ಕರ್ನಾಟಕ

karnataka

ETV Bharat / bharat

120ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕೊಂಡಿ ನಕ್ಸಲರಿಂದ ಧ್ವಂಸ: ಸ್ಥಳೀಯರ ನೆರವಿನೊಂದಿಗೆ ಸೇತುವೆ ದುರಸ್ಥಿ

ಪಡಿತರ ಪೂರೈಕೆ, ವೈದ್ಯಕೀಯ ಸೌಲಭ್ಯ ಮತ್ತು ಗ್ರಾಮಸ್ಥರ ಎಲ್ಲಾ ಇತರ ಮೂಲಭೂತ ಅವಶ್ಯಕತೆಗಳನ್ನು ಈ ರಸ್ತೆಯ ಮೂಲಕವೇ ಪೂರೈಕೆ ಮಾಡಲಾಗುತ್ತಿತ್ತು. ಈ ಕಾರಣಕ್ಕಾಗಿಯೇ ಘಟನೆ ನಂತರ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು ಮತ್ತು ಅರೆಸೈನಿಕ ಪಡೆಗಳು ಕೊರೊನಾ ಲಾಕ್​ಡೌನ್​ ನಡುವೆಯೇ ಸೇತುವೆ ನಿರ್ಮಾಣ ಕಾರ್ಯ ಮಾಡಲು ಮುಂದಾಗಿದ್ದಾರೆ.

By

Published : Apr 9, 2020, 2:47 PM IST

ನಕ್ಷಲರಿಂದ ಧ್ವಂಸವಾಗಿದ್ದ ಸಂಪರ್ಕ ಸೇತುವೆ ನಿರ್ಮಾಣ
ನಕ್ಷಲರಿಂದ ಧ್ವಂಸವಾಗಿದ್ದ ಸಂಪರ್ಕ ಸೇತುವೆ ನಿರ್ಮಾಣ

ಸುಕ್ಮಾ( ಛತ್ತೀಸ್​ಗಡ): ನಕ್ಸಲರು ಸ್ಫೋಟಕ ವಸ್ತುಗಳನ್ನು ಬಳಸಿ ಧ್ವಂಸ ಮಾಡಿದ್ದ ಸೇತುವೆ ನಿರ್ಮಾಣ ಕಾರ್ಯಕ್ಕೆ ಸ್ಥಳೀಯರು ಸಹ ಕೈಜೋಡಿಸಿದ್ದಾರೆ.

ಏಪ್ರಿಲ್ 6 ಮತ್ತು 7 ರ ಮಧ್ಯರಾತ್ರಿ ಮಾವೋವಾದಿ ಕಾರ್ಯಕರ್ತರು, ಡೋರ್ನಪಾಲ್-ಜಾಗರಗುಂಡದ ಸೇತುವೆಯನ್ನು ಸ್ಫೋಟಕ ಬಳಸಿ ಹಾನಿಗೊಳಿಸಿದ್ದರು. ಈ ರಸ್ತೆ ಡಾರ್ನ್‌ಪಾಲ್,ಚಿಂತನಾಲ್,ಜಗರ್‌ಗುಂಡಾ ಉದ್ದಕ್ಕೂ ಇರುವ 120ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕೊಂಡಿಯಾಗಿತ್ತು ಎಂದು ಐಜಿ ಬಸ್ತರ್.ಪಿ ಸುಂದರರಾಜ್ ಹೇಳಿದ್ದಾರೆ.

ಪಡಿತರ ಪೂರೈಕೆ, ವೈದ್ಯಕೀಯ ಸೌಲಭ್ಯ ಮತ್ತು ಗ್ರಾಮಸ್ಥರ ಎಲ್ಲಾ ಇತರ ಮೂಲಭೂತ ಅವಶ್ಯಕತೆಗಳನ್ನು ಈ ರಸ್ತೆಯ ಮೂಲಕವೇ ಪೂರೈಕೆ ಮಾಡಲಾಗುತ್ತಿತ್ತು. ಈ ಕಾರಣಕ್ಕಾಗಿಯೇ ಘಟನೆ ನಂತರ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು ಮತ್ತು ಅರೆಸೈನಿಕ ಪಡೆಗಳು ಕೊರೊನಾ ಲಾಕ್​ಡೌನ್​ ನಡುವೆಯೇ ಸೇತುವೆ ನಿರ್ಮಾಣ ಕಾರ್ಯ ಮಾಡಲು ಮುಂದಾಗಿದ್ದಾರೆ. ಈ ಕಾರ್ಯದಲ್ಲಿ ಗ್ರಾಮಸ್ಥರು ಸಹ ಮುಂದಾಗಿದ್ದಾರೆ ಎಂದು ಐಜಿ ಮಾಹಿತಿ ನೀಡಿದ್ದಾರೆ.

ಈ ಕೆಲಸದಲ್ಲಿ ಭಾಗಿಯಾದ ಗ್ರಾಮಸ್ಥರು ಕೊರೊನಾ ಹಿನ್ನೆಲೆ ಮುಖಕ್ಕೆ ಮಾಸ್ಕ್​ ಹಾಕಿಕೊಂಡೇ ಕೆಲಸ ಮಾಡಿದರು. ಅಮಾನವೀಯ ಮತ್ತು ಅನಗತ್ಯವಾದ ಈ ರೀತಿಯ ಕೆಲಸವನ್ನು ನಕ್ಸಲರು ಯಾಕೆ ಮಾಡುತ್ತಾರೆ ಎಂಬುದು ಯಾರಿಗೂ ತಿಳಿಯದಂತಾಗಿದೆ ಎಂದು ಇದೇ ವೇಳೆ ಐಜಿ ಬಸ್ತರ್​ ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details