ಕರ್ನಾಟಕ

karnataka

By

Published : Jul 30, 2023, 3:45 PM IST

ETV Bharat / bharat

ಕ್ಷುಲ್ಲಕ ಕಾರಣಕ್ಕೆ ಜಗಳ.. ಕೋರ್ಟ್​ ಮೆಟ್ಟಿಲೇರಿದ 2 ಕುಟುಂಬಗಳಿಗೆ ತಲಾ 200 ಸಸಿ ನೆಡುವಂತೆ ದೆಹಲಿ ಹೈಕೋರ್ಟ್ ತೀರ್ಪು

ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವಿನ ಜಗಳ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯ ಈ ವಿಶಿಷ್ಟ ತೀರ್ಪು ನೀಡಿದೆ.

Representative image
ಪ್ರಾತಿನಿಧಿಕ ಚಿತ್ರ

ನವದೆಹಲಿ: ಮುಂಗಾರು ಮಳೆ ಆರಂಭವಾಗಿದ್ದು, ರಾಜಧಾನಿ ದೆಹಲಿಯಲ್ಲಿ ವಿವಿಧ ಇಲಾಖೆಗಳಿಂದ ಮರ ನೆಡುವ ಕಾರ್ಯ ನಡೆಯುತ್ತಿದೆ. ರಾಜಧಾನಿಯನ್ನು ಹಸಿರಾಗಿಸಲು ಸಾಮಾಜಿಕ ಸಂಘಟನೆಗಳು ಮುಂದಾಗುತ್ತಿವೆ. ಈ ನಡುವೆ ದೆಹಲಿ ಹೈಕೋರ್ಟ್ ಕೂಡ ರಾಜಧಾನಿಯಲ್ಲಿ ಹಸಿರನ್ನು ಹೆಚ್ಚಿಸುವ ವಿಶಿಷ್ಟ ನಿರ್ಧಾರ ಕೈಗೊಂಡಿದೆ.

ವಿವಾದದಲ್ಲಿ ಭಾಗಿಯಾಗಿರುವ ಎರಡೂ ಕುಟುಂಬಗಳಿಗೆ ತಲಾ 200 ಸಸಿಗಳನ್ನು ನೆಟ್ಟು ಐದು ವರ್ಷಗಳ ಕಾಲ ಅವುಗಳನ್ನು ಪೋಷಣೆ ಮಾಡುವಂತೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ವಿಶಿಷ್ಟ ತೀರ್ಪು ನೀಡಿದೆ. ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ ಎರಡು ಕುಟುಂಬಗಳ ಸದಸ್ಯರು ತಮ್ಮ ತಮ್ಮ ಪ್ರದೇಶದಲ್ಲಿ ತಲಾ 200ರಂತೆ ಒಟ್ಟು 400 ಸಸಿಗಳನ್ನು ನೆಟ್ಟು ನಕಾರಾತ್ಮಕತೆಯನ್ನು ಕೊನೆಗಾಣಿಸುವಂತೆ ದೆಹಲಿ ಹೈಕೋರ್ಟ್‌ ಸೂಚಿಸಿದೆ. ಕಕ್ಷಿದಾರರು ಸಸಿಗಳನ್ನು ನೆಡಬೇಕು ಮತ್ತು ಅವುಗಳನ್ನು ಐದು ವರ್ಷಗಳವರೆಗೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಎರಡು ಕುಟುಂಬಗಳಿಗೆ ವಿಶಿಷ್ಟ ಶಿಕ್ಷೆ:ತಮ್ಮ ತಮ್ಮ ಪ್ರದೇಶಗಳಲ್ಲಿ ತಲಾ 200 ಸಸಿಗಳನ್ನು ನೆಟ್ಟು 5 ವರ್ಷಗಳ ಕಾಲ ಆರೈಕೆ ಮಾಡುವಂತೆ ಉಭಯ ಕಕ್ಷಿದಾರರಿಗೆ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ನೇತೃತ್ವದ ಪೀಠ ಸೂಚಿಸಿದೆ. ಈ ಮೂಲಕ ಎರಡೂ ಕಡೆಯವರು ತಮ್ಮೊಳಗಿನ ನಕಾರಾತ್ಮಕತೆಯನ್ನು ತೊಡೆದುಹಾಕಲು ಮತ್ತು ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಸಮಾಜಕ್ಕೆ ಕೊಡುಗೆ ನೀಡುವಂತೆ ನಿರ್ದೇಶಿಸುವ ಮೂಲಕ ಕುಟುಂಬಗಳು ನಕಾರಾತ್ಮಕ ಶಕ್ತಿಯನ್ನು ಕೊನೆಗೊಳಿಸಬೇಕು ಎಂದು ನಾನು ಬಯಸುತ್ತೇನೆ. ಆದ್ದರಿಂದ, ಎರಡೂ ಪ್ರಕರಣಗಳಲ್ಲಿ ಅರ್ಜಿದಾರರು ತಮ್ಮ ಪ್ರದೇಶಗಳಲ್ಲಿ ತಲಾ 200 ಸಸಿಗಳನ್ನು ನೆಡಲು ಸೂಚಿಸಲಾಗಿದೆ. ತೋಟಗಾರಿಕಾ ಇಲಾಖೆಯೊಂದಿಗೆ ಸಮಾಲೋಚಿಸಿದ ನಂತರ ಸ್ಥಳವನ್ನು ಐಒ ಗುರುತಿಸುತ್ತಾರೆ ಮತ್ತು ಅವರು ಅರ್ಜಿದಾರರಿಗೆ 15 ದಿನಗಳ ಮುಂಚಿತವಾಗಿ ತಿಳಿಸುತ್ತಾರೆ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಆದೇಶದಲ್ಲಿ ತಿಳಿಸಿದ್ದಾರೆ.

5 ವರ್ಷಗಳ ಕಾಲ ನಿರ್ವಹಣೆ ಮಾಡಲು ಆದೇಶ:ಎರಡೂ ಕುಟುಂಬಗಳು ಸಮಾಜಕ್ಕೆ ಕೊಡುಗೆ ನೀಡಲು ಮತ್ತು ಅವರ ನಕಾರಾತ್ಮಕ ಶಕ್ತಿಯನ್ನು ಕೊನೆಗೊಳಿಸಲು ನಿರ್ದೇಶನ ನೀಡಬೇಕು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ ಎರಡೂ ಪ್ರಕರಣಗಳ ಅರ್ಜಿದಾರರಿಗೆ ತಮ್ಮ ಪ್ರದೇಶದಲ್ಲಿ ತಲಾ 200 ಗಿಡಗಳನ್ನು ನೆಡುವಂತೆ ಕೋರ್ಟ್​ ಸೂಚಿಸಿದೆ. ಎರಡೂ ಕುಟುಂಬಗಳು ತಲಾ 200 ಗಿಡಗಳನ್ನು ನೆಟ್ಟು ಐದು ವರ್ಷಗಳ ಕಾಲ ಅವುಗಳ ಆರೈಕೆ ಮಾಡಬೇಕು. ಸ್ವಯಂಪ್ರೇರಿತ ಗಾಯ, ಮನೆ ಒಳನುಗ್ಗುವಿಕೆ, ಗಾಯ, ಹಲ್ಲೆ ಅಥವಾ ಅಕ್ರಮ ನಿರ್ಬಂಧದ ಆರೋಪದ ಮೇಲೆ ದಾಖಲಾದ ಎರಡು ಕ್ರಿಮಿನಲ್ ಪ್ರಕರಣಗಳಲ್ಲಿನ ಎಫ್‌ಐಆರ್ ಮತ್ತು ವಿಚಾರಣೆಗಳನ್ನು ರದ್ದುಗೊಳಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.

ಏನಿದು ಪ್ರಕರಣ?:ಮೊದಲ ಎಫ್‌ಐಆರ್‌ನಲ್ಲಿ ದೂರುದಾರರು ಪ್ರಕರಣವು ಮಾರ್ಚ್ 4, 2017ರ ಹಿಂದಿನದ್ದು ಎಂದು ಹೇಳಿದರು. ಒಂದು ಕುಟುಂಬದ ಮೂವರು ಸದಸ್ಯರು ತಮ್ಮ ಮನೆಗೆ ಬಂದು ರಾಜಕೀಯ ಪಕ್ಷದ ಯೋಜನೆಯಡಿ ಕಂಬಳಿಗಳನ್ನು ಪಡೆಯಲು ತಮ್ಮ ಗುರುತಿನ ಚೀಟಿ ನೀಡುವಂತೆ ಒತ್ತಾಯಿಸಿದರು. ಆತ ಬೇರೆ ರಾಜಕೀಯ ಪಕ್ಷದ ಬೆಂಬಲಿಗ ಎಂದು ಈ ಮಧ್ಯೆ ಮಾತಿನ ಚಕಮಕಿ ನಡೆಯಿತು. ಎರಡನೇ ಎಫ್‌ಐಆರ್‌ನಲ್ಲಿ, ಎದುರಿನವರು ಕಂಬಳಿ ವಿತರಣೆ ಉದ್ದೇಶಕ್ಕಾಗಿ ಗುರುತಿನ ಚೀಟಿಗಳನ್ನು ಸಂಗ್ರಹಿಸುತ್ತಿದ್ದಾಗ, ಮತ್ತೊಂದು ಕುಟುಂಬವು ಅವರೊಂದಿಗೆ ಜಗಳವಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಇದನ್ನೂ ಓದಿ:'ಶಿಸ್ತು ಎಂಬುದು ಸಶಸ್ತ್ರ ಪಡೆಗಳ ವಿಶಿಷ್ಟ ಲಕ್ಷಣ': ಸುಪ್ರೀಂ ಕೋರ್ಟ್

ABOUT THE AUTHOR

...view details