ಕರ್ನಾಟಕ

karnataka

By

Published : Apr 30, 2021, 4:41 PM IST

ETV Bharat / bharat

ತಿರುಮಲ ದೇವಾಲಯ ಅನ್ನಪ್ರಸಾದ ಕೇಂದ್ರದ ಡೆಪ್ಯೂಟಿ ಇಓ ಕೋವಿಡ್​​​ಗೆ ಬಲಿ

ಕೊರೊನಾಗೆ ತುತ್ತಾಗುವುದಕ್ಕೂ ಮೊದಲು ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಳಿಕ ಎಂದಿನಂತೆ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು.

deputy EO of Tirumala Temple died from corona
ತಿರುಮಲ ದೇವಾಲಯ ಅನ್ನಪ್ರಸಾದ ಕೇಂದ್ರದ ಡೆಪ್ಯೂಟಿ ಇಓ ಕೊರೊನಾಗೆ ಬಲಿ

ತಿರುಪತಿ (ಆಂಧ್ರ ಪ್ರದೇಶ): ಇಲ್ಲಿನ ತಿರುಪತಿ ತಿರುಮಲ ದೇವಾಸ್ಥಾನಂ (ಟಿಟಿಡಿ)ಯ ಅನ್ನಪ್ರಸಾದ ಕೇಂದ್ರದ ಡೆಪ್ಯೂಟಿ ಇಓ ನಾಗಾರಾಜ್​ (60) ಕೊರೊನಾಗೆ ಬಲಿಯಾಗಿದ್ದಾರೆ. ಟಿಟಿಡಿಯ ಅನ್ನಪ್ರಸಾದ ಕೇಂದ್ರದಲ್ಲಿ ಡೆಪ್ಯೂಟಿ ಆಫಿಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕೊರೊನಾಗೆ ತುತ್ತಾಗುವುದಕ್ಕೂ ಮೊದಲು ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಳಿಕ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಅವರ ಸೇವಾವಧಿ ಇದೇ ಜೂನ್​ನಲ್ಲಿ ಮುಕ್ತಾಯವಾಗುತ್ತಿತ್ತು. ಆದರೆ ಅದಕ್ಕೂ ಮೊದಲೇ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ABOUT THE AUTHOR

...view details