ಕರ್ನಾಟಕ

karnataka

ETV Bharat / bharat

ಮಣ್ಣಿಲ್ಲದೇ ಸ್ಟ್ರಾಬೆರಿ ಬೆಳೆ: ಕೃಷಿ ವಿಜ್ಞಾನಿಗಳ ಈ ಸಂಶೋಧನೆ ರೈತರ ಕೈಹಿಡಿಯುತ್ತಾ!?

ಶಾಕ್​ ಆದ್ರಾ, ಇದು ಜಲ ಕೃಷಿ. ಇಲ್ಲಿ ಮಣ್ಣು ಅಮುಖ್ಯ. ಇಂಥ ಒಂದು ಪ್ರಯೋಗ ನಡೆದಿರುವುದು ಉತ್ತರಾಖಂಡ್​ದ ಪಟ್ನಾಗರ್​ನ ಹಲ್ದಿ ಪ್ರದೇಶದಲ್ಲಿ.ಕೃಷಿ ವಿಜ್ಞಾನಿಗಳು ಜಲ ಕೃಷಿ ತಂತ್ರಜ್ಞಾನದ ಮೂಲಕ ಮಣ್ಣಿಲ್ಲದೇ ಸ್ಟ್ರಾಬೆರಿ ಬೆಳೆದು ಯಶಸ್ಸು ಕಂಡಿದ್ದಾರೆ.

By

Published : Mar 6, 2019, 10:08 PM IST

ಮಣ್ಣಿಲ್ಲದೇ ಸ್ಟ್ರಾಬೆರಿ ಬೆಳೆ

ರುದ್ರಪುರ್​(ಉತ್ತರಾಖಂಡ್​​): ಮಣ್ಣಲ್ಲಿ ಫಲವತ್ತತೆ ಇಲ್ಲ, ಬರಡು ಭೂಮಿ, ಮಳೆ ಆಧಾರಿತ.... ರೈತನ ಬೆಳೆ ನಷ್ಟವಾಗಲು ಮಣ್ಣಲ್ಲಿ ಏನೆಲ್ಲ ಸಮಸ್ಯೆಗಳಿವೆ. ವಿಜ್ಞಾನಿಗಳ ಹೊಸ ಆವಿಷ್ಕಾರದ ಪ್ರಕಾರ ಕೃಷಿಗೆ ಭೂಮಿಯೇ ಬೇಡ.

ಶಾಕ್​ ಆದ್ರಾ, ಇದು ಜಲ ಕೃಷಿ. ಇಲ್ಲಿ ಮಣ್ಣು ಅಮುಖ್ಯ. ಇಂಥ ಒಂದು ಪ್ರಯೋಗ ನಡೆದಿರುವುದು ಉತ್ತರಾಖಂಡ್​ದ ಪಟ್ನಾಗರ್​ನ ಹಲ್ದಿ ಪ್ರದೇಶದಲ್ಲಿ.ಕೃಷಿ ವಿಜ್ಞಾನಿಗಳು ಜಲ ಕೃಷಿ ತಂತ್ರಜ್ಞಾನದ ಮೂಲಕ ಮಣ್ಣಿಲ್ಲದೇ ಸ್ಟ್ರಾಬೆರಿ ಬೆಳೆದು ಯಶಸ್ಸು ಕಂಡಿದ್ದಾರೆ

ಪರ್ವತ ಪ್ರದೇಶದಲ್ಲಿ ಕಂಡು ಬರುವ ಪೈನ್​ ಎಲೆಗಳು ಮತ್ತು ತೆಂಗಿನ ಚಿಪ್ಪುಗಳ ಸಹಾಯದಿಂದ ಸ್ಟ್ರಾಬೆರೆ ಬೆಳೆಯಲು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಗುಡ್ಡುಗಾಡು ಪ್ರದೇಶದಲ್ಲಿರುವ ರೈತರು ಈ ಮೂಲಕ ತಮ್ಮ ಆರ್ಥಿಕತೆ ಹೆಚ್ಚಿಸಿಕೊಳ್ಳಬಹುದಾಗಿದೆ. ಈಗಾಗಲೇ ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದ ರೈತರು ಈ ರೀತಿ ಬೆಳೆ ಬೆಳೆಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಉತ್ತರಾಖಂಡ್​ನಲ್ಲಿ ವಿಜ್ಞಾನಿಗಳು ಈ ಪ್ರಯೋಗ ಮಾಡಿ ಸಕ್ಸಸ್​ ಆಗಿದ್ದಾರೆ.

ಏನು​ ಈ ವಿಧಾನ?
ಈ ವಿಧಾನದಲ್ಲಿ ಸಸ್ಯಗಳಿಗೆ ತೇವಾಂಶವನ್ನು ನೀಡುವ ಪೌಷ್ಠಿಕಾಂಶಗಳನ್ನ ಬೆಳೆ ನಾಟಿ ಮಾಡುವುದಕ್ಕೂ ಮೊದಲೇ ನೀರಿನ ಪೈಪ್​ಗಳಿಗೆ ಸೇರಿಸಲಾಗುತ್ತದೆ. ಖನಿಜ ಪೌಷ್ಟಿಕಗಳು ಇದರಲ್ಲಿದ್ದು, ಸಸ್ಯಗಳು ಬೆಳೆಯಲು ಸಹಕಾರಿಯಾಗುತ್ತದೆ. ಹೈಟ್ರೋಪೋನಿಕ್ಸ್​​ನಿಂದ ಈ ಬೆಳೆಗಳು ಎಲ್ಲ ದ್ರಾವಣಾಂಶಗಳನ್ನು ಪಡೆದುಕೊಳ್ಳುತ್ತವೆ.

ಇನ್ನು ಈ ವಿಧಾನದ ಮೂಲಕ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಕೂಡ ಇರುತ್ತದೆ. ಇದನ್ನ ಅತಿ ಕಡಿಮೆ ನೀರು ಲಭ್ಯವಾಗುವ ಪ್ರದೇಶಗಳಲ್ಲು ಅಳವಡಿಸಿಕೊಳ್ಳಬಹುದಾಗಿದೆ.

ABOUT THE AUTHOR

...view details