಲಾಡಬೇಡಿ. ಏಕೆಂದರೆ ಸಮಸ್ಯೆಗಳು ನೀವು ಹೋದಲ್ಲಿಗೆ ಅನುಸರಿಸುತ್ತಿವೆ. ನೀವು ವ್ಯಾಪಾರಿಯಾದರೆ, ನಿಮ್ಮ ವಿರೋಧಿಗಳು ನಿಮಗೆ ಕಷ್ಟ ನೀಡುತ್ತಾರೆ. ನಿಮ್ಮ ಆರೋಗ್ಯ ಕುರಿತು ಎಚ್ಚರ ವಹಿಸಿ.

ಕುಂಭ :ನೀವು ನಿಮ್ಮ ವೇಳಾಪಟ್ಟಿ ಅಸ್ತವ್ಯಸ್ತವಾಗುವುದನ್ನು ಕಾಣುತ್ತೀರಿ! ನಿಮ್ಮ ಕಾರ್ಯದೊತ್ತಡ ಅದರಲ್ಲೂ ನೀವು ಆಡಳಿತಗಾರರಾಗಿ ಅಪಾರವಾಗಿದೆ. ಆದರೆ ನಿಮ್ಮ ವಿವೇಚನೆ ಮತ್ತು ಬದ್ಧತೆ ನಿಮ್ಮನ್ನು ಮುನ್ನಡೆಸುತ್ತವೆ. ಅಲ್ಲದೆ ನೀವು ಸಂಜೆಗೆ ಪಾರ್ಟಿಗೆ ಸಜ್ಜಾಗಿದ್ದೀರಿ. ಎಂಥಾ ಶಕ್ತಿ!

ಮೀನ :ಹಣ ಎಷ್ಟು ಎಂದು ನಿಮಗೆ ಗೊತ್ತು ಮತ್ತು ನೀವು ಅದರ ಕುರಿತು ಇಡೀ ದಿನ ಆಲೋಚಿಸುತ್ತೀರಿ. ನೀವು ಇಂದು ವೆಚ್ಚಗಳ ಕುರಿತು ಆಲೋಚನೆ ಕಡಿಮೆ ಸಂಪತ್ತು ಮತ್ತು ಖ್ಯಾತಿಯ ಆಲೋಚನೆ ಹೆಚ್ಚು. ಕುಟುಂಬ ಕುರಿತು ಆತಂಕ ಹೆಚ್ಚಾಗುತ್ತದೆ ಅದಕ್ಕೆ ಪೂರಕವಾಗಿ ಅವರು ನಿಮ್ಮನ್ನು ಬೆಂಬಲಿಸುತ್ತಾರೆ.

ABOUT THE AUTHOR

...view details